ನಮ್ಮೊಂದಿಗೆ ಸಂಪರ್ಕ ಸಾಧಿಸಿ

ದಕ್ಷಿಣ ಕನ್ನಡ

ವಸ್ತ್ರ ವಿತರಣೆ ನಡೆಯುವ ಕಾರ್ಯಕ್ರಮಕ್ಕೆ ಗ್ರಾಮಾಂತರದ ಜನರನ್ನು ಆಹ್ವಾನಿಸಲು ಗ್ರಾಮ ಭೇಟಿ ಕಾರ್ಯಕ್ರಮ

Published

on

  • ಶಾಸಕರಾದ ಅಶೋಕ್ ರೈ ಯವರ ಸಮಾಜಮುಖಿ ಕೆಲಸಕ್ಕೆ ಕ್ಷೇತ್ರ ದಿಂದ ಉಚಿತ ಬಸ್ ನ ವ್ಯವಸ್ಥೆ :ಕುಕ್ಕಾಜೆ ಶ್ರೀ ಕೃಷ್ಣ ಗುರೂಜಿ

 

ವಿಟ್ಲ ಶಾಸಕರಾದ ಸನ್ಮಾನ್ಯ ಶ್ರೀ ಅಶೋಕ್ ಕುಮಾರ್ ರೈ ಯವರ ಸಾರಥ್ಯದಲ್ಲಿ ರೈ ಎಸ್ಟೇಟ್ ಎಜುಕೇಶನ್ & ಚಾರಿಟೇಬಲ್ ಟ್ರಸ್ಟ್ ಮುಖಾಂತರ, ದೀಪಾವಳಿಯ ಪ್ರಯುಕ್ತ ವಸ್ತ್ರ ವಿತರಣೆ, ಗೂಡು ದೀಪ ಸ್ಪರ್ಧೆ, ಟ್ರಸ್ಟ್ ನ ಪಲಾನುಭವಿಗಳ ಸಮಾವೇಶ ನಡೆಯುವ ಕಾರ್ಯಕ್ರಮಕ್ಕೆ, ಗ್ರಾಮಾಂತರದ ಜನರನ್ನು ಆಹ್ವಾನಿಸಲು ಗ್ರಾಮ ಬೇಟಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ,ಈ ಕಾರ್ಯಕ್ರಮದ ಉದ್ಘಾಟನೆಯನ್ನು ಮಾಣಿಲ ಗ್ರಾಮದ ಕುಕ್ಕಾಜೆ ಶ್ರೀ ಕಾಳಿಕಾಂಬ ಆಂಜನೇಯ ಕ್ಷೇತ್ರ ದಲ್ಲಿ, ಕ್ಷೇತ್ರದ ಧರ್ಮದರ್ಶಿ ಶ್ರೀ ಕೃಷ್ಣ ಗುರೂಜಿ ಯವರು ದೀಪ ಪ್ರಜ್ವಲನೆ ಮಾಡುವ ಮುಖಂತರ ಉದ್ಘಾಟಿಸಿದರು.

 

ಉದ್ಘಾಟಿಸಿ ಮಾತನಾಡಿದ ಗುರೂಜಿ ಯವರು ಅಶೋಕ್ ರೈ ಯವರ ಸಮಾಜಮುಖಿ ಕೆಲಸವಾದ ವಸ್ತ್ರ ವಿತರಣೆ ಕಾರ್ಯಕ್ರಮಕ್ಕೆ ಹೋಗುವ ಕುಕ್ಕಾಜೆ ಗ್ರಾಮಸ್ಥರಿಗೆ ನಮ್ಮ ಕ್ಷೇತ್ರ ದಿಂದ ಒಂದು ಉಚಿತ ಬಸ್ ನೀಡುತ್ತೆನೆ ಎಂದು ತಿಳಿಸಿದರು.ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಟ್ರಸ್ಟ್ ನ ಕಾರ್ಯಧ್ಯಕ್ಷರಾದ ಸುದೇಶ್ ಶೆಟ್ಟಿಯವರು ವಯಿಸಿದರು. ಸಭೆ ಯಲ್ಲಿ ಮಾಣಿಲ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಧರ್ ಬಾಲೆಕಲ್ಲು , ಕೋಡಿಂಬಾಡಿ ಗ್ರಾಮ ಪಂಚಾಯತಿಯ ಉಪಾಧ್ಯಕ್ಷರಾದ ಜಯಪ್ರಕಾಶ್ ಬದಿನಾರ್, ಟ್ರಸ್ಟ್ ನ ಪ್ರಮುಖರಾದ ನಿಯಲ್ ಶೆಟ್ಟಿ,ಪ್ರಚಾರ ಸಮಿತಿ ಸದಸ್ಯರಾದ ಚಂದ್ರಶೇಖರ್ ಕಲ್ಲಗುಡ್ಡೆ, ಸ್ಥಳೀಯ ಪ್ರಮುಖರಾದ ಜಯರಾಮ್ ಬಲ್ಲಾಳ್, ಮೊಯಿದು ಕುಟ್ಟಿ, ಪ್ರವೀಣ್,ಪಂಚಾಯತ್ ಸದಸ್ಯರಾದ ವಿಷ್ಣು ಭಟ್ ಮತ್ತು ಅನೇಕ ಗ್ರಾಮಸ್ಥರು ಉಪಸ್ಥಿತರಿದ್ದರು.

Continue Reading
Click to comment

Leave a Reply

Your email address will not be published. Required fields are marked *

Advertisement