Connect with us

ಸ್ಥಳೀಯ

ಕೋಡಿಂಬಾಡಿ ಶಾಸಕರ ಅಭಿವೃದ್ಧಿಯನ್ನು ಸಹಿಸಿಕೊಳ್ಳಲಾಗದೆ ಅಭಿನಂದನೆ ಕಟೌಟ್ ಕಳವು ಕಟೌಟ್ ಕದ್ದವರಿಗೆ ಸರಿಯಾದ ಬುದ್ಧಿಯನ್ನು ನೀಡಲಿ ಎಂದು ದೇವರಲ್ಲಿ ಪ್ರಾರ್ಥನೆ

Published

on

ಪುತ್ತೂರು: ಕೋಡಿಂಬಾಡಿ ಗ್ರಾಮದ ಡೆಕ್ಕಾಜೆ-ಪರನೀರು ರಸ್ತೆ ಕಾಂಕ್ರಿಟೀಕರಣಕ್ಕೆ 5 ಲಕ್ಷ ರೂ ಅನುದಾನ ಒದಗಿಸಿದ ಶಾಸಕ ಅಶೋಕ್ ಕುಮಾರ್ ರೈ ಅವರಿಗೆ ಪರನೀರು ನಿವಾಸಿಗಳು ಅಭಿನಂದನೆ ಸಲ್ಲಿಸಿ ಕೋಡಿಂಬಾಡಿಯ ಬಾರಿಕೆ ಸಮೀಪದ ಅರ್ಬಿ ಕ್ರಾಸ್ ಬಳಿ ಅಳವಡಿಸಿದ್ದ ಕಟೌಟ್ ಕಳವಾದ ಘಟನೆ ನಡೆದಿದೆ.

 

ಕೆಲವು ದಿನಗಳ ಹಿಂದೆ ಕಟೌಟ್ ಅಳವಡಿಸಲಾಗಿದ್ದು ಫೆ.21ರಂದು ರಾತ್ರಿ ಕಿಡಿಗೇಡಿಗಳು ಫ್ರೇಮ್ ಸಹಿತ ಕಟೌಟ್ ಕಳವು ಮಾಡಿದ್ದಾರೆ. ಈ ಬಗ್ಗೆ ನೊಂದಿರುವ ಪದ್ಮಪ್ಪ ಪೂಜಾರಿ ಪರನೀರು ಅವರು ಫೆ. 23ರಂದು ಬೆಳಿಗ್ಗೆ ಮಠಂತಬೆಟ್ಟು ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ್ದು ಅಭಿವೃದ್ಧಿ ಕಾರ್ಯ ಮಾಡಿರುವ ಶಾಸಕರನ್ನು ಅಭಿನಂದಿಸಿ ನಾವು ಅಳವಡಿಸಿದ್ದ ಕಟೌಟ್ ಕಳವು ಮಾಡಿರುವವರಿಗೆ ಸರಿಯಾದ ಬುದ್ಧಿ ನೀಡುವಂತೆ ಪ್ರಾರ್ಥಿಸಿದ್ದಾರೆ.

 

 

 

 

 

Continue Reading
Click to comment

Leave a Reply

Your email address will not be published. Required fields are marked *

Advertisement