ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಕರ್ನಾಟಕ

ಟ್ರಸ್ಟ್ ನಲ್ಲಿ ರಾಜಕೀಯ ಎಂಟ್ರಿಗೆ ಅವಕಾಶ ಕೊಡುವುದಿಲ್ಲ:ಅಶೋಕ್ ರೈ

Published

on

ಟ್ರಸ್ಟ್ ನಲ್ಲಿ ರಾಜಕೀಯ ಎಂಟ್ರಿಗೆ ಅವಕಾಶ ಕೊಡುವುದಿಲ್ಲ:ಅಶೋಕ್ ರೈ

 

ನಾನು ನಡೆಸಿಕೊಂಡು ಬರುತ್ತಿರುವ ರೈ ಚಾರಿಟೇಬಲ್ ಟ್ರಸ್ಟಿನಲ್ಲಿ ರಾಜಕೀಯ ಇಲ್ಲ ,ಇದರಲ್ಲಿ ರಾಜಕೀಯ ಎಂಟ್ರಿಯಾಗಲು ಅವಕಾಶವೇ ಇಲ್ಲ ಎಂದು ಟ್ರಸ್ಟ್ ಮುಖ್ಯಸ್ಥರಾದ ಅಶೋಕ್ ರೈ ಹೇಳಿದರು.ಅವರು ಬೈಪಾಸ್ ಉದಯಗಿರಿ ಸಭಾಂಗಣದಲ್ಲಿ ನಡೆದ ಟ್ರಸ್ಟ್ ಸದಸ್ಯರ ಸಭೆಯಲ್ಲಿ ಮಾತನಾಡಿದರು. ಸಮಾಜ ಸೇವೆ ಹಾಗೂ ಬಡವರ ಸೇವೆ ಮಾಡಬೇಕೆಂಬ ಏಕೈಕ ಉದ್ದೇಶದಿಂದ ಟ್ರಸ್ಟ್ ಆರಂಭ ಮಾಡಿದ್ದೇನೆ. ಸುಮಾರು 22 ಸಾವಿರ ಕುಟುಂಬಗಳಿಗೆ ನನ್ನಿಂದಾದ ನೆರವು ನೀಡಿದ್ದೇನೆ. ಯಾವತ್ತೂ ಟ್ರಸ್ಟನ್ನು ರಾಜಕೀಯಕ್ಮೆ ಬಳಸಿಕೊಂಡಿಲ್ಲ, ಬಳಸುವುದೂ ಇಲ್ಲ ಎಂದು ಹೇಳಿದರು. 10 ವರ್ಷದಿಂದ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡು ಬರುತ್ತಿರುವ ಟ್ರಸ್ಟ್ ವತಿಂದ ಮುಂದಿನ ದಿನಗಳಲ್ಲಿ ಆರೋಗ್ಯ ಮೇಳ, ಉದ್ಯೋಗ ಮೇಳ, ಶಿಕ್ಷಣ ಸೇರಿದಂತೆ ಹಲವು ವಿಚಾರಗಳಲ್ಲಿ ಸಮುದಾಯಕ್ಕೆ ಪ್ರಯೋಜನವಾಗುವ ಕೆಲಸವನ್ನು ಮಾಡಲಿದ್ದೇವೆ. ಸಾರ್ವಜನಿಕರ ಸೇವೆಗಾಗಿ ಶಾಸಕರ ಕಚೇರಿಯಲ್ಲಿ ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗಿದೆ. ನಾನು ಎಲ್ಲರಿಗೂ ಶಾಸಕನಾಗಿದ್ದು ಎಲ್ಲರೂ ನನ್ನ ಕಚೇರಿಗೆ ಬಂದು ತಮ್ಮ ಕೆಲಸವನ್ನು ಮಾಡಿಸಿಕೊಳ್ಳಬಹುದು ಎಂದು ಹೇಳಿದರು.

ಶಾಸಕರಾದ ಅಶೋಕ್ ರೈ ಅಧ್ಯಕ್ಷತೆ ವಹಿಸಿದ್ದರು, ಮುಖ್ಯ ಅಥಿತಿಗಳಾಗಿ ಅಕ್ರಮಸಕ್ರಮ ಸಮಿತಿ ಸದಸ್ಯರಾದ ಮಹಮದ್ ಬಡಗನ್ನೂರು, ನಿರಂಜನ್ ರೈ ಮಠಂತಬೆಟ್ಟು, ಕೃಷ್ಣಪ್ರಸಾದ್ ಬೊಳ್ಳಾವು ಉಪಸ್ಥಿತರಿದ್ದರು. ಕೃಷ್ಣಪ್ರಸಾದ್ ಆಳ್ವ ಸ್ವಾಗತಿಸಿ, ರಾಜೇಂದ್ರ ರೈ ಪುಣಚ ಮತ್ತು ಲಿಂಗಪ್ಪ ಕಾರ್ಯಕ್ರಮ ನಿರ್ವಹಣೆ ಹಾಗೂ ಯೋಗೀಶ್ ಸಾಮಾನಿ ಮಠಂತಬೆಟ್ಟು ವಂದಿಸಿದರು.

Continue Reading
Click to comment

Leave a Reply

Your email address will not be published. Required fields are marked *

Advertisement