ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಇತರ

ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ( NDRF ) ತಂಡದಿಂದ ಜೀವರಕ್ಷಣಾ ಕೌಶಲ್ಯ ಕುರಿತು ತರಬೇತಿ ಕಾರ್ಯಕಾರ .

Published

on

ಬಂಟ್ವಾಳ : ಯಾವುದೇ ಫಲಪೇಕ್ಷೆ ಇಲ್ಲದೆ ಮಾಡುವ ಕೆಲಸವು ಸೇವೆಯ ರೂಪದಲ್ಲಿ ಗುರುತಿಸಲ್ಪಡುತ್ತದೆ. ತುರ್ತು ಸಂದರ್ಭದಲ್ಲಿ ನೆರವಾಗುವ ಅತಿ ಚಿಕ್ಕ ವಿಚಾರವೂ ಹೆಚ್ಚಿನ ಮಹತ್ವವನ್ನು ಪಡೆದಿರುತ್ತದೆ, ಸೇವೆ ಮಾಡುವ ಮನಸ್ಸಿರಬೇಕು ಅಷ್ಟೇ ಅಲ್ಲದೆ ಯಾವುದೇ ಸಮಯದಲ್ಲೂ ಅಗತ್ಯ ನೆರವನ್ನು ನೀಡುವಲ್ಲಿ ತಕ್ಷಣಕ್ಕೆ ಸಿಗುವ ಜನಸಮೂಹವಾಗಿದೆ.

 

ಇಲ್ಲಿ ಮೇಲುಕೀಳು ಎಂಬ ಭಾವವಿಲ್ಲ ಸೇವೆಯೇ ಪರಮ ಗುರಿ ಎಂದು ನಂಬಿದ ತಂಡ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಕಮಾಂಡರ್ ಶಾಂತಿ ಲಾಲ್ ಜಟಿಯ ಹೇಳಿದರು.

ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಉಡುಪಿ ಪ್ರಾದೇಶಿಕವಿಭಾಗದ ಬಂಟ್ವಾಳ ತಾಲೂಕಿನ ಶೌರ್ಯ ವಿಪತ್ತು ನಿರ್ವಹಣಾ ಸಮಿತಿಯ ಸ್ವಯಂ ಸೇವಕರಿಗೆ ಬಂಟ್ವಾಳ ಯೋಜನಾ ಕಚೇರಿಯ ಉನ್ನತಿ ಸೌಧದಲ್ಲಿ ನಡೆದ ತರಬೇತಿ ಕಾರ್ಯಗಾರವನ್ನು ಉದ್ದೇಶಿಸಿ ಮಾತನಾಡಿದರು.

ಕಾರ್ಯಗಾರವನ್ನು ಗ್ರಾಮಾಭಿವೃದ್ದಿ ಯೋಜನೆಯ ದಕ್ಷಿಣ ಕನ್ನಡ ಜಿಲ್ಲಾ ನಿರ್ದೇಶಕರಾದ ಮಹಾಬಲ್ ಕುಲಾಲ್ ಉದ್ಘಾಟಿಸಿ, ಶೌರ್ಯ ತಂಡದ ಸದಸ್ಯರುಗಳಿಗೆ ತಮ್ಮನ್ನು ರಕ್ಷಿಸಿಕೊಂಡು ತುತ್ತು ಸಂದರ್ಭಗಳಲ್ಲಿ ವೀಪತು ಗಳನ್ನು ನಿರ್ವಹಣೆ ಮಾಡುವ ಸಲುವಾಗಿಯೇ ನುರಿತ ಏನ್ ಡಿ ಆರ್ ಎಫ್ ತಂಡದಿಂದ ತರಬೇತಿ ನೀಡಲಾಗುತ್ತಿತ್ತು ಇದರ ಸದುಪಯೋಗ ಪಡೆದುಕೊಳ್ಳಿ ಎಂದರು.

 

ಸಭಾ ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ಶೌರ್ಯ ಸಮಿತಿಯ ಮಾಸ್ಟರ್ ಶ್ರೀ ಪ್ರಕಾಶ್ ವಹಿಸಿದ್ದರು

ವಿಪತ್ತು ನಿರ್ವಹಣಾ ಪ್ರಾಧಿಕಾರ ಜಿಲ್ಲಾಧಿಕಾರಿ ಕಚೇರಿ ಇದರ ಅಧಿಕಾರಿ ಯವರಾದ ವಿಜಯ್ ಕುಮಾರ್ ರವರು ವಿಪತ್ತಿನ ವಿಧಗಳು ಮತ್ತು ಅವುಗಳನ್ನು ತಡೆಗಟ್ಟುವ ವಿಧಾನದ ಕುರಿತು ಮಾಹಿತಿ ಮಾರ್ಗದರ್ಶನ ನೀಡಿದರು

ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ( NDRF ) ಇವರ ತಂಡದಿಂದ ಜೀವರಕ್ಷಣಾ ಕೌಶಲ್ಯ ಕುರಿತು ತರಬೇತಿಯನ್ನು ಸ್ವಯಂ ಸೇವಕರಿಗೆ ನೀಡಲಾಯಿತು

ಹೊಸದಾಗಿ ಸೇರ್ಪಡೆಯಾದ ಶೌರ್ಯ ಸ್ವಯಂ ಸೇವಕರಿಗೆ ಸಮವಸ್ತ್ರವನ್ನು ವಿತರಿಸಲಾಯಿತು

ವೇದಿಕೆಯಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಬ್ ಇನ್ಸ್ಪೆಕ್ಟರ್ ಮುನಿಕ್ರಷ್ಣ, ಶೌರ್ಯ ವಿಪತ್ತು ನಿರ್ವಹಣಾ ಕಾರ್ಯಕ್ರಮದ ಯೋಜನಾಧಿಕಾರಿ ಜೈವಂತ ಪಟಗಾರ, ಜನಜಾಗೃತಿ ವೇದಿಕೆ ಆಡಳಿತ ಯೋಜನಾಧಿಕಾರಿ ಮಾಧವ ಗೌಡ ಉಪಸ್ಥಿತರಿದ್ದರು.

ರೇಖಾ ಪ್ರವೀಣ್ ಪ್ರಾರ್ಥಿಸಿ,ತಾಲೂಕು ಯೋಜನಾಧಿಕಾರಿ ಬಾಲಕೃಷ್ಣ ಎಮ್ ಪ್ರಾಸ್ತಾವಿಕದೊಂದಿಗೆ ತಾಲೂಕಿನ ಶೌರ್ಯ ಸಮಿತಿಯ ಸಾಧನೆಯನ್ನು ವಿವರಿಸುತ್ತಾ ಅತಿಥಿಗಳನ್ನು ಸ್ವಾಗತಿಸಿದರು, ಉಡುಪಿ ಪ್ರಾದೇಶಿಕ ವಿಭಾಗದ ಜನಜಾಗೃತಿ ಮೇಲ್ವಿಚಾರಕರಾಕ ನಿತೇಶ್ ಕೆ ಕಾರ್ಯಕ್ರಮ ನಿರೂಪಿಸಿದರು.

Continue Reading
Click to comment

Leave a Reply

Your email address will not be published. Required fields are marked *

Advertisement