ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಅಭಿನಂದನೆ

ಶಾಲಾ ಮಕ್ಕಳ ಮತ್ತು ಸಾರ್ವಜನಿಕ ದಾರಿಯನ್ನು ಸ್ವಚ್ಛಗೊಳಿಸಿ ಪ್ರಸಂಸೆಗೆ ಒಳಗಾದ ಬಿಳಿಯೂರು ಗ್ರಾಮಸ್ಥರು.

Published

on

ಬಂಟ್ವಾಳ.ಜ 11, ಬಂಟ್ವಾಳ ತಾಲೂಕು ಬಿಳಿಯೂರು ಗ್ರಾಮದ ಕೋಡ್ಲೆ ಪರಿಸರದಲ್ಲಿ ಶಾಲಾ ಮಕ್ಕಳಿಂದ ತ್ಯಾಜ್ಯ ಹೆಕ್ಕಿಸಿದ ಮಹಿಳೆಯೋರ್ವರ ಮೇಲೆ ಉಪ್ಪಿನಂಗಡಿ ಠಾಣೆಯಲ್ಲಿ ದೂರು ದಾಖಲಾಗಿರುವ ಬೆನ್ನಲ್ಲೇ, ಶಾಲಾ ಮಕ್ಕಳ ಪೋಷಕರ ಸಹಿತವಾಗಿ ಆ ಭಾಗದ ಗ್ರಾಮಸ್ಥರು ಸ್ವತಃ ತಾವೇ, ಸರಕಾರಿ ಪ್ರಾಥಮಿಕ ಶಾಲೆ ಮತ್ತು ಪ್ರೌಢ ಶಾಲೆಯನ್ನು ಸಂಪರ್ಕಿಸುವ ಮಾಮೂಲಿ ಕಾಲು ದಾರಿಯುದ್ಧಕ್ಕೂ ಕೋಡ್ಲೆ ಪ್ರದೇಶವನ್ನು ಒಳಗೊಂಡಂತೆ ಸಂಪೂರ್ಣ ಶುಚಿ ಗೊಳಿಸಿದರು.


ಮುಳ್ಳು, ಗಿಡಗಂಟಿ ಹಾಗೂ ಹುಲ್ಲಿನಿಂದ ಸಂಪೂರ್ಣ ಮುಚ್ಚಿಕೊಂಡಿದ್ದ ಕಾಲುದಾರಿಯನ್ನು ಹುಲ್ಲು ಕತ್ತರಿಸುವ ಯಂತ್ರದ ಸಹಾಯದಿಂದ ಶುಚಿಗೋಳಿಸುವುದರ ಜತೆಗೆ ಕೊಳೆತ ತ್ಯಾಜ್ಯ ಪದಾರ್ಥಗಳನ್ನು ತೆಗೆದು ತೆರವು ಗೊಳಿಸಿದರು. 40ಕ್ಕೂ ಮಿಕ್ಕಿ ಆ ಭಾಗದ ಪುರುಷರು ಮತ್ತು ಮಹಿಳೆಯರು ಸ್ವಯಂ ಪ್ರೇರಿತವಾಗಿ ಈ ಕಾರ್ಯದಲ್ಲಿ ಪಾಲ್ಗೊಂಡು ಶಾಲಾ ಮಕ್ಕಳ, ಹಾಲು ಉತ್ಪಾದಕರ ಹಾಗೂ ಒಟ್ಟಿನಲ್ಲಿ ಸಾರ್ವಜನಿಕರಿಗೆ ಸುಗಮ ಸಂಚಾರವನ್ನು ಕಲ್ಪಿಸಿದರು.

Continue Reading
Click to comment

Leave a Reply

Your email address will not be published. Required fields are marked *

Advertisement