ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಇತ್ತೀಚಿನ ಸುದ್ದಿಗಳು

9/11 ಹಾಗೂ ಕಟ್ ಕನ್ವರ್ಶನ್ ವಿಚಾರದಲ್ಲಿ ಸದನದಲ್ಲಿ ಚರ್ಚೆ ನಡೆಸಿದ ಶಾಸಕ ಅಶೋಕ್ ರೈ.ವಿಶೇಷ ಸಭೆ ಕರೆದು ಸಮಸ್ಯೆ ಇತ್ಯರ್ಥಪಡಿಸಲು ಸಚಿವರಿಗೆ ಸ್ಪೀಕರ್ ಸೂಚನೆ

Published

on

ಪುತ್ತೂರು: ಗ್ರಾಮೀಣ ಭಾಗದಲ್ಲಿ ವಸತಿ ವಾಣಿಜ್ಯ ಕ್ಕೆ ಸಂಬಂಧಿಸಿದಂತೆ ಏಕ ವಿನ್ಯಾಸ ನಕ್ಷೆ ಮತ್ತು9/11 ನಿಂದ ಜನರಿಗೆ ತುಂಬಾ ತೊಂದರೆಯಾಗಿದ್ದು ಈ ಹಿಂದೆ ಇದ್ದ ನಿಯಮವನ್ನೇ ಮತ್ತೆ ಜಾರಿಗೆ ತರುವ ಮೂಲಕ ಈ ಎರಡೂ ಸಮಸ್ಯೆಯನ್ನು ಇತ್ಯರ್ಥ ಮಾಡಬೇಕು ಎಂದು ಪುತ್ತೂರು ಶಾಸಕರಾದ ಅಶೋಕ್ ರೈಯವರು ಸೋಮವಾರ ವಿಧಾನಸಭಾ ಅಧಿವೇಶನದಲ್ಲಿ ಸರಕಾರದ ಗಮನಕ್ಕೆ ತಂದಿದ್ದು ,

 

ಈ ವಿಚಾರ ಗಂಭೀರವಾಗಿದೆ ಇದರ ಸಾಧಕ ಬಾಧಕಗಳ ಬಗ್ಗೆ ಚರ್ಚೆ ನಡೆಸಲು ಸಚಿವರು ಮತ್ತು ಶಾಸಕರ ಸಭೆಯನ್ನು ಕರೆದು ತೀರ್ಮಾನಿಸಿ ಎಂದು ಸ್ಪೀಕರ್ ಯು ಟಿ ಖಾದರ್ ಸೂಚನೆಯನ್ನು ನೀಡಿದ್ದಾರೆ.

ಹಿಂದಿನ ನಿಯಮವನ್ನೇ ಜಾರಿಗೆ ತನ್ನಿ

ಈ ಹಿಂದೆ ಗ್ರಾಮಾಂತರ ಭಾಗದಲ್ಲಿ ಗ್ರಾಪಂ ಕಚೇರಿಯಲ್ಲ 25 ಸೆಂಟ್ಸ್ 9/11 ಮಾಡಲಾಗುತ್ತಿತ್ತು ಒಂದು ಎಕ್ರೆತನಕ ಇ ಒ ಮೂಲಕ ಮಾಡಲಾಗುತ್ತಿತ್ತು ಆದರೆ ಈಗ ಎಲ್ಲವನ್ನೂ ನಗರಪಾಲಿಕಾ ವ್ಯಾಪ್ತಿಯ ಮೂಡಾದಲ್ಲಿ ಮಾಡಿಸಿಕೊಳ್ಳಬೇಕಾಗಿದೆ. ಈ ನಿಯಮ ಗ್ರಾಮಾಂತರ ಪ್ರದೇಶದಲ್ಲಿ ದೊಡ್ಡ ಸಮಸ್ಯೆಯನ್ನೇ ಸೃಷ್ಟಿಸಿದೆ.

 

ಮನೆ ಕಟ್ಟುವಾಗ ಗ್ರಾಮೀಣ ಭಾಗದ ಜನರು 9/11 ಮಾಡಿಸಿಕೊಳ್ಳಬೇಕಾದರೆ ಮಂಗಳೂರಿಗೆ ತೆರಳಬೇಕಿದೆ. ಯಾರೋ ನ್ಯಾಯಾಲಯಕ್ಕೆ ಹೋಗಿದ್ದಾರೆ ಎಂದು ಹಳೆಯ ನಿಯಮವನ್ನು ಬದಲಾವಣೆ ಮಾಡಿದ್ದಾರೆ.

