Published
2 months agoon
By
Akkare News
ಬಿಳಿಯೂರು ಶ್ರೀವಿಷ್ಣು ಮೂರ್ತಿ ಭಜನಾ ಮಂದಿರದ 5ನೇ ವಾರ್ಷಿಕೋತ್ಸವದ ಕಾರ್ಯಕ್ರಮದಲ್ಲಿ ಶೃಂಗೇರಿ ಶ್ರೀ ಶಾರದಾ ಪೀಠದ ಆಸ್ಥಾನ ಸಂಗೀತ ವಾದಕರಾಗಿ ಇತ್ತೀಚಿಗೆ ನೇಮಕಗೊಂಡು, ಸಂಗೀತ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ಗೈದ ಆಕಾಶವಾಣಿಯ ‘ಎ’ ಗ್ರೇಡ್ ಕಲಾವಿದ, ತವಿಲ್ ಮಾಂತ್ರಿಕ ಶ್ರೀ ಡಿ. ಕೆ. ಸುರೇಶ್ ಧರ್ಮಸ್ಥಳ ಇವರನ್ನು ಮಂದಿರದ ನಿರ್ವಹಣಾ ಸಮಿತಿ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.


ಮಂದಿರದ ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು, ಯುವಕ ಮಂಡಲದ ಹಾಗೂ ಯುವತಿ ಮಂಡಳಿಗಳ ಪ್ರತಿನಿಧಿಗಳು, ಗಣ್ಯರು, ಅತಿಥಿಗಳು ಮತ್ತು ಊರ ಸಮಸ್ತರು ಈ ಸಂಧರ್ಭದಲ್ಲಿ ಹಾಜರಿದ್ದರು.











