ನಮ್ಮೊಂದಿಗೆ ಸಂಪರ್ಕ ಸಾಧಿಸಿ

ದಕ್ಷಿಣ ಕನ್ನಡ

ನ. 29 -30:ಅಂಬಿಕಾ ವಿದ್ಯಾಲಯ ಸಿ.ಬಿ. ಎಸ್.ಇ ನಲ್ಲಿ ದಶಾಂಬಿಕೋತ್ಸವದ ಅಂಗವಾಗಿ ಪ್ರತಿಭಾ ತರಂಗಿಣೀ 2023-2024

Published

on

 

ಪುತ್ತೂರು: ನವಂಬರ್ 29,30 ರಂದು ಅಂಬಿಕಾ ವಿದ್ಯಾಲಯ( ಸಿ ಬಿ ಎಸ್ ಇ) ನಟ್ಟೋಜ ಫೌಂಡೇಶನ್ ಟ್ರಸ್ಟ್ ಪ್ರಾಯೋಜಿತ ಬಪ್ಪಳಿಗೆ, ಪುತ್ತೂರು ನಲ್ಲಿ ದಶಾಂಬಿಕೋತ್ಸವದ ಅಂಗವಾಗಿ ತರಂಗಿಣೀ 2023- 24,ಪ್ರತಿಭೋತ್ಸವದ ಕಾರ್ಯಕ್ರಮದ ಉದ್ಘಾಟನೆಯು 29 ನವಂಬರ್ 2023 ಬುಧವಾರ ಸಾಯಂಕಾಲ 3ಕ್ಕೆ ಶ್ರೀ ಶಂಕರ ಸಭಾಭವನದಲ್ಲಿ ಪುತ್ತೂರು ಶಾಸಕರಾದ ಶ್ರೀ ಅಶೋಕ್ ಕುಮಾರ್ ರೈ ಅವರು ಉದ್ಘಾಟನೆ ಗೊಳಿಸಲಿದ್ದಾರೆ. ಶ್ರೀ ಸುಬ್ರಮಣ್ಯ ನಟ್ಟೋಜ ಕಾರ್ಯದರ್ಶಿಗಳು ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆ ಪುತ್ತೂರು ಇವರ ಅಧ್ಯಕ್ಷತೆಯಲ್ಲಿ,ಮುಖ್ಯ ಅತಿಥಿ ಡಾ.ಮಹಾಬಲೇಶ್ವರ ರಾವ್ ಸಮನ್ವಯಾಧಿಕಾರಿ ಡಾ ಟಿ ಎಮ್ ಎ ಪೈ ಶಿಕ್ಷಣ ಮಹಾವಿದ್ಯಾಲಯ ಉಡುಪಿ ಭಾಗವಹಿಸಲಿರುತ್ತಾರೆ.

30ನೇ ನವೆಂಬರ್ 2023ನೇ ಗುರುವಾರ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ನಡೆಯಲಿದೆ ಅಧ್ಯಕ್ಷತೆಯನ್ನು ಶ್ರೀಮತಿ ರಾಜಶ್ರೀ ಎಸ್ ನಟ್ಟೋಜ, ಕೋಶಾಧಿಕಾರಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆ ಗಳು ಪುತ್ತೂರು, ಮತ್ತು ಮುಖ್ಯ ಅತಿಥಿಯಾಗಿ ಶ್ರೀ ಕೆ ಬಾಲಕೃಷ್ಣ ಭಟ್, ಮಾಜಿ ಎಂ ಎಲ್. ಸಿ ಕರ್ನಾಟಕ ಘನ ಸರಕಾರ ಇವರು ಭಾಗವಹಿಸಲಿದ್ದಾರೆ ಎಂದು ಸಂಸ್ಥೆಯ ಮುಖ್ಯಸ್ಥರು ತಿಳಿಸಿರುತ್ತಾರೆ

Continue Reading
Click to comment

Leave a Reply

Your email address will not be published. Required fields are marked *

Advertisement