ಈ ಗಂಭೀರ ವಿಚಾರವನ್ನು ನಾನು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ ಖರ್ಗೆ, ನಗರಾಭಿವೃದ್ದಿ ಸಚಿವರ ಗಮಕ್ಕೂ ತಂದಿದ್ದೇನೆ ಈ ಸಮಸ್ಯೆಯನ್ನು ಇತ್ಯರ್ಥ ಮಾಡಲೇಬೇಕು ಇತ್ಯರ್ಥ ಮಾಡದೇ ಇದ್ದರೆ ಇದೊಂದು ಬಹಳ ಗಂಭೀರ ಸಮಸ್ಯೆಯಾಗಿ , ಜನರಿಗೆ ತೊಂದರೆ ನೀಡಲಿದೆ ಎಂದು ಶಾಸಕರು ಹೇಳಿದರು.

 

ಏಕ ವಿನ್ಯಾಸ ಸಮಸ್ಯೆ

ನಗರ ಮತ್ತು ಗ್ರಾಮಾಂತರ ಪ್ರದೇಶದಲ್ಲಿ ಏಕ ವಿನ್ಯಾಸ ಸಮಸ್ಯೆ ಇದೆ. ಒಬ್ಬ ವ್ಯಕ್ತಿಗೆ ೫ ಎಕ್ರೆ ಜಾಗವಿದ್ದಲ್ಲಿ ಅದನ್ನು ಕಟ್ ಕನ್ವರ್ಶನ್ ಮಾಡುವ ಹಾಗಿಲ್ಲ. ಒಂದು ವೇಳೆ ಕನ್ವರ್ಶನ್ ಮಾಡಬೇಕಾದರೆ ೫ ಎಕ್ರೆ ಜಾಗವನ್ನು ಸರಕಾರಕ್ಕೆ ವಹಿಸಿ ಆ ಬಳಿಕ ಕನ್ವರ್ಶನ್ ಮಾಡಬೇಕಿದೆ, ಕನ್ವರ್ಶನ್ ಮಾಡಬೇಕಾದರೆ ಈ ಜಾಗಕ್ಕೆ ಹೋಗುವಲ್ಲಿ ಸರಕಾರಿ ರಸ್ತೆಯೂ ಇರಬೇಕು ಮತ್ತು ರಸ್ತೆಯನ್ನೂ ಕನ್ವರ್ಶನ್ ಮಾಡಬೇಕು ಎಂಬ ನಿಯಮವಿದೆ ಇದರಿಂದ ಜನತೆಗೆ ತುಂಬಾ ತೊಂದರೆಯಾಗಿದೆ. ಏಕ ವಿನ್ಯಾಸ ನಕ್ಷೆಯಿಂದ ಜನ ಸಾಮಾನ್ಯರು ಹೈರಾಣಾಗಿದ್ದಾರೆ.

ಇದು ಅತ್ಯಂತ ಕೆಟ್ಟ ನಿಯಮವಾಗಿದೆ. ಈ ನಕ್ಷೆಯ ಕಾರಣಕ್ಕೆ ಮನೆ ಕಟ್ಟುವಲ್ಲಿ ಬ್ಯಾಂಕ್ ಲೋನ್ ಪಡೆಯಲೂ ಸಾಧ್ಯವಾಗುತ್ತಿಲ್ಲ. ಜನರು ದಿನಾ ನನ್ನ ಕಚೇರಿಗೆ ಬಂದು ಇದೇ ಸಮಸ್ಯೆಯನ್ನು ಹೇಳುತ್ತಿದ್ದಾರೆ. ಯಾವುದೇ ಕಾರಣಕ್ಕೂ ಈ ನಿಯಮವನ್ನು ಮತ್ತೆ ಎಂದೂ ಮುಂದುವರೆಸಬಾರದು ಸರಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ಹಳೆಯ ನಿಯಮವನ್ನು ಮತ್ತೆ ವ್ಯವಸ್ಥೆಗೆ ತರಬೇಕು ಎಂದು ಆಗ್ರಹಿಸಿದರು.

