ನಮ್ಮೊಂದಿಗೆ ಸಂಪರ್ಕ ಸಾಧಿಸಿ

ದಕ್ಷಿಣ ಕನ್ನಡ

ನ.13ರಂದು ವಸ್ತ್ರ ವಿತರಣಾ ಕಾರ್ಯಕ್ರಮದ ಪೂರ್ವಭಾವಿ ಸಭೆ

Published

on

ಪುತ್ತೂರು : ಪುತ್ತೂರಿನ ಗೌರವಾನ್ವಿತ ಮಾನ್ಯ ಶಾಸಕರಾದ ಶ್ರೀ ಅಶೋಕ್ ಕುಮಾರ್ ರೈ ನೇತೃತ್ವದಲ್ಲಿ “ರೈ ಎಸ್ಟೇಟ್ ಎಜ್ಯುಕೇಶನಲ್ & ಚಾರಿಟೇಬಲ್ ಟ್ರಸ್ಟ್ (ರಿ) ಪುತ್ತೂರು” ಇದರ ವತಿಯಿಂದ ನ.13 ರಂದು ಪುತ್ತೂರು-ಕೊಂಬೆಟ್ಟುವಿನ ತಾಲೂಕು ಕ್ರಿಡಾಂಗಣದಲ್ಲಿ ದೀಪಾವಳಿಯ ಪ್ರಯುಕ್ತ ನಡೆಯಲಿರುವ ವಸ್ತ್ರ ವಿತರಣಾ ಕಾರ್ಯಕ್ರಮ ನಡೆಯಲಿರುವ ಪುರ್ವಭಾವಿ ಸಭೆಯು ಮುಂಡೂರು ಸೇವಾ ಸಹಕಾರಿ ಸಂಘ ಸಭಾಂಗಣದಲ್ಲಿ ಇಂದು ನಡೆಯಿತು ಟ್ರಸ್ಟಿನ ಪ್ರಮುಖರಾದ ಕೃಷ್ಣಪ್ರಸಾದ್ ಶಿವಪ್ರಸಾದ್ ದಾಮೋದರ ಶೆಟ್ಟಿ ಯೋಗೀಶ್ ಸಾಮಾನಿ ಅಗಮಿಸಿದ ಸಮಾರಂಭದ ಬಗ್ಗೆ ಮಾಹಿತಿ ನೀಡಿದರು.

ಈ ಕಾರ್ಯಕ್ರಮದಲ್ಲಿ ಮುಂಡೂರು ಸೇವಾ ಸಹಕಾರಿ ಸಂಘದ ನಿರ್ದೇಶಕರಾದ ಶಿವನಾಥ ರೈ, ಮಹಾಲಿಂಗ ನಾಯ್ಕ, ಯಾಕುಬ್ ಮುಲಾರ್, ಇಬ್ರಾಹಿಂ ಮುಲಾರ್, ಸಂಜೀವ ಪುಜಾರಿ ಕುರೆಮಜಲು, ಹಾಗೂ ಹಿರಿಯರಾದ ಅಣ್ಣಿ ಪುಜಾರಿ, ತಿಮ್ಮಪ್ಪ ನಾಯ್ಕ ಬಂಡಿಕ್ಕಾನ ಮತ್ತು ಪುತ್ತಬ್ಬ ಮುಲಾರ್ ಹಾಗೂ ಹಲವಾರು ಗಣ್ಯರು ಚಂದ್ರಶೇಖರ ಕಲ್ಲಗುಡ್ಡೆ, ಮಹೇಶ್ ಚಂದ್ರ ಸಾಲಿಯಾನ್, ಆಸಿಫ್ ಕಂಪ, ಅನೀಸ್ ಕಂಪ, ಅಶ್ರಫ್ ಮುಲಾರ್, ಸುಲೈಮಾನ್ ಮುಲಾರ್, ರಜಾಕ್ ಮುಲಾರ್, ಇಸ್ಮಾಯಿಲ್ ಕೊಂಬಳ್ಳಿ ಆಶಾಲತಾ ಕೆಮ್ಮಿಂಜೆ ಹಾಗೂ ಮುಂತಾದವರು ಉಪಸ್ಥಿತರಿದ್ದರು.
ಹಾಗೂ ಮಹಿಳಾ ಘಟಕದ ಪದಾಧಿಕಾರಿಗಳು ಹಾಗೂ ಸದಸ್ಯರುಗಳು ಉಪಸ್ಥಿತರಿದ್ದರು.

Continue Reading
Click to comment

Leave a Reply

Your email address will not be published. Required fields are marked *

Advertisement