Connect with us

ಅಂತರರಾಷ್ಟ್ರೀಯ

ಭಾರತ ಮೂಲದ 100 ಪೈಲಟ್‌ಗಳ ರಕ್ಷಣೆ, ತಾಯ್ನಾಡಿಗೆ ಮರಳುತ್ತಿರುವ ವಿಮಾನ ಚಾಲಕರು

Published

on

ಇಂಧನ ಪೂರೈಕೆ ಮೂಲಕ ಭಾರಿ ಪ್ರಮಾಣದಲ್ಲಿ ಹಣ ಸಂಪಾದನೆ ಮಾಡಿ ಶ್ರೀಮಂತ ಪ್ರದೇಶವಾಗಿರುವ ಮಧ್ಯಪ್ರಾಚ್ಯ ಇದೀಗ ಯುದ್ಧದ ಕುಲುಮೆಗೆ ಬಿದ್ದು ಒದ್ದಾಡುತ್ತಿದೆ. ಮಧ್ಯಪ್ರಾಚ್ಯ ಭಾಗದಲ್ಲಿ ಇದೀಗ ಇರಾನ್ ಮತ್ತು ಇಸ್ರೇಲ್ ನಡುವೆ ಬೆಂಕಿ ಹೊತ್ತಿಕೊಂಡು, ಅಮೆರಿಕ ಜೊತೆಗೂಡಿ ಇಸ್ರೇಲ್ ಬೃಹತ್ ಸೇನಾ ಕಾರ್ಯಾಚರಣೆ ನಡೆಸುತ್ತಿದೆ. ಈ ಮೂಲಕ ಇರಾನ್ ವಿರುದ್ಧ ದೊಡ್ಡ ದೊಡ್ಡ ಯುದ್ಧ ವಿಮಾನ ಹಾಗೂ ವಿನಾಶಕಾರಿ ಕ್ಷಿಪಣಿಗಳನ್ನ ಬಳಸಿ ದಾಳಿ ಮಾಡಲಾಗುತ್ತಿದೆ. ಈ ಕಾರಣಕ್ಕೆ ಇರಾನ್ ಕೂಡ ಸೇಡು ತೀರಿಸಿಕೊಳ್ಳಲು ಅರಬ್ ದೇಶಗಳ ಮೇಲೆ, ಅದರಲ್ಲೂ ಅಮೆರಿಕದ ಸೇನಾ ನೆಲೆಗಳು ಇರುವ ಜಾಗಗಳ ಮೇಲೆ ಅಟ್ಯಾಕ್ ಮಾಡುತ್ತಿದೆ. ಇಂತಹ ಸಮಯದಲ್ಲಿ ಭಾರತೀಯ ಪೈಲಟ್‌ಗಳ ರಕ್ಷಣೆಗೆ ವಿಶೇಷವಾದ ಕ್ರಮ ಕೈಗೊಳ್ಳಲಾಗಿದೆ.

ಇರಾನ್ ಸೇನೆ ಕುವೈತ್, ಯುಎಇ, ಕತಾರ್ ಸೇರಿದಂತೆ ಹಲವು ದೇಶಗಳ ಮೇಲೆ ದಾಳಿ ನಡೆಸುತ್ತಿದ್ದು, ಈಗಾಗಲೇ ಅಪಾರ ಪ್ರಮಾಣದ ಹಾನಿ ಆಗಿದೆ. ನೋಡ ನೋಡುತ್ತಲೇ ಇಡೀ ಮಧ್ಯಪ್ರಾಚ್ಯ ರಕ್ತದಲ್ಲೇ ಒದ್ದಾಡುವ ಪರಿಸ್ಥಿತಿ ನಿರ್ಮಾಣ ಆಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಭಾರತ ಮೂಲದ ಸಾವಿರಾರು ಜನ ಮತ್ತು ಪೈಲಟ್‌ಗಳು ಅಲ್ಲಿ ಸಿಲುಕಿ ಒದ್ದಾಡುತ್ತಿದ್ದಾರೆ. ಹೀಗಿದ್ದಾಗ ಕೇಂದ್ರ ಸರ್ಕಾರ ವಿಶೇಷ ಕ್ರಮ ಕೈಗೊಂಡು ಎಲ್ಲರನ್ನೂ ರಕ್ಷಣೆ ಮಾಡಿ ತಾಯ್ನಾಡಿಕೆ ಕರೆದುಕೊಂಡು ಬರುವ ವ್ಯವಸ್ಥೆ ಮಾಡುತ್ತಿದೆ. ಈ ಪೈಕಿ ಇದೀಗ ವಿಶೇಷ ವಿಮಾನ ಒಂದರಲ್ಲಿ ಸುಮಾರು 100 ಪೈಲಟ್‌ಗಳು ಹಾಗೂ 40ಕ್ಕೂ ಹೆಚ್ಚು ವಿಮಾನ ಸಿಬ್ಬಂದಿಯನ್ನು ಭಾರತಕ್ಕೆ ಕರೆದುಕೊಂಡು ಬರಲಾಗುತ್ತಿದೆ. ಯುದ್ಧದ ಭೀತಿ ನಡುವೆ ಈಗ ಮಧ್ಯಪ್ರಾಚ್ಯ ಬಿಟ್ಟು ತಾಯ್ನಾಡು ಭಾರತದ ಕಡೆಗೆ ಹೊರಟಿರುವ ಇವರೆಲ್ಲರೂ, ಈಗ ನಿಟ್ಟುಸಿರನ್ನು ಬಿಟ್ಟಿದ್ದಾರೆ.