ಒಂದು ಅರ್ಜಿಗೆ ಮೂರು ತಿಂಗಳು ಬೇಕು

ಮೂಡಾದಲ್ಲಿ ಸಿಬಂದಿ ಕೊರತೆ ಇದೆ, ಅಲ್ಲಿದ್ದವರಿಗೆ ಸರಿಯಾದ ಮಾಹಿತಿ ಇಲ್ಲ. ಪುತ್ತೂರು ತಾಲೂಕಿನಲ್ಲಿರುವ ಗ್ರಾಮೀಣ ಭಾಗದ ಜನರು ಮನೆ ಕಟ್ಟಬೇಕಾದರ9/11ಮತ್ತು ಏಕ ವಿನ್ಯಾಸ ನಕ್ಷೆ ಪಡೆಯಲು ದೂರದ ಮಂಗಳೂರಿಗೆ ಓಡಾಡಬೇಕು. ಬಡವರಿಗೆ ಈದರ ಬಗ್ಗೆ ಹೆಚ್ಚಿನ ಮಾಹಿತಿ ಇರುವುದಿಲ್ಲ. ಎಲ್ಲಿಗೆ ಹೋಗಬೇಕು? ಹೇಗೆ ಹೋಗಬೇಕು ಎಂಬ ವಿಚಾರವೇ ಗೊತ್ತಿಲ್ಲದ ಕಾರಣ ಅವರು ತೀವ್ರ ಸಂಕಷ್ಟವನ್ನು ಎದರಿಸುತ್ತಿದ್ದಾರೆ. ಸ್ಪೀಕರ್ ಅವರೇ ಈ ವಿಚಾರ, ಇದರ ಸಂಕಷ್ಟ ನಿಮಗೂ ಗೊತ್ತಿದೆ ಈ ಕಾರಣಕ್ಕ9/11 ಮತ್ತು ಏಕ ವಿನ್ಯಾಸ ಸಮಸ್ಯೆಯನ್ನು ಸರಕಾರ ಶೀಘ್ರವೇ ಬಗೆಹರಿಸಬೇಕು ಎಂದು ಶಾಸಕರು ಆಗ್ರಹಿಸಿದರು.

ಲೋಕಲ್ ಬಾಡಿಗೆ ಅವಕಾಶ ನೀಡಬೇಕು
25 ಸೆಂಟ್ಸ್ ತನಕ ಗ್ರಾಮಪಂಚಾಯತ್ ಮತ್ತು ೧ ಎಕ್ರೆ ತನಕ ಇ ಒ ಅವರಿಗೆ ೯/೧೧ ಮತ್ತು ಏಕ ವಿನ್ಯಾಸ ನಕ್ಷೆ ಮಾಡಲು ಅಧಿಕಾರ ಕೊಡಬೇಕು. ಗ್ರಾಮಾಂತರ ಪ್ರದೇಶದ ಜನತೆಗೆ ತೊಂದರೆ ಕೊಡಬಾರದು, ಮನೆ ಕಟ್ಟುವರಿಗೆ ತೊಂದರೆ ನೀಡಬಾರದು. ಸರಕಾರ ಹೊಸ ನಿಯಮವನ್ನು ಬದಲಾವಣೆ ಮಾಡುವ ಮೂಲಕ ಜನಪರ ನಿಯಮವನ್ನು ಕೂಡಲೇ ಜಾರಿಗೆ ತರಬೇಕು ಎಂದು ಶಾಸಕರು ಸಭೆಗೆ ತಿಳಿಸಿದರು.

ಈರೆಗ್‌ಲಾ ಗೊತ್ತುಂಡು

ಸದನದಲ್ಲಿ ಮಾತನಡುತ್ತಿದ್ದ ಶಾಸಕ ಅಶೋಕ್ ರೈಯವರು ಮಧ್ಯದಲ್ಲಿ ತುಳುವಿನಲ್ಲಿ ಮಾತನಾಡಿ ಮಾನ್ಯ ಸಭಾಧ್ಯಕ್ಷರೇ ಈ ವಿಚಾರ ಈರೆಗ್‌ಲಾ ಗೊತ್ತುಂಡು, ಈರ್‌ನಾಡೆಗ್ ಜನ ಬರ್ಪೆರ್.. ಎಂದು ತುಳುವಿನಲ್ಲಿ ಮಾತನಾಡಿದರು. ಮುಂದುವರೆಸಿ ಮಾತನಾಡಿದ ಶಾಸಕರು ನಾನು ಊರಿಗೆ ಹೋಗುವಾಗ ಏರ್‌ಪೋರ್ಟಿನಲ್ಲೇ ಜನ ಈ ವಿಚಾರದ ಬಗ್ಗೆ ಹೇಳಲು ಕಾಯುತ್ತಿರುತ್ತಾರೆ ಅವರಿಗೆ ಏನು ಉತ್ತರ ಕೊಡಬೇಕು. ಈ ಸಮಸ್ಯೆ ಅತ್ಯಂತ ಗಂಭೀರವಾಗಿದೆ ಎಂಬುದನ್ನು ಸರಕಾರ ಗಮನಿಸಬೇಕು ಎಂದು ಶಾಸಕರು ಹೇಳಿದರು.

