ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಮಾಹಿತಿ

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ (ರಿ.), ಪುತ್ತೂರು. ಘಟಕದ 2023-24ರ ಪದಗ್ರಹಣ ಸಮಾರಂಭ

Published

on

ಪುತ್ತೂರು: ದ 17, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ (ರಿ.), ಪುತ್ತೂರು ಘಟಕದ 2023/24ರ ಪದಗ್ರಹಣ ಸಮಾರಂಭವು ದಿನಾಂಕ 16-12-2023 ರಂದು ಶನಿವಾರ ಸಂಜೆ ಗಂಟೆಗೆ4.00ಕ್ಕೆ ಸರಿಯಾಗಿ ಪುತ್ತೂರು ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಸಭಾಭವನದಲ್ಲಿ ಅಧ್ಯಕ್ಷರಾದ ಉಮೇಶ್ ಬಾಯಾರ್ ರವರ ಅಧ್ಯಕ್ಷತೆಯಲ್ಲಿ ಬ್ರಹ್ಮಶ್ರೀ ನಾರಾಯಣ ಗರುಸ್ವಾಮಿ ಸಭಾಭವನದಲ್ಲಿ ನಡೆಯಿತು.ಘಟಕದ ಮಹಿಳಾ ನಿರ್ದೇಶಕಿ ನವ್ಯ ದಾಮೋದರ್ ಬಂದಂತಹ ಎಲ್ಲರನ್ನು ಸ್ವಾಗತಿಸಿದರು.ತಾಲೂಕು ಬಿಲ್ಲವ ಸಂಘದ ಪ್ರಧಾನ ಕಾರ್ಯದರ್ಶಿಯಾದ ಚಿದಾನಂದ ಸುವರ್ಣರವರು ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು. ಘಟಕದ ಕಾರ್ಯಕ್ರಮದ ಬಗ್ಗೆ ಹೀತನುಡಿಗಳನಾಡಿ ನೂತನ ಪದಧಿಕಾರಿಗಳಿಗೆ ಶುಭಾರೈಸಿದರು.ಕಾರ್ಯದ ರ್ಶಿ ಬಿ.ಅಣ್ಣಿಪೂಜಾರಿ ಯವರು ವಾರ್ಷಿಕ ವರದಿಯನ್ನು ಸಭೆಯ ವಾಚಿಸಿದರು. ಚುನವಾಣಾ ಸಮಿತಿಯ ಸದಸ್ಯರಾದ ಬಾಬುಪೂಜಾರಿ ಇದ್ಪಾಡಿಯವರು 2023/24ನೇ ಸಾಲಿಗೆ ಅಯ್ಕೆಯಾದ ನೂತನ ಪದಧಿಕಾರಿಗಳ ಹೆಸರನ್ನು ಸಭೆಯ ಮುಂದಿಟ್ಟರು.ಯುವವಾಹಿನಿ (ರಿ.) ಕೇಂದ್ರ ಸಮಿತಿ ಮಂಗಳೂರು ಇದರ ಅಧ್ಯಕ್ಷರಾದ ರಾಜೇಶ್ ಬಿ ರವರು ಪ್ರತಿಜ್ಞಾವಿಧಿಯನ್ನು ಬೋಧಿಸಿ.ನೂತನ ತಂಡಕ್ಕೆ ಶುಭ ಹಾರೈಸಿದರು.

