Published
1 year agoon
By
Akkare News
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಬಜಪೆ ಯೋಜನಾ ಕಚೇರಿ ವ್ಯಾಪ್ತಿಯ ಕಾವೂರು ವಲಯದ ಮಳವೂರ್ ಕಾರ್ಯಕ್ಷೇತ್ರದ ಕೆಂಜಾರಿನಲ್ಲಿ ಕಪಿಲ ಗೋಶಾಲೆ ನಿರ್ವಹಣೆಗಾಗಿ 2 ಲಕ್ಷ ರೂ. ಶ್ರೀ ಕ್ಷೇತ್ರದಿಂದ ಮಂಜೂರು ಆಗಿದೆ.

ಮಂಗಳೂರು : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಬಜಪೆ ಯೋಜನಾ ಕಚೇರಿ ವ್ಯಾಪ್ತಿಯ ಕಾವೂರು ವಲಯದ ಮಳವೂರ್ ಕಾರ್ಯಕ್ಷೇತ್ರದ ಕೆಂಜಾರಿನಲ್ಲಿ ಕಪಿಲ ಗೋಶಾಲೆ ನಿರ್ವಹಣೆಗಾಗಿ 2 ಲಕ್ಷ ರೂ. ಶ್ರೀ ಕ್ಷೇತ್ರದಿಂದ ಮಂಜೂರು ಆಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮಾಭಿವೃದ್ದಿ ಯೋಜನೆಯ ಜಿಲ್ಲಾ ನಿರ್ದೇಶಕ ಮಹಾಬಲ ಕುಲಾಲ್ ಈ ಬಗ್ಗೆ ಮಂಜೂರಾತಿ ಪತ್ರವನ್ನು ವಿತರಿಸಿದ್ದಾ

ಮಂಜೂರಾತಿ ಪತ್ರ ಸ್ವೀಕರಿಸಿದ ಕಪಿಲ ಗೋಶಾಲೆಯನ್ನು ನಿರ್ವಹಣೆ ಮಾಡುತ್ತಿರುವ ಪ್ರಕಾಶ್ ಶೆಟ್ಟಿಯವರು ಶ್ರೀ ಕ್ಷೇತ್ರದ ಸೇವೆಯನ್ನು ಸ್ಮರಿಸಿ ಸಂತಸ ವ್ಯಕ್ತಪಡಿಸಿದರು.

ಗ್ರಾಮಾಭಿವೃದ್ದಿ ಯೋಜನಾಧಿಕಾರಿ ಗಿರೀಶ್, ವಲಯ ಮೇಲ್ವಿಚಾರಕ ಅಭಿಮಾನ್. ಎಂ. ಜೈನ್ ಹಾಗೂ ಬಜಪೆ ಕೇಂದ್ರ ಒಕ್ಕೂಟ ಅಧ್ಯಕ್ಷ ರಾಜೇಶ್ ಶೆಟ್ಟಿ ಉಪಸ್ಥಿತರಿದ್ದರು.