ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಇತರ

ನುಡಿದಂತೆ ನಡೆದ ಶಾಸಕ ಅಶೋಕ್ ರೈ ,ಈಶ್ವರಮಂಗಲಕ್ಕೆ ಸರ್ಕಾರಿ ಬಸ್ ಸಂಚಾರ ಆರಂಭ..

Published

on

ನುಡಿದಂತೆ ನಡೆದ ಶಾಸಕ ಅಶೋಕ್* ರೈ ,ಈಶ್ವರಮಂಗಲಕ್ಕೆ ಸರ್ಕಾರಿ ಬಸ್ ಸಂಚಾರ ಆರಂಭ..
6-7 ವರ್ಷದ ಬಳಿಕ ಈಶ್ವರಮಂಗಲಕ್ಕೆ ಹೊಸದಾದ ಒಂದು ಬಸ್ ಕಾಲಿಟ್ಟಿದೆ. ಇಷ್ಟು ವರ್ಷವೂ ವಿದ್ಯಾರ್ಥಿಗಳು ನಮ್ಮೂರಿಗೆ ಬಸ್ ಬೇಕೆಂಬ ಮನವಿಯನ್ನು ನೀಡುತ್ತಲೇ ಇದ್ದರು.ಸೆಪ್ಟೆಂಬರ್ 2 ರಂದು ವಿದ್ಯಾರ್ಥಿಗಳು ಬೃಹತ್ ಸಂಖ್ಯೆಯಲ್ಲಿ ಪುತ್ತೂರಿನ ಶಾಸಕರಾದ ಅಶೋಕ್ ರೈ ಅವರ ಕಛೇರಿಗೆ ತೆರಳಿ ಮನವಿಯನ್ನು ನೀಡಿರುತ್ತಾರೆ.

 

ಮಕ್ಕಳ ಗಂಭೀರವಾದ ಸಮಸ್ಯೆಯನ್ನು ಅರ್ಥೈಸಿಕೊಂಡು, ಅವರ ವಿದ್ಯಾಭ್ಯಾಸಕ್ಕೆ ಕೊರತೆ ಆಗಬಾರದು ಎಂಬ ನಿಟ್ಟಿನಲ್ಲಿ ಮೂರು ದಿನಗಳಲ್ಲಿ ಬಸ್ ವ್ಯವಸ್ಥೆಯನ್ನು ಮಾಡಿಕೊಡುತ್ತೇನೆ ಎಂದು ಆಶ್ವಾಸನೆಯನ್ನು ನೀಡಿರುತ್ತಾರೆ.ಅಂದು ಈಶ್ವರಮಂಗಲ ಆಸುಪಾಸಿನ ಕೆಲವರು ಜೊತೆಗೆ, ನೆಟ್ಟಣಿಗೆ ಮುಡ್ನೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ರಾಮ ಇವರು ಉಪಸ್ಥಿತರಿದ್ದರು.

 

 

ಇಷ್ಟೇ ಅಲ್ಲದೆ ವಿದ್ಯಾರ್ಥಿಗಳನ್ನು ಸದಾ ಪ್ರೋತ್ಸಾಹಿಸುತ್ತಾ ಚಂದ್ರಹಾಸ ಈಶ್ವರಮಂಗಲ ಇವರು ಕೂಡ ವಿದ್ಯಾರ್ಥಿಗಳೊಂದಿಗಿದ್ದರು.ಈ ರೀತಿ ಎಡೆ ಬಿಡದೆ ನಡೆಸಿದ ವಿದ್ಯಾರ್ಥಿಗಳ ಪ್ರಯತ್ನದ ಫಲವಾಗಿ ಇಂದು ಈಶ್ವರಮಂಗಲ ಗ್ರಾಮಕ್ಕೆ ಬಸ್ ಬಂದಿದೆ. ಇಂದು ಹಲವು ವಿದ್ಯಾರ್ಥಿಗಳು ಸೇರಿದಂತೆ ಗ್ರಾಮಸ್ಥರು ಕೂಡ ಭಾಗಿಯಾದರು.ಇಂದು ಶಾಸಕರು ಪುತ್ತೂರಿನ ಜನಪ್ರಿಯ ಶಾಸಕ ಮಾತ್ರವಲ್ಲದೆ ವಿದ್ಯಾರ್ಥಿಗಳ ನೆಚ್ಚಿನ ಶಾಸಕ ಎಂಬ ಹೆಗ್ಗಳಿಕೆಗೂ ಪಾತ್ರವಾದರು.

 

 

 

Continue Reading
Click to comment

Leave a Reply

Your email address will not be published. Required fields are marked *

Advertisement