ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಇತರ

ನಾಳೆ(ಜು.2): ಕುಂಬ್ರ, ಸವಣೂರು, ಕಡಬದ, ನೆಲ್ಯಾಡಿ ವ್ಯಾಪ್ತಿಯಲ್ಲಿ ವಿದ್ಯುತ್‌ ನಿಲುಗಡೆ

Published

on

ಪುತ್ತೂರು: ನಿರ್ವಹಣಾ ಕಾಮಗಾರಿ, ಅಪಾಯಕಾರಿ
ಮರಗಳ ತೆರವು ಸೇರಿದಂತೆ ವಿವಿಧ ಕಾಮಗಾರಿಗಳು ನಡೆಯಲಿರುವ ಹಿನ್ನೆಲೆಯಲ್ಲಿ ಕುಂಬ್ರ ಉಪ ವಿಭಾಗ, ಪುತ್ತೂರು ಉಪ ವಿಭಾಗ ಹಾಗೂ ಕಡಬ ಸವಣೂರು ಮಾರ್ಗಗಳಲ್ಲಿ ಬೆಳಿಗ್ಗೆ 10ರಿಂದ ಸಂಜೆ 5 ಗಂಟೆಯ ತನಕ ವಿದ್ಯುತ್‌ ನಿಲುಗಡೆಯಾಗಲಿದೆ.

ನಿರ್ವಹಣಾ ಕಾಮಗಾರಿಯ ಹಿನ್ನೆಲೆಯಲ್ಲಿ ಕುಂಬ್ರ ಉಪ ವಿಭಾಗದ 33/11 ಕೆ.ವಿ ವಿದ್ಯುತ್ ಉಪಕೇಂದ್ರದಿಂ ಹೊರಡುವ ಮದ್ದ, ದೇರ್ಲ, ಸುಳ್ಯಪದವು, ಇರ್ದೆ ಮತ್ತು ಪಾಣಾಜೆ ಫೀಡರುಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ. ಪುತ್ತೂರು-ಸವಣೂರು-ನೆಲ್ಯಾಡಿ ಮಾರ್ಗಗಳ ಮಧ್ಯೆಯಿರುವ ಅಪಾಯಕಾರಿ ಮರಗಳನ್ನು ತೆರವುಗೊಳಿಸುವ ನಿಟ್ಟಿನಲ್ಲಿ 33ಕೆವಿ ಪುತ್ತೂರು-ಕಡಬ-ಸುಬ್ರಹ್ಮಣ್ಯ ಹಾಗೂ 33ಕೆವಿ ಪುತ್ತೂರು-ಸವಣೂರು-ನೆಲ್ಯಡಿ ವಿದ್ಯುತ್ ಮಾರ್ಗಗಳಲ್ಲಿ ನಿಲುಗಡೆಯಾಗಲಿದೆ.

ನಿರ್ವಹಣಾ ಕಾಮಗಾರಿಗಾಗಿ 33/11 ಕೆವಿ ಸವಣೂರು ಉಪಕೇಂದ್ರದಿಂದ ಹೊರಡುವ 11ಕೆವಿ ಕಾಣಿಯೂರು, ದೋಳಾಡಿ, ವೀರಮಂಗಲ, ಏಣಿತ್ತಡ್ಕ, ಭಕ್ತಕೋಡಿ, ಪುಣ್ಯಪ್ಪಾಡಿ, ಚಾರ್ವಾಕ ಮತ್ತು ಶಾಂತಿಗೋಡು ಫೀಡರ್‌ಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದ್ದು ಗ್ರಾಹಕರು ಸಹಕರಿಸುವಂತೆ ಮೆಸ್ಕಾಂ ಪುತ್ತೂರು ಉಪವಿಭಾಗ ಹಾಗೂ ಕುಂಬ್ರ ಉಪವಿಭಾಗದ ಪ್ರಕಟಣೆ ತಿಳಿಸಿದೆ.

 

 

Continue Reading
Click to comment

Leave a Reply

Your email address will not be published. Required fields are marked *

Advertisement