ಶಾಸಕರ ಮಾತಿಗೆ ಬೆಂಬಲ ಸೂಚಿಸಿದ ಶಾಸಕ ಸುನಿಲ್‌ಕುಮಾರ್

ಬಿಜೆಪಿ ಶಾಸಕ ಸುನಿಲ್‌ಕುಮಾರ್ ಶಾಸಕ ಅಶೋಕ್ ರೈ ಅವgರು ಮಂಡಿಸಿದ ವಿಚಾರಕ್ಕೆ ಬೆಂಬಲ ಸೂಚಿಸಿದರು. ಶಾಸಕ ಅಶೋಕ್ ರಐ ಹೇಳಿರುವುದು ಗಂಭೀರ ವಿಚಾರ. ಕೋರ್ಟು ಆದೇಶದ ಪ್ರಕಾರ ನಗರ ಪಾಲಿಕೆಗೆ ಶಿಫ್ಟ್ ಆಗಿದೆ ಎಂದು ಕೈ ಕಟ್ಟಿ ಕೂರಬೇಡಿ. ಗ್ರಾಮೀಣ ಭಗದ ಜನರು ಅರ್ಜಿ ಹಿಡಿದು ನಗರಪಾಲಿಕೆಗೆ ತೆರಳಬೇಕು. ಕೋರ್ಟಿನ ಆದೇಶಕ್ಕೆ ತಿದ್ದುಪಡಿಸ ತರುವ ಕೆಲಸವನ್ನು ಮಾಡಿದರೆ ಅದಕ್ಕೆ ನಮ್ಮ ಬೆಂಬಲ ಇದೆ. ಜನರ ಸಮಸ್ಯೆಯ ಬಗ್ಗೆ ಶಾಸಕ ಅಶೋಕ್ ರೈಯವರು ಸದನದ ಗಮನಕ್ಕೆ ತಂದಿದ್ದಾರೆ ಇದು ಗಂಭೀರ ವಿಚಾರವಾಗಿದೆ. ಈ ಹಿಂದೆ ಯಾವ ನಿಯಮವಿತ್ತೋ ಅದನ್ನೇ ಮತ್ತೆ ಜಾರಿಗೆ ತರಬೇಕಾದ ಅವಶ್ಯಕತೆ ಇದೆ ಎಂದು ಹೇಳಿದರು.

ಬುಧವಾರ ಬೆಳಿಗ್ಗೆ ಸಭೆ ಕರೆದ ಸ್ಪೀಕರಮತ್ತು ಏಕ ವಿನ್ಯಾಸ ನಕ್ಷೆಯ ಬಗ್ಗೆ ವಿಷಯ ಆಲಿಸಿದ ಸ್ಪೀಕರ್ ಯು ಟಿ ಖಾದರ್ ರವರು ಬುಧವಾರ ಬೆಳಿಗ್ಗೆ ೯ ಗಂಠೆಗೆ ವಿಧಾನಸಭಾ ಹಾಲ್‌ನಲ್ಲಿ ವಿಶೇಷ ಸಭೆ ಕರೆದು ಜಿಲ್ಲೆಯ ಶಾಸಕರನ್ನು ಸೇರಿಸಿ, ಕಂದಾಯ ಸಚಿವರು ಮತ್ತು ಕಂದಾಯ ಅಧಿಕಾರಿಗಳ ಸಭೆಯನ್ನು ಕರೆಯಬೇಕು ಆ ಸಭೆಯಲ್ಲಿ ಈ ವಿಚಾರದ ಬಗ್ಗೆ ಮತ್ತು ೯/೧೧ ಸಮಸ್ಯೆಯ ಬಗ್ಗೆ ಚರ್ಚೆ ನಡೆಸುವಂತೆ ಸೂಚನೆಯನ್ನು ನೀಡಿದ್ದಾರೆ.

 

Continue Reading
Click to comment

Leave a Reply

Your email address will not be published. Required fields are marked *

Advertisement