Published
5 hours agoon
By
Akkare Newsಅಹಮದಾಬಾದ್: ಏರ್ ಇಂಡಿಯಾ ಅಪಘಾತದ ಕುರಿತು ತನಿಖೆ ನಡೆಸಲು ಉನ್ನತ ಮಟ್ಟದ ಸಮಿತಿ ರಚಿಸಲಾಗಿದ್ದು, ಅದು 3 ತಿಂಗಳೊಳಗೆ ತನ್ನ ವರದಿಯನ್ನು ಸಲ್ಲಿಸಲಿದೆ ಎಂದು ಕೇಂದ್ರ ಸಚಿವ ಮುರಳೀಧರ್ ಮೋಹನ್ ತಿಳಿಸಿದ್ದಾರೆ.
ಏರ್ ಇಂಡಿಯಾ ವಿಮಾನವು ಕಳೆದ ಗುರುವಾರ (ಜೂ.12) ಟೇಕ್ ಆಫ್ ಆದ ಸ್ವಲ್ಪ ಸಮಯದಲ್ಲೇ ಪತನಗೊಂಡಿತ್ತು. ಈ ದುರಂತದಲ್ಲಿ 241 ಪ್ರಯಾಣಿಕರು ಮತ್ತು ದುರಂತ ಸ್ಥಳದಲ್ಲಿದ್ದ ಹಲವರು ಜನರು ಸಾವನ್ನಪ್ಪಿದ ಕಾರಣ ಈ ಸಮಿತಿಯನ್ನು ರಚಿಸಲಾಗಿದೆ ಎಂದು ಅವರು ಇಂದು (ಮಂಗಳವಾರ) ಮಾಹಿತಿ ನೀಡಿದ್ದಾರೆ.
ಈ ವಿಮಾನದ ಸುರಕ್ಷತೆ ಕುರಿತು ಪರಿಶೀಲನೆ ನಡೆಸಲಾಗಿದ್ದು, ಇಲ್ಲಿಯವರೆಗೆ ಯಾವುದೇ ಸಮಸ್ಯೆಯೂ ಕಂಡುಬಂದಿಲ್ಲ. ಏರ್ ಇಂಡಿಯಾವು ಒಟ್ಟು ಇಂತಹ 34 ವಿಮಾನಗಳ ಕಾರ್ಯಾಚರಣೆ ನಡೆಸುತ್ತದೆ. ಈ ವಿಮಾನದ ಬ್ಲಾಕ್ ಬಾಕ್ಸ್ ದೊರೆತಿದ್ದು, ಅದರ ದತ್ತಾಂಶದ ವಿಶ್ಲೇಷಣೆಯು ಅಪಘಾತಕ್ಕೆ ಏನು ಕಾರಣವೆಂಬ ಸುಳಿವು ನೀಡಲಿದೆ ಎಂದು ಸಚಿವರು ಭರವಸೆ ವ್ಯಕ್ತಪಡಿಸಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
.
ಈ ವಿಮಾನವು ಗುಜರಾತಿನ ಸರದಾರ್ ವಲ್ಲಭ ಭಾಯಿ ಪಟೇಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಅದ ಸ್ವಲ್ಪ ಸಮಯದಲ್ಲಿಯೇ ವೈದ್ಯಕೀಯ ಹಾಸ್ಟೆಲ್ ಕಟ್ಟಡಕ್ಕೆ ಅಪ್ಪಳಿಸಿತ್ತು. ಅಂದು 12 ಮಂದಿ ಸಿಬ್ಬಂದಿ ಸೇರಿದಂತೆ 230 ಪ್ರಯಾಣಿಕರನ್ನು ಈ ದುರಂತ ವಿಮಾನವು ಹೊತ್ತೊಯ್ಯುತ್ತಿತ್ತು.
ದುರ್ಘಟನೆಯಲ್ಲಿ ಒಬ್ಬ ಪ್ರಯಾಣಿಕ ಮಾತ್ರ ಬದುಕುಳಿದಿದ್ದು, ಅಪಘಾತ ಸ್ಥಳದಲ್ಲಿದ್ದ ಸುಮಾರು 29 ಮಂದಿ ಕೂಡ ಈ ದುರಂತದಲ್ಲಿ ಸಾವನ್ನಪ್ಪಿದ್ದರು. ಸುಟ್ಟು ಕರಕಲಾಗಿದ್ದ ಮೃತರ ಗುರುತು ಪತ್ತೆಗಾಗಿ ಕೆಲ ದಿನಗಳನ್ನು ತಗೆದುಕೊಂಡಿತ್ತು. ಸಂಬಂಧಿಕರ ಡಿಎನ್ಎ ಹೋಲಿಕೆ ಮಾಡಿ ಇಲ್ಲಿಯವರೆಗೆ ಸುಮಾರು 135 ಮೃತದೇಹಗಳನ್ನು ಗುರುತಿಸಲಾಗಿದೆ ಎಂದು ವರದಿಯಾಗಿದೆ.