ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಅಭಿನಂದನೆ

SKSSF ದ.ಕ. ಈಸ್ಟ್ ಜಿಲ್ಲಾ 2024-2026 ನೇ ಸಾಲಿನ ನೂತನ ಸಮಿತಿ ಅಸ್ತಿತ್ವಕ್ಕೆ

Published

on

ಮಾಣಿ : SKSSF ದ.ಕ. ಈಸ್ಟ್ ಜಿಲ್ಲಾ ಸಮಿತಿಯ ವಾರ್ಷಿಕ ಮಹಾಸಭೆ ದಿನಾಂಕ 14/2/2024 ಬುಧವಾರ ಬೆಳಿಗ್ಗೆ 10.30 ಕ್ಕೆ ಸರಿಯಾಗಿ ನೇರಳಕಟ್ಟೆಯ ಇಂಡಿಯನ್ ಆಡಿಟೋರಿಯಂನಲ್ಲಿ ಪ್ರೆಸಿಡೆಂಟ್ ಬಹು. ತಾಜುದ್ದೀನ್ ರಹ್ಮಾನಿ ಉಸ್ತಾದರ ಅಧ್ಯಕ್ಷ ತೆಯಲ್ಲಿ ಜರಗಿತು.

SKSSF ರಾಜ್ಯ ಪ್ರಧಾನ ಕಾರ್ಯದರ್ಶಿಯಾದ ಬಹು ಅನೀಸ್ ಕೌಸರಿ ಉಸ್ತಾದರು ಕಾರ್ಯಕ್ರಮ ಉದ್ಘಾಟಿಸಿದರು. ಕೊಡಾಜೆ ಖತೀಬರಾದ ಅಬ್ದುಲ್ ಅಝೀಝ್ ದಾರಿಮಿ ದುಆ ನೆರವೇರಿಸಿದರು. ನಂತರ ಪ್ರ.ಕಾರ್ಯದರ್ಶಿ ಹಾರಿಸ್ ಕೌಸರಿ ಉಸ್ತಾದರು ವಾರ್ಷಿಕ ವರದಿ ಹಾಗೂ ಲೆಕ್ಕಪತ್ರ ಮಂಡಿಸಿದರು. ಬಳಿಕ ಇಝುದ್ದೀನ್ ನಿಝಾಮಿ ತರಬೇತಿ ಶಿಬಿರ ನಡೆಸಿಕೊಟ್ಟರು. ಚುನಾವಣಾಧಿಕಾರಿಗಳಾದ ಹಬೀಬ್ ಫೈಝಿಯವರ ನೇತೃತ್ವದಲ್ಲಿ SKSSF ದ. ಕ. ಈಸ್ಟ್ ಜಿಲ್ಲಾ ಸಮಿತಿಯ 2024-2026ರ ನೂತನ ಸಮಿತಿಯನ್ನು ರಚಿಸಲಾಯಿತು.

ಅಧ್ಯಕ್ಷರು
ಕಾರ್ಯದರ್ಶಿ






ಅಧ್ಯಕ್ಷರಾಗಿ ಬಹು ಉಸ್ತಾದ್ ಮುಹಮ್ಮದ್ ನವವಿ ಮುಂಡೋಳೆ, ಪ್ರಧಾನ ಕಾರ್ಯದರ್ಶಿಯಾಗಿ ಬಹು ಉಸ್ತಾದ್ ಹಾರಿಸ್ ಕೌಸರಿ ಕೋಲ್ಪೆ, ಕೋಶಾಧಿಕಾರಿಯಾಗಿ ಜನಾಬ್ ಜಮಾಲ್ ಕೊಡಪದವು ಹಾಗು ವರ್ಕಿಂಗ್ ಕಾರ್ಯದರ್ಶಿ ಯಾಗಿ ಜನಾಬ್ ಯಾಸೀರ್ ಬೊಂಟ್ರಪಾಲ್ ಕಕ್ಕಿಂಜೆ ಆಯ್ಕೆಯಾದರು.

ಉಪಾಧ್ಯಕ್ಷರುಗಳಾಗಿ ಅಬ್ದುಲ್ ರಶೀದ್ ರಹ್ಮಾನಿ, ಜಮಾಲ್ ಕೆ ಎಸ್ ಬೆಳ್ಳಾರೆ, ಅಶ್ರಫ್ ಶೇಡಿಗುಂಡಿ, ಪಿ.ಎ. ಝಕರಿಯ್ಯ ಅಸ್ಲಮಿ ಹಾಗು ಸ್ವದಕತ್ತುಲ್ಲಾ ದಾರಿಮಿ, ಜೊತೆ ಕಾರ್ಯದರ್ಶಿಗಳಾಗಿ ಖಲೀಮುಲ್ಲಾಹ್ ಕಡಬ, ಅಶ್ರಫ್ ಮುಕ್ವೆ ಹಾಗು ಸಿದ್ದೀಕ್ ಅಡ್ಕ ಸುಳ್ಯ, ಆರ್ಗನೈಸಿಂಗ್ ಕಾರ್ಯದರ್ಶಿಗಳಾಗಿ ಯಾಸಿರ್ ಕೌಸರಿ, ಜಬ್ಬಾರ್ ಅಸ್ಲಮಿ, ಅಹ್ಮದ್ ನಿಝಾರ್ ಮುಸ್ಲಿಯಾರ್
ಹಾಗೂ 10 ಕಾರ್ಯಕಾರಿ ಸಮಿತಿಯ ಸದಸ್ಯರನ್ನು ಆರಿಸಲಾಯಿತು.

Continue Reading
Click to comment

Leave a Reply

Your email address will not be published. Required fields are marked *

Advertisement