Published
12 hours agoon
By
Akkare Newsಬಿಲ್ಲವ ಸಮಾಜ ಒಗ್ಗಟ್ಟಾಗಬೇಕು. ನಮ್ಮ ಮಕ್ಕಳನ್ನು ಉನ್ನತ ಹುದ್ದೆಯಲ್ಲಿ ಕಾಣಬೇಕು. ಸಂಪ್ರದಾಯದ ಪ್ರಕಾರ ಬಂದ ರೀತಿ ರಿವಾಜುಗಳು ಅಚ್ಚುಕಟ್ಟಾಗಿ ಮುಂದುವರೆಯಬೇಕು. ಸಮುದಾಯವು ಯಾರದ್ದೇ ತುಳಿತಕ್ಕೊಳ್ಳಕ್ಕಾಗದಂತೆ ಜಾಗೃತರಾಗಿರಬೇಕು. ಯಾರ ದಬ್ಬಾಳಿಕೆಗೂ ಎಂದಿಗೂ ಮಣಿಯಬಾರದು, ಯಾರು ಕುತಂತ್ರಗಳಿಗೂ ಬಲಿಪಶುಗಳಾಗಬಾರದು, ಸಮುದಾಯದ ವಿಷಯ ಅಂತ ಬಂದರೆ ನಾನು ಯಾವಗಲೂ ನಿಮ್ಮ ಬೆಂಬಲಕ್ಕೆ ನಿಲ್ಲುತ್ತೇನೆ ಎಂದು ಹಿಂದುತ್ವವಾದಿ, ನಾರಾಯಣ ಗುರು ವಿಚಾರ ವೇದಿಕೆ ಅಧ್ಯಕ್ಷ ಸತ್ಯಜಿತ್ ಸುರತ್ಕಲ್ ಅವರು, ಬಂಟ್ವಾಳ ತಾಲೂಕು ಬರಿಮಾರು ಗ್ರಾಮದ ಬಿಲ್ಲವ ಸಮಿತಿಯು ಬರಿಮಾರು ಸಮುದಾಯ ಭವನದಲ್ಲಿ ಜೂ. 08ರಂದು ಆಯೋಜಿಸಿದ್ದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಬರಿಮಾರು ಬಿಲ್ಲವ ಸಮಿತಿ ಅಧ್ಯಕ್ಷ, ಬರಿಮಾರು ಗ್ರಾಮ ಪಂಚಾಯತ್ ಸದಸ್ಯ ಹರಿಕೃಷ್ಣ ಬಿ. ಎಸ್ ಮಾತನಾಡಿ, ಸಮುದಾಯದ ವಿಚಾರ ಬಂದಾಗ ಪಕ್ಷಭೇದ ಮರೆತು ಒಂದಾಗಬೇಕು. ಈ ಮೊದಲೇ ಇದ್ದಂತೆ ಉನ್ನತ ಸ್ಥಾನದಲ್ಲಿ ನಮ್ಮ ಸಮುದಾಯವನ್ನು ಉಳಿಸಿಕೊಳ್ಳಬೇಕು. ಸಮುದಾಯಕ್ಕೆ ತೊಂದರೆ, ಅಪಮಾನ ಆದಲ್ಲಿ ಒಗ್ಗಟ್ಟಾಗಿ ಎದ್ದು ನಿಲ್ಲಬೇಕು. ನಾನು ಯಾವುದೇ ಪಕ್ಷವನ್ನು ಪ್ರತಿನಿಧಿಸುತ್ತಿಲ್ಲ, ಇಲ್ಲಿ ಪಕ್ಷಕ್ಕಿಂತ ಬಿಲ್ಲವ ಸಮುದಾಯವು ಶಕ್ತಿಯಾಗಿ ಹೊರಹೊಮ್ಮುವುದು ಮುಖ್ಯವಾಗಿದೆ. ಏಕೆಂದರೆ ನಮ್ಮ ಅಳಿವು ಉಳಿವಿನ ಪ್ರಶ್ನೆ ನಮ್ಮಲ್ಲೇ ಇದೆ, ಅದಕ್ಕೆ ಮೊದಲು ಪರಿಹಾರ ಕಂಡುಕೊಳ್ಳಬೇಕಾಗಿದೆ ಎಂದು ಹೇಳಿದರು.
.
ವೇದಿಕೆಯಲ್ಲಿ ಉಪಸ್ಥಿತರಿದ್ದ, ಮಾಣಿ ಬಿಲ್ಲವ ಸಂಘದ ಕಟ್ಟಡ ಸಮಿತಿಯ ಅಧ್ಯಕ್ಷ ನಾರಾಯಣ ಸಾಲಿಯಾನ್ ಅನಂತಾಡಿ ಮಾತನಾಡಿ, ಸಮುದಾಯವು ಬೆಳೆಯಬೇಕೆಂದರೆ ಒಗ್ಗಟ್ಟು ಮುಖ್ಯ. ನಮ್ಮ ಕಟ್ಟುಪಾಡುಗಳು, ಗುತ್ತುಗಾರಿಕೆ ಮುಂತಾದವುಗಳನ್ನು ಉಳಿಸಿಕೊಂಡು ಮುಂದಿನ ಪೀಳಿಗೆಗೆ ಧಾರೆಯೆರೆಯುವ ಅವಶ್ಯಕತೆ ಇದೆ. ಗ್ರಾಮದಲ್ಲಿ ಬಿಲ್ಲವ ಸಮಾಜ ಇಡುವ ಯಾವುದೇ ಹೆಜ್ಜೆಗೂ ನಮ್ಮ ಸಂಪೂರ್ಣ ಸಹಕಾರವಿದೆ ಎಂದು ನುಡಿದರು. ಹಾಗೂ ಬರಿಮಾರು ಗ್ರಾಮದಲ್ಲಿ ಬಿಲ್ಲವ ಸಮುದಾಯ ಭವನ ನಿರ್ಮಾಣದ ಕುರಿತಾಗಿಯೂ ಸಭೆಯಲ್ಲಿ ಚರ್ಚಿಸಲಾಯಿತು.
ಕಾರ್ಯಕ್ರಮದಲ್ಲಿ ತಾಲೂಕು ಬಿಲ್ಲವ ಸಮಿತಿಯ ಪ್ರತಿನಿಧಿ ಜಗದೀಶ್ ಪೂಜಾರಿ ಕೊಯಿಲ, ಬರಿಮಾರು ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಶ್ರುತಿ ಗೋಪುಕೋಡಿ, ಮೋಹನ್ ದಾಸ್ ಸುವರ್ಣ ಕುರಮಜಲುಗುತ್ತು, ಕೂಸಪ್ಪ ಪೂಜಾರಿ ಬರಿಮಾರುಗುತ್ತು, ಬರಿಮಾರು ಬಿಲ್ಲವ ಸಮಿತಿ ಉಪಾಧ್ಯಕ್ಷ ವಸಂತ ಪೂಜಾರಿ ಪಂಜುರ್ಲಿಗುಡ್ಡೆ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಜಯಂತ ಪೂಜಾರಿ ಪಂಜುರ್ಲಿಗುಡ್ಡೆ ಸ್ವಾಗತಿಸಿ, ವಿಸ್ಮಿತ ಮಧುಕರ ಕುರಮಜಲುಗುತ್ತು ಧನ್ಯವಾದ ಸಮರ್ಪಿಸಿದರು.