ಮುಖ್ಯ ಅತಿಥಿಗಳಾಗಿದ್ದ ಉಪ್ಪಿನಂಗಡಿ ಕರ್ನಾಟಕ ಬ್ಯಾಂಕಿನ ಮ್ಯಾನೇಜರ್ ಶ್ರೀ ಹರೀಶ್ ಪೂಜಾರಿ ಉದ್ಯಂಗಳ ಮಾತನಾಡಿ ಘಟಕದಲ್ಲಿ ಒಳ್ಳೆಯ ಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ನಂತರ ಘಟಕದಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ನನ್ನಿಂದಾಗುವ ಸಹಕಾರ ಕೋಡುತ್ತೇನೆಂದು ಶುಭಾರೈಸಿದರು . ಕೇಂದ್ರ ಸಮಿತಿಯ ಸಂಘಟಣಾ ಕಾರ್ಯದರ್ಶಿಯಾದ ಚಂದ್ರಶೇಖರ ಸನಿಲ್ ರವರು ಮಾತನಾಡಿ ನನ್ನೊಂದಿಗೆ ಒಳ್ಳೆಯ ಕಾರ್ಯಕ್ರಮವನ್ನು ನೀಡುತ್ತಾ ಬಂದಿರುವಿರಿ ಇನ್ನು ಮುಂದೆಯೂ ಒಳ್ಳೆಯ ಕಾರ್ಯಕ್ರಮ ನೀಡುತ್ತಾ ಬರಲೆಂದು ಶುಭಾರೈಸಿದರು.


ಕೇಂದ್ರ ಸಮಿತಿಯ ಅಧ್ಯಕ್ಷರಾದ ರಾಜೇಶ್ ಬಿ ಹಾಗೂ ಕೇಂದ್ರ ಸಮಿತಿಯ ಸಂಘಟಣಾ ಕಾರ್ಯದರ್ಶಿಯಾದ ಚಂದ್ರಶೇಖರ ಸನಿಲ್ ಇವರಿಗೆ ಸನ್ಮಾನಿಸಲಾಯಿತು.ಸುಳ್ಯ ಘಟಕದ ನಿಕಟಪೂರ್ವ ಅಧ್ಯಕ್ಷರಾದ ಲೊಹೀತ್ ರೆಂಜಾಳ ಹಾಗೂ ಕಡಬ ಘಟಕದ ಅಧ್ಯಕ್ಷರಾದ ಸುಂದರ ಪೂಜಾರಿ ಕೇಂದ್ರ ಸಮಿತಿಯ ಕ್ರೀಡಾ ನಿರ್ದೇಶಕರಾದ ಶೀವಪ್ರಸಾದ್ ನೂಚಿಲ ಇವರನ್ನು ಶಾಲು ಹಾಕಿ ಗೌರವಿಸಲಾಯಿತು.



ಅಧ್ಯಕ್ಷರಾದ ಉಮೇಶ್ ಬಾಯಾರ್ ಹೀತಾನುಡಿಗಳನಾಡಿ ನನ್ನೊಂದಿಗೆ ಪ್ರತಿಯೊಂದು ಕಾರ್ಯಕ್ರಮದಲ್ಲಿ ಸಹಕರಿಸಿದ ಮಾಜಿ ಅಧ್ಯಕ್ಷರುಗಳಿಗೂ ಹಾಗೂ ಘಟಕದ ಪದಧಿಕಾರಿಗಳಿಗೂ ಸರ್ವ ಸದಸ್ಯರುಗಳಿಗೂ ಶುಭಾರೈಸಿದರು.ಚುನವಾಣಾ ಸಮಿತಿಯ ಸದಸ್ಯರಾದ ಬಾಬುಪೂಜಾರಿ ಇದ್ಪಾಡಿಯವರನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು.ನೂತನಅಧ್ಯಕ್ಷರಾದ ಜಯರಾಮ ಬಿ ಎನ್ ಇವರು ಮಾತನಾಡಿ ಇನ್ಮೊಂದೆಯು ಒಳ್ಳೆಯ ಕಾರ್ಯಕ್ರಮಗಳನ್ನು ಮಾಡಲು ನಿಮ್ಮೆಲ್ಲರ ಸಹಕಾರ ಅತೀ ಅಗತ್ಯವೆಂದು ಎಲ್ಲರಲ್ಲೂ ಸಹಕಾರ ಕೋರಿದರು.2022/23 ನೇ ಸಾಲಿನಲ್ಲಿ ಪದಾಧಿಕಾರಿಗಳಿಗೆ ಹಾಗೂ ನಿರ್ದೇಶಕರುಗಳಿಗೆ ಅದ್ಯಕ್ಷರು ಸ್ಮರಣಿಕೆ ನೀಡಿ ಗೌರವಿಸಿದರು.ನೂತನ ಕಾರ್ಯದರ್ಶಿಯಾದ ಸಮಿತ್ ಪಿ ಯವರು ಧನ್ಯವಾದ ಸಮರ್ಪಿಸಿದರು.

