ನಮ್ಮೊಂದಿಗೆ ಸಂಪರ್ಕ ಸಾಧಿಸಿ

ದಕ್ಷಿಣ ಕನ್ನಡ

ಪುತ್ತೂರುನಲ್ಲಿ ದಾಖಲೆಯ ಮಿಲಾದ್ ಸಮಾವೇಶ

Published

on

ಪುತ್ತೂರು : ಪ್ರವಾದಿ ಮೊಹಮ್ಮದ್ ಪೈಗಂಬರ್ ಅವರ ಜನ್ಮದಿನದ ಅಂಗವಾಗಿ ದಕ್ಷಿಣ ಕನ್ನಡ ಜಿಲ್ಲಾ ಮುಸ್ಲಿಂ ಯುವಜನ ಪರಿಷತ್ತು ಮತ್ತು ಈದ್ ಮಿಲಾದ್ ಸಮಿತಿ ಪುತ್ತೂರು ಇದರ ಜಂಟಿ ಆಶ್ರಯದಲ್ಲಿ 31ನೇ ವರ್ಷದ ಮಿಲಾದ್ ಸಮಾವೇಶ ಮತ್ತು ವಾಹನ ಜಾತ ಸೆ. 28ರಂದು ಸಂಜೆ ಪುತ್ತೂರಿನಲ್ಲಿ ನಡೆಯಿತು.

ಸಂಜೆ ಕಬಕ ಪೇಟೆಯಿಂದ ಪುತ್ತೂರು ಕಿಲ್ಲೆ ಮೈದಾನ ತನಕ ನಡೆದ ವಾಹನ ಜಾತವನ್ನು, ಕಬಕದಲ್ಲಿ ಟೈಲರ್ ಇಸ್ಮಾಯಿಲ್ ಸಾಹೇಬ್ ಅವರು ಉದ್ಘಾಟಿಸಿದರು. ಈಸ್ಟರ್ನ್ ಗ್ರೂಪ್ ನ ಮಾಲಕ ಖಲಂದರ್ ಧ್ವಜ ಹಸ್ತಾಂತರ ಮಾಡುವ ಮೂಲಕ, ಅಬ್ದುಲ್ ಹಮೀದ್ ಬಾಖವಿ ದುವಾ ಆಶೀರ್ವಾಚನ ನೀಡಿ, ವಾಹನ ಜಾತಕ್ಕೆ ಚಾಲನೆ ನೀಡಿದರು. ಕಬಕ ಜಂಕ್ಷನ್ ನಿಂದ ಹೊರಟ,ಆಕರ್ಷನ ವಾಹನ ಜಾತ, ಕಬಕ, ಪೋಲ್ಯ, ಮುರ, ನೆಹರು ನಗರ, ಬೋಲ್ವಾರ್, ಪುತ್ತೂರು ಕೆಎಸ್ಆರ್ಟಿಸಿ ನಿಲ್ದಾಣವಾಗಿ, ದರ್ಬೆ ಬೈಪಾಸ್ ಮೂಲಕ ಕಿಲ್ಲೆ ಮೈದಾನದಲ್ಲಿ ಬಹಳ ಆಕರ್ಷಿಣವಾಗಿ ಸಮಾವೇಶಗೊಂಡಿತು. ಈ ಜಾತ ದಲ್ಲಿ ನೂರಾರು ವಾಹನಗಳು, ಸಾವಿರಾರು ಮಂದಿ ಪಾಲ್ಗೊಂಡಿದ್ದರು.

Continue Reading
Click to comment

Leave a Reply

Your email address will not be published. Required fields are marked *

Advertisement