ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಅಭಿನಂದನೆ

ಸಂತ ಫಿಲೋಮಿನಾ ಕಾಲೇಜಿನ MSW ವಿದ್ಯಾರ್ಥಿಗಳಿಂದ ಪಾಪೆಮಜಲು ಪ್ರೌಢ ಶಾಲೆಯಲ್ಲಿ ಮಾನಸಿಕ ಆರೋಗ್ಯ ಮತ್ತು ಮಕ್ಕಳ ರಕ್ಷಣಾ ಕಾಯ್ದೆ ಬಗ್ಗೆ ಅರಿವು ಕಾರ್ಯಕ್ರಮ

Published

on

ಪತ್ತೂರು:ಜ 18, ಸಂತ ಫಿಲೋಮಿನಾ ಕಾಲೇಜಿನ ಸಮಾಜಕಾರ್ಯ ವಿಭಾಗ ಮತ್ತು ಸರಕಾರಿ ಪ್ರೌಢಶಾಲೆ ಪಾಪೆಮಜಲು ಇದರ ಜಂಟಿ ಆಶ್ರಯದಲ್ಲಿ ವಿದ್ಯಾರ್ಥಿಗಳಿಗೆ ಮಾನಸಿಕ ಆರೋಗ್ಯ ಹಾಗೂ ಮಕ್ಕಳ ರಕ್ಷಣಾ ಕಾಯ್ದೆಗಳ ಬಗ್ಗೆ ಅರಿವು ಕಾರ್ಯಕ್ರಮ ಪಾಪೆಮಜಲು ಪ್ರೌಢಶಾಲೆಯಲ್ಲಿ ದಿನಾಂಕ 10-1-2024 ರಂದು ಶಾಲಾ SDMC ಅಧ್ಯಕ್ಷರು ಶ್ರೀ ಇಕ್ಬಾಲ್ ರ ಅಧ್ಯಕ್ಷತೆ ಯಲ್ಲಿ ಜರುಗಿತು.

ಮುಖ್ಯ ಅತಿಥಿಗಳಾಗಿ ಶ್ರೀಮತಿ ಮೀನಾಕ್ಷಿ ಉಪಾಧ್ಯಕ್ಷರು ಅರಿಯಡ್ಕ ಗ್ರಾಮ ಪಂಚಾಯಿತ್. ಶ್ರೀ ಮೋನಪ್ಪ ಪೂಜಾರಿ ಮುಖ್ಯೋಪಾಧ್ಯಾಯರು ಸರಕಾರಿ ಫ್ರೌಢ ಶಾಲೆ ಪಾಪೆಮಜಲು ಭಾಗವಹಿಸಿದ್ದರು.ಬಳಿಕ ಮಾತನಾಡಿದ ಶ್ರೀಮತಿ ಮೀನಾಕ್ಷಿ ಉಪಾಧ್ಯಕ್ಷರು ಅರಿಯಡ್ಕ ಗ್ರಾಮ ಪಂಚಾಯಿತ್ ವಿದ್ಯಾರ್ಥಿಗಳಿ ಶುಭಾಶಯ ಕೋರಿದರು. ನಂತರ ಮಾತನಾಡಿದ ಮೋನಪ್ಪ ಪೂಜಾರಿ ಮುಖ್ಯೋಪಾಧ್ಯಾಯರು ಸರಕಾರಿ ಫ್ರೌಢ ಶಾಲೆ ಪಾಪೆಮಜಲು ವಿದ್ಯಾರ್ಥಿಗಳಿಗೆ ಮಾನಸಿಕ ಆರೋಗ್ಯ ಹಾಗೂ ಮಕ್ಕಳ ರಕ್ಷಣಾ ಕಾಯ್ದೆಗಳ ಅರಿವಿನ ಮಹತ್ವದ ಬಗ್ಗೆ ತಿಳಿಸಿದರು




ಸಭೆಯಲ್ಲಿ ಹಾಜರಿದ್ದ ಸಂಪನ್ಮೂಲ ವ್ಯಕ್ತಿಯಾದ ಶ್ರೀಮತಿ ಸೌಮ್ಯ ಆಪ್ತ ಸಮಾಲೋಚಕರು ಇಂಚರ ಫೌಂಡೇಶನ್ ಪುತ್ತೂರು ಇವರು ವಿದ್ಯಾರ್ಥಿಗಳಿಗೆ ಮಾನಸಿಕ ಆರೋಗ್ಯ ಹಾಗೂ ಮಕ್ಕಳ ರಕ್ಷಣಾ ಕಾಯ್ದೆಗಳ ಬಗ್ಗೆ ವಿಸ್ತಾರವಾಗಿ ಮಾಹಿತಿಯನ್ನು ನೀಡಿದರು.ಸಭಾಧ್ಯಕ್ಷತೆಯನ್ನು ವಹಿಸಿದ ಶ್ರೀ ಇಕ್ಬಾಲ್ ಶಾಲಾ SDMC ಅಧ್ಯಕ್ಷರು ಪಾಪೆಮಜಲು ಇವರು ಸಂದರ್ಭೋಚಿತವಾಗಿ ಮಾತನಾಡಿದರು. ಸಭಾಕಾರ್ಯಕ್ರಮವನ್ನು ಪ್ರಥಮ ಸಮಾಜಕಾರ್ಯ ವಿಭಾಗದ ವಿದ್ಯಾರ್ಥಿಗಳಾದ ಸುಬ್ರಹ್ಮಣ್ಯ ಪ್ರಸಾದ್.ಎ ನಿರೂಪಿಸಿದರು.ಸಭೆಯನ್ನು ಮಂಜುನಾಥ್.ಪಿ.ವಿ ಸ್ವಾಗತಿಸಿ,ಅರುಣ್.ಏಫ್ ಯವರು ವಂದಿಸಿದರು.

Continue Reading
Click to comment

Leave a Reply

Your email address will not be published. Required fields are marked *

Advertisement