ಯುವವಾಹಿನಿ(ರಿ.)ಪುತ್ತೂರು ಘಟಕದ 2023/24 ನೇ ಸಾಲಿನ ಪದಾಧಿಕಾರಿಗಳ ಹಾಗೂ ನಿರ್ದೇಶಕರುಗಳ ಪಟ್ಟಿ :
1)ಅಧ್ಯಕ್ಷರು:ಜಯರಾಮ ಬಿ ಎನ್.
2)ಉಪಾಧ್ಯಕ್ಷರು: ಬಿ ಅಣ್ಣಿ ಪೂಜಾರಿ.
3)ಕಾರ್ಯದರ್ಶಿ :ಸಮಿತ್ ಪಿ.
4)ಜೊತೆ ಕಾರ್ಯದರ್ಶಿ:ಯತೀಶ್ ಬಲ್ನಾಡು.
5) ಕೋಶಾಧಿಕಾರಿ:ಶರತ್ ಸಾಲ್ಯಾನ್ ದೋಳ.
6)ವ್ಯಕ್ತಿತ್ವ ವಿಕಸನ ನಿರ್ದೇಶಕರು:ಉಮೇಶ.
7)ಕ್ರೀಡಾ ನಿರ್ದೇಶಕರು:ಲೋಹಿತ್ ಕೆ.
8) ಆರೋಗ್ಯ ನಿರ್ದೇಶಕರು:ಮೋಹನ ಎಸ್.
9) ಸಮಾಜ ಸೇವೆ ನಿರ್ದೇಶಕರು:ಗಣೇಶ್ ಸುವರ್ಣ.
10) ಕಲೆ ಮತ್ತು ಸಾಹಿತ್ಯ ನಿರ್ದೇಶಕರು:ಶಿವಪ್ರಸಾದ್.
11) ಸಾಂಸ್ಕೃತಿಕ ನಿರ್ದೇಶಕರು:ಅಭಿಷೇಕ್ ಕೋಟ್ಯಾನ್.
12) ಉದ್ಯೋಗ ಹಾಗೂ ಭವಿಷ್ಯ ನಿರ್ಮಾಣ ನಿರ್ದೇಶಕರು:ಅವಿನಾಶ್ ಹಾರಾಡಿ.
13)ನಾರಾಯಣ ಗುರುಗಳ ತತ್ವಾದರ್ಶಗಳ ಪ್ರಚಾರ ಹಾಗೂ ಅನುಷ್ಟಾನ ನಿರ್ದೇಶಕರು:ದಾಮೋದರ.
14) ವಿಧ್ಯಾರ್ಥಿ ಸಂಘಟನಾ ನಿರ್ದೇಶಕರು:ದೀಕ್ಷಿತ್ ಕುಮಾರ್ ಐ.
15) ಪ್ರಚಾರ ನಿರ್ದೇಶಕರು:ನವ್ಯ ದಾಮೋದರ
16) ಮಹಿಳಾ ಸಂಘಟನೆ ನಿರ್ದೇಶಕರು:ಪ್ರಿಯಾಶ್ರೀ ಯೆಚ್.
17) ವಿದ್ಯಾನಿಧಿ ನಿರ್ದೇಶಕರು:ರವೀಂದ್ರ ಕೆ.
18)ಸಂಘಟನಾ ಕಾರ್ಯದರ್ಶಿಗಳು:ಪ್ರಿಯಾಶ್ರೀ.ಸತೀಶ್,ಸುನಿಲ್ ಐ,ಹರೀಶ್ ಎಂ ಕೆ,ಭವಿತ್,ದೀಕ್ಷಿತ್ ಬಿ ಆರ್,
ಶ್ರದ್ದಾ.

Continue Reading
Click to comment

Leave a Reply

Your email address will not be published. Required fields are marked *

Advertisement