Connect with us

ಸ್ಥಳೀಯ

Vitla mudnoor ಕಂಬಳ ಓಟಗಾರ ಕಿಶೋರ್ ಪೂಜಾರಿ ಯವರಿಗೆ ಹುಟ್ಟೂರ ಸನ್ಮಾನ

Published

on

ಮಿಯಾರು(ಮೂಡಬಿದ್ರೆ)ನಲ್ಲಿ ನಡೆದ ಲವಕುಶ ಜೋಡು ಕರೆ ಕಂಬಳ ಕೂಟದಲ್ಲಿ ನೇಗಿಲು ಹಿರಿಯ ವಿಭಾಗದಲ್ಲಿ ದ್ವಿತೀಯ (ಓಟಗಾರ )ಬಹುಮಾನವನ್ನು ಪಡೆದು ಊರಿಗೆ ಹೆಮ್ಮೆಯನ್ನು ತಂದ,, ಶ್ರೀಮತಿ ಯಶೋಧ/ ರುಕ್ಮಯ್ಯ ಪೂಜಾರಿ ಕೆಮನಾಜೆ ಇವರ ಮಗನಾದ ಕೆ ಕಿಶೋರ್ ಪೂಜಾರಿ ಇವರನ್ನು ಪುತ್ತೂರು ವಿಧಾನಸಭಾ ಕ್ಷೇತ್ರದ ಅಕ್ರಮ ಸಕ್ರಮ ಸದಸ್ಯರಾದ ಶ್ರೀ ರಾಮಣ್ಣ ಪಿಲಿ೦ಜ ಇವರ ನೇತೃತ್ವದಲ್ಲಿ ಮಿತ್ರ ಮಂಡಳಿ ಹಲಸಿನಕಟ್ಟೆ [ರಿ ]ವಿಟ್ಲ ಮುಡ್ನೂರು ಮತ್ತು ಗೆಳೆಯರ ಬಳಗ ಬೇರಿಕೆ ಇದರ ಸಹಯೋಗದಲ್ಲಿ ಅವರ ಸ್ವಗೃಹದಲ್ಲಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಶ್ರೀ ಎಲ್ಯಣ್ಣ ಪೂಜಾರಿ ಮೈರುಂಡ, ಶ್ರೀ ನಾರಾಯಣ ಪೂಜಾರಿ ಬದಿಗುಡ್ಡೆ ಮತ್ತು ಪ್ರಮುಖರು ಉಪಸ್ಥಿರಿದ್ದರು. ಅವರ ಮುಂದಿನ ಗೆಲುವಿನ ನಾಗಲೋಟ ಹೀಗೆಯೇ ಮುಂದುವರಿಯಲಿ ಎಂದು ಹಾರೈಸಲಾಯಿತು.

 

 

 

Continue Reading
Click to comment

Leave a Reply

Your email address will not be published. Required fields are marked *

Advertisement