ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಇತರ

ಅರುಣ್ ಪುತ್ತಿಲ ಆಡಿಯೋ ವೈರಲ್ ಕೊಲೆ ಬೆದರಿಕೆ ಆರೋಪ ಕೇಸು ದಾಖಲಿಸಲು ಠಾಣೆಗೆ ಆಗಮಿಸಿದ ಮಹಿಳೆ ; ನಡೆಯಲಿದೆಯೇ ಪುತ್ತಿಲ ವಿರುದ್ಧ ಪ್ರಕರಣ

Published

on

 

ಪುತ್ತೂರು : ಪುತ್ತಿಲ ಮಹಿಳೆಯೋರ್ವರ ಜೊತೆ ಮೊಬೈಲ್‌ನಲ್ಲಿ ಮಾತನಾಡಿದ ಆಡಿಯೋ ವೈರಲ್ ಗೆ ಸಂಬಂಧಿಸಿದಂತೆ ಬೆದರಿಕೆ ಕರೆ ಬರುತ್ತಿರುವುದಾಗಿ ಆರೋಪಿಸಿ ಮಹಿಳೆಯು ಆ.29ರಂದು ರಾತ್ರಿ ಪುತ್ತೂರು ನಗರ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆಂದು ತಿಳಿದುಬಂದಿದೆ.

ಆಡಿಯೋ ವೈರಲ್ ಬಳಿಕ ಮಹಿಳೆಗೆ ಹಲವಾರು ಬೆದರಿಕೆ ಕರೆ ಬಂದಿದ್ದು, ಈ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣೆಗೆ ರಾತ್ರಿ ಬಂದು ಪೊಲೀಸ್ ಇನ್ಸೆಕ್ಟರ್ ಜೊತೆ ಮಾತುಕತೆ ನಡೆಸಿದ್ದಾರೆ.

 

ಠಾಣೆಗೆ ಮಹಿಳೆ ಆಗಮಿಸಿದ ಸಮಯದಲ್ಲಿ ರಾಜಾರಾಮ್‌ ಭಟ್‌ ಮತ್ತು ಇತರರು ಮಹಿಳೆಯ ಬೆಂಬಲಕ್ಕೆ ನಿಂತಿದ್ದಾರೆ ಎಂಬ ಮಾಹಿತಿ ಕೂಡ ಇದೆ. ಇಂದು ಖ್ಯಾತ ವಕೀಲರೊಂದಿಗೆ ಚರ್ಚಿಸಿ ದೂರು ನೀಡುವ ಸಾಧ್ಯತೆ ಇದೆ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ.

ಮಹಿಳೆಯು ತನ್ನ ಪುತ್ರಿಯೊಂದಿಗೆ ಬಂದಿದ್ದರು ಎಂದು ತಿಳಿದುಬಂದಿದೆ. ತಡರಾತ್ರಿ ಠಾಣೆಗೆ ಬಂದ ಮಹಿಳೆಯನ್ನು ಬಳಿಕ ಆಟೋ ರಿಕ್ಷಾದಲ್ಲಿ ತೆರಳುವಂತೆ ಸೂಚಿಸಿ ಬಳಿಕ ಹಿಂದಿನಿಂದ ಪೊಲೀಸ್ ಜೀಪಿನಲ್ಲಿ ಪೊಲೀಸರು ಭದ್ರತೆಯೊಂದಿಗೆ ಮನೆಯ ತನಕ ಬಿಟ್ಟು ಬಂದಿದ್ದಾರೆ ಎಂದು ತಿಳಿದು ಬಂದಿದೆ.

Continue Reading
Click to comment

Leave a Reply

Your email address will not be published. Required fields are marked *

Advertisement