ಇತ್ತೀಚಿನ ಸುದ್ದಿಗಳು ಊರಿನ ಸುದ್ದಿಗಳು ಕರ್ನಾಟಕ ಕಲೆ - ಸಾಹಿತ್ಯ ಕಾರ್ಯಕ್ರಮಗಳು ಚರ್ಚೆಗಳು ಜೀವನಶೈಲಿ ತಂತ್ರಜ್ಞಾನ ಮಂಗಳೂರು ಮನೋರಂಜನೆ ಮಾಹಿತಿ ಮುಂದಿನ ಕಾರ್ಯಕ್ರಮ ವಾಣಿಜ್ಯ ಶುಭಾರಂಭ ಸಂಘ-ಸಂಸ್ಥೆಗಳು ಸಭೆ - ಸಮಾರಂಭ ಸಾಮಾನ್ಯ ಸಿನಿಮಾ ಸ್ಥಳೀಯ
ಮಾ.1 ; ಕರಾವಳಿಗರ ಮನೆ-ಮನದ ದುಬೈ ಕಥೆ; ಪ್ರವಾಸಿ ಜೀವನಕ್ಕೆ ಜೀವ ತುಂಬಿದ ಪುರುಷ..! ''ಪುರುಷೋತ್ತಮನ ಪ್ರಸಂಗ'" ಅಮೋಘ ಆರಂಭಅಭಿನಂದನೆ ಅಭಿಪ್ರಾಯ ಅಭಿವೃದ್ಧಿ ಕಾರ್ಯಗಳು ಇಂದಿನ ಕಾರ್ಯಕ್ರಮ ಇತ್ತೀಚಿನ ಸುದ್ದಿಗಳು ಊರಿನ ಸುದ್ದಿಗಳು ಕರ್ನಾಟಕ ಕಲೆ - ಸಾಹಿತ್ಯ ಕಾರ್ಯಕ್ರಮಗಳು ಚರ್ಚೆಗಳು ಜೀವನಶೈಲಿ ತಂತ್ರಜ್ಞಾನ ಮನೋರಂಜನೆ ಮಾಹಿತಿ ಮುಂದಿನ ಕಾರ್ಯಕ್ರಮ ವಿಶೇಷ ವರದಿ ಸಭೆ - ಸಮಾರಂಭ ಸಾಮಾನ್ಯ ಸಿನಿಮಾ ಸ್ಥಳೀಯ
ಪುತ್ತೂರಿನ ಯುವ ನಿರ್ದೇಶಕ ಕಿಶನ್ ಬಲ್ನಾಡ್ ನಿರ್ದೇಶನದಲ್ಲಿ ಹೊಸ ಚಲನಚಿತ್ರದ ಮುಹೂರ್ತ.Published
8 months agoon
By
Akkare News
ಪುತ್ತೂರು ತಾಲ್ಲೂಕಿನ ಕೋಡಿಂಬಾಡಿ ಗ್ರಾಮದ ಕೋಡಿಯಾಡಿ ಗುತ್ತಿನ ಮನೆಯ ಮೊಮ್ಮಗಳು ಕಾಂತಾರ 1 ರಲ್ಲಿ ನಟಿಸುವ ಮೂಲಕ ಚಿತ್ರರಂಗಕ್ಕೆ ಮೊದಲ ಹೆಜ್ಜೆ ಇರಿಸಿದ್ದಾಳೆ.


ಕೊಡಿಯಾಡಿ ಮನೆಯ ವಾರಿಸೇನ ಜೈನ್ ಮತ್ತು ಮಾಲಿನಿ ದಂಪತಿಗಳ ಪುತ್ರಿ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಹೇರೂರು ಗ್ರಾಮದ ಅನುಶ್ರೀ ಸತೀಶ್ ಜೈನ್ ಮಗಳು ತ್ರಿಶಾ ಜೈನ್ ಕಾಂತಾರ 1 ಚಿತ್ರದಲ್ಲಿ ನಟನೆಯ ಅವಕಾಶ ಗಿಟ್ಟಿಸಿಕೊಂಡ ಬೆಡಗಿ.


ಹೊಂಬಾಳೆ ಪ್ರೋಡಕ್ಷನ್ಸ್ ಅಡಿಯಲ್ಲಿ ವಿಜಯ್ ಕಿರಗಂದೂರು ನಿರ್ಮಾಣದ,ರಿಷಬ್ ಶೆಟ್ಟಿ ನಿರ್ಧೇಶನದ ಬಹು ನಿರೀಕ್ಷಿತ ಕಾಂತಾರ 1 ಚಿತ್ರದ ಚಿತ್ರೀಕರಣ ಕಳೆದ ಜೂ.10ರಿಂದ 30ರವರೆಗೆ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ಸಮೀಪದ ಮಾಸ್ತಿ ಕಟ್ಟೆ ಬಳಿ ನಿರ್ಮಿಸಿದ್ದ ಬೃಹತ್ ಸೆಟ್ ನಲ್ಲಿ ನಿರಂತರವಾಗಿ ನಡೆದಿತ್ತು.ಈ ವೇಳೆ ತ್ರಿಶ ಜೈನ್ 20 ದಿನಗಳ ಕಾಲ ವಿಶೇಷ,ಪುಟ್ಟ ಪಾತ್ರದಲ್ಲಿ ನಟಿಸಿದ್ದಾರೆ,ಚಿತ್ರ ಆಕ್ಟೊಬರ್ 2 ರಂದು ವಿಶ್ವದಾಧ್ಯಂತ ತೆರೆ ಕಾಣಲಿದೆ.
ಇದಲ್ಲದೆ ಜುಲೈ 26ರಿಂದ 29ರವರೆಗೆ ಬಾಳೆಹೊನ್ನೂರಿನ ರಂಭಾಪುರಿ ಪೀಠದಲ್ಲಿ ಚಿತ್ರೀಕರಣಗೊಳ್ಳಲಿರುವ ಜಗ್ಗೇಶ್ ಸಹೋದರ ಕೋಮಲ್ ಅವರ ಚಿತ್ರದ ಪುಟ್ಟ ಪಾತ್ರಕ್ಕೂ ಅವರು ಆಯ್ಕೆಯಾಗಿದ್ದಾರೆ.



ಪಾತ್ರದ ಕುರಿತು ಯಾವುದೇ ಮಾಹಿತಿ ನೀಡದಂತೆ ಪ್ರೋಡಕ್ಚನ್ ಕಡೆಯಿಂದ ಕಟ್ಟು ನಿಟ್ಟಾದ ಸೂಚನೆ ಇರುವ ಕಾರಣ ಯಾವುದೇ ಮಾಹಿತಿ ನೀಡಿಲ್ಲ.

