Connect with us

ಇತರ

ಉಪ್ಪಿನಂಗಡಿ; ರಾಷ್ಟ್ರೀಯ ಹೆದ್ದಾರಿ ತಡೆಗೋಡೆಯಲ್ಲಿ ಭಾರೀ ಬಿರುಕು

Published

on

ಉಪ್ಪಿನಂಗಡಿ: ಇಲ್ಲಿನ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ವೇಳೆ ನಿರ್ಮಿಸಿದ ತಡೆಗೋಡೆಯಲ್ಲಿ ಭಾರೀ ಬಿರುಕು ಕಾಣಿಸಿಕೊಂಡಿದೆ.

 

 

ಸುಮಾರು ಹದಿನೈದು ಅಡಿಗಿಂತಲೂ ಎತ್ತರವಾದ ತಡೆಗೋಡೆ ಇದಾಗಿದ್ದು ನಿರ್ಮಾಣದ ಸಮಯದಲ್ಲಿಯೇ ಸ್ಥಳೀಯರು ತಡೆಗೋಡೆಯ ಗುಣಮಟ್ಟದ ಬಗ್ಗೆ ಸಂದೇಹ ವ್ಯಕ್ತಪಡಿಸಿ ಇಲಾಖಾಧಿಕಾರಿಗಳ ಗಮನ ಸೆಳೆದಿದ್ದರೂ ನಿರ್ಲಕ್ಷ್ಯ ತಾಳಲಾಗಿತ್ತು ಎಂದು ದೂರಲಾಗಿದೆ.


ಇದೇ ಭಾಗದ ಹೆದ್ದಾರಿಯ ಇನ್ನೊಂದು ಪಾರ್ಶ್ವದಲ್ಲಿ ಇದೇ ರೀತಿ ನಿರ್ಮಾಣವಾದ ತಡೆಗೋಡೆಯು ಎರಡು ವರ್ಷಗಳ ಹಿಂದೆ ಮಗುಚಿ ಬಿದ್ದಿತ್ತು. ಮಗುಚಿ ಬಿದ್ದ ಸ್ಥಳವು ಜನ ಸಂಚಾರವಿಲ್ಲದ ಸ್ಥಳವಾಗಿದ್ದರಿಂದ ಭಾರೀ ಹಾನಿಯುಂಟಾಗಿರಲಿಲ್ಲ. ಆದರೆ ಇದೀಗ ಬಿರುಕು ಕಾಣಿಸಿಕೊಂಡ ತಡೆಗೋಡೆಯು ಶಾಲಾ ರಸ್ತೆಯ ಪಾರ್ಶ್ವದಲ್ಲಿರುವುದರಿಂದ ಆತಂಕ ಎದುರಾಗಿದೆ.

 

 

ಲಘುವಾಗಿ ಪರಿಗಣಿಸದಿರಿ
ತಡೆಗೋಡೆಯಲ್ಲಿ ಭಾರೀ ಬಿರುಕು ಕಾಣಿಸಿಕೊಂಡ ಬಗ್ಗೆ ಕಳವಳ ವ್ಯಕ್ತಪಡಿಸಿದ ಶಾಸಕ ಅಶೋಕ್‌ ಕುಮಾರ್‌ ರೈ, ಬಿರುಕು ಕಾಣಿಸಿರುವುದು ಕಾಮಗಾರಿಯ ಗುಣಮಟ್ಟವನ್ನು ಶಂಕಿಸುವಂತೆ ಮಾಡಿದೆ. ಈ ಬಿರುಕನ್ನು ಲಘುವಾಗಿ ಪರಿಗಣಿಸದೇ ಕೂಡಲೇ ಸರಿಪಡಿಸಬೇಕು ಎಂದು ಆಗ್ರಹಿಸಿದರು.

 

 

ಬಿರುಕು ಕಾಣಿಸಿಕೊಂಡ ತಡೆಗೋಡೆಯನ್ನು ವೀಕ್ಷಿಸಿದ ಕೆ ಎನ್‌ ಆರ್‌ ಸಂಸ್ಥೆಯ ಯೋಜನಾಧಿಕಾರಿ ಮಹೇಂದ್ರ ಕುಮಾರ್‌ ಸಿಂಗ್‌ ಮೇಲ್ನೋಟಕ್ಕೆ ಈ ಬಿರುಕು ಅಪಾಯಕಾರಿ ಸ್ಥಿತಿಯಲ್ಲಿಲ್ಲ. ಇದು ತಡೆಗೋಡೆ ನಿರ್ಮಾಣ ಹಂತದಲ್ಲಿ ಹಲಗೆ ಅಳವಡಿಸುವ ಕಾರ್ಯದಲ್ಲಿ ಉಂಟಾದ ವ್ಯತ್ಯಯದಿಂದಾಗಿ ಬಿರುಕು ಮೂಡಿರಬಹುದು. ಆದರೂ ಕಾಮಗಾರಿಯನ್ನು ಸಮಗ್ರ ಪರಿಶೀಲನೆಗೆ ಒಳಪಡಿಸಲಾಗುವುದೆಂದು ಮಾಧ್ಯಮಕ್ಕೆ ತಿಳಿಸಿದ್ದಾರೆ.

 

 


 

 

Continue Reading
Click to comment

Leave a Reply

Your email address will not be published. Required fields are marked *

Advertisement