ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಅಭಿಪ್ರಾಯ

ಕಾಣೆಯಾಗಿದ್ದ ಕಾಣಿಯೂರು ಖಾಸಗಿ ಶಾಲೆಯ ವಿದ್ಯಾರ್ಥಿ ಶ್ರೇಯಸ್ (15 ವ) ಮಂಗಳೂರಿನಲ್ಲಿ ಪತ್ತೆ ಊಹಾಪೋಹಗಳಿಗೆ ತೆರೆ

Published

on

ಮಂಗಳೂರು/ಪುತ್ತೂರು: ಕಾಣಿಯೂರು ಖಾಸಗಿ ಶಾಲೆಯ 8ನೇ ತರಗತಿಯ ವಿದ್ಯಾರ್ಥಿ ಶ್ರೇಯಸ್ (15 ವ) ಮಂಗಳೂರಿನಲ್ಲಿ ಪತ್ತೆಯಾಗಿದ್ದಾನೆ. ಪಂಜದ ಲೋಕನಾಥ್ ಎಂಬವರ ಮಗ ಶ್ರೇಯಸ್ ಜ.23ರಂದು ಬೆಳಿಗ್ಗೆ ಮನೆಯಿಂದ ಶಾಲೆಗೆಂದು ಹೊರಟವನು ಶಾಲೆಗೆ ಹೋಗದೆ ಪುತ್ತೂರು ಬಸ್ಸು ನಿಲ್ದಾಣದಿಂದ ಕಾಣೆಯಾಗಿರುವುದಾಗಿ ವರದಿಯಾಗಿತ್ತು.





ಪಂಜದ ಮನೆಯಿಂದ ಕಾಣಿಯೂರು ಶಾಲೆಗೆ ಬಸ್ಸಿನಲ್ಲಿ ಬರುವ ಶ್ರೇಯಸ್ ಬೆಳಂದೂರುವರೆಗಿನ ಬಸ್‌ಪಾಸ್‌ ಹೊಂದಿದ್ದ. ಬೆಳಂದೂರಿನಿಂದ ಪುತ್ತೂರಿಗೆ ಬಂದ ಶ್ರೇಯಸ್ ಮಂಗಳೂರಿಗೆ ಪ್ರಯಾಣ ಮುಂದುವರೆಸಿದ್ದಾನೆ. ಶಾಲೆಗೆ ಹಾಜರಾಗದೇ ಇದ್ದ ಕಾರಣ ಶಾಲೆಯಿಂದ ಶ್ರೇಯಸ್‌ ಮನೆಗೆ ಕರೆ ಮಾಡಿ ಮಾಹಿತಿ ನೀಡಲಾಗಿತ್ತು. ಈ ವೇಳೆ ಶ್ರೇಯಸ್‌ ಶಾಲೆಗೆ ಹೋಗದೆ ನಾಪತ್ತೆಯಾಗಿರುವುದು ಹೆತ್ತವರ ಗಮನಕ್ಕೆ ಬಂದಿದೆ. ತಕ್ಷಣ ಕಾರ್ಯಪ್ರವರ್ತರಾದ ಹೆತ್ತವರು ಪೊಲೀಸರಿಗೆ ಮಾಹಿತಿ ನೀಡಿ ಶ್ರೇಯಸ್ ಹುಡುಕಾಟ ನಡೆಸಿದ್ದಾರೆ. ಸದ್ಯ ಮಂಗಳೂರಿನ ಬಂದರು ಪ್ರದೇಶದಲ್ಲಿ ಶ್ರೇಯಸ್‌ ಪತ್ತೆಯಾಗಿದ್ದು, ಎಲ್ಲಾ ಊಹಾಪೋಹಗಳಿಗೆ ತೆರೆಬಿದ್ದಿದೆ.

Continue Reading
Click to comment

Leave a Reply

Your email address will not be published. Required fields are marked *

Advertisement