ಒಂದು ವಿಮಾನದ ತುಂಬ ಪೈಲಟ್‌ಗಳು! ಯುದ್ಧ ತೀವ್ರತೆ ಮಧ್ಯೆ ದುಬೈನಲ್ಲಿ ಸಿಲುಕಿಕೊಂಡಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಪೈಲಟ್‌ಗಳು ಹಾಗೂ ವಿಮಾನ ಸಿಬ್ಬಂದಿಯನ್ನ ಈಗ ಕೊನೆಗೂ ಅಲ್ಲಿಂದ ಕರೆದುಕೊಂಡು ಬರಲಾಗುತ್ತಿದೆ. ಈ ಕಾರ್ಯಾಚರಣೆ ದೃಶ್ಯಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ ಇಡೀ ವಿಮಾನ ತುಂಬ ಪೈಲಟ್‌ಗಳು ತುಂಬಿ ತುಳುಕುತ್ತಿದ್ದು, ಕ್ಷಿಪಣಿ & ಡ್ರೋನ್ ದಾಳಿ ಭೀತಿ ನಡುವೆ ಭಾರತಕ್ಕೆ ಮರಳುತ್ತಿರುವ ಅವರೆಲ್ಲಾ ಈಗ ಖುಷಿ ಖುಷಿಯಾಗಿದ್ದಾರೆ.

ಫೆಬ್ರವರಿ 28 ಶನಿವಾರ ದಿಢೀರ್ ಇಸ್ರೇಲ್ ಸೇನೆ ಇರಾನ್ ಮೇಲೆ ದಾಳಿ ಶುರು ಮಾಡಿತ್ತು ಶನಿವಾರ ಯುದ್ಧ ಶುರುವಾದ ನಂತರ, ಪರಿಸ್ಥಿತಿ ಕ್ಷಣಕ್ಷಣಕ್ಕೂ ಕೈಮೀರಿ ಹೋಗುತ್ತಾ ಇರುವುದನ್ನು ಕಂಡಿದ್ದ ವಿಮಾನ ಸಿಬ್ಬಂದಿ ಟೆನ್ಷನ್ ಆಗಿದ್ದರು. ಅಲ್ಲದೇ ವಿಮಾನ ಸೇವೆಯನ್ನು ಕೂಡ ದಿಢೀರ್ ಬಂದ್ ಮಾಡಲಾಗಿತ್ತು. ಆದರೆ ಇದೀಗ ಕೆಲ ವಿಮಾನ ನಿಲ್ದಾಣಗಳನ್ನು ತಾತ್ಕಾಲಿಕವಾಗಿ ಶುರು ಮಾಡಲಾಗಿದ್ದು, ಸೀಮಿತವಾದ ಮಟ್ಟದಲ್ಲಿ ವಿಮಾನ ಸೇವೆ ಆರಂಭವಾಗಿದೆ. ಇದೇ ಸಮಯದಲ್ಲಿ ವಿಮಾನಯಾನ ಸಿಬ್ಬಂದಿ ರಕ್ಷಣೆಗೂ ಕ್ರಮ ಕೈಗೊಳ್ಳಲಾಗಿದೆ.

ಯಾವುದೇ ಕ್ಷಣದಲ್ಲಿ ಘೋರ ದಾಳಿ ಇರಾನ್ ನಡೆಸುತ್ತಿರುವ ಪ್ರತಿದಾಳಿಗೆ ಉತ್ತರ ಕೊಡಲು ಅಮೆರಿಕ ಮತ್ತು ಇಸ್ರೇಲ್ ಸಜ್ಜಾಗಿದ್ದು, ಈಗ ಮತ್ತೊಂದು ಸುತ್ತಿನಲ್ಲಿ ಘೋರವಾಗಿ ಇರಾನ್ ಮೇಲೆ ದಾಳಿ ಮಾಡಲು ಸಕಲ ಸಿದ್ಧತೆ ಸಾಗಿವೆ. ಇದೇ ಕಾರಣಕ್ಕೆ ಎಷ್ಟು ಬೇಗ ಆಗುತ್ತೋ ಅಷ್ಟು ಬೇಗ ಮಧ್ಯಪ್ರಾಚ್ಯ ಬಿಟ್ಟು ಹೊರ ಬರಬೇಕಿದೆ ಭಾರತೀಯರು. ಏಕೆಂದರೆ ಈ ಸಮಯದಲ್ಲಿ ಅಮೆರಿಕ ಮತ್ತು ಇಸ್ರೇಲ್ ಸೇನೆಗಳು ದಿಢೀರ್ ಇನ್ನಷ್ಟು ಘೋರವಾಗಿ ದಾಳಿ ಮಾಡಿದರೆ ಇರಾನ್ ಒದ್ದಾಡಲಿದೆ. ಆಗ ಇನ್ನಷ್ಟು ಸೇಡಿನ ಕ್ರಮಗಳಿಗೆ ಅರಬ್ ದೇಶಗಳು ಅಂದ್ರೆ ಕುವೈತ್, ಯುಎಇ, ಕತಾರ್ ಸೇರಿ ಹಲವು ದೇಶಗಳ ಮೇಲೆ ದಾಳಿ ಮಾಡುವ ಸಾಧ್ಯತೆ ಇದೆ. ಹೀಗಾಗಿಯೇ ಕೂಡಲೇ ಅಲ್ಲಿಂದ ಭಾರತೀಯರನ್ನು ಶಿಫ್ಟ್ ಮಾಡಲು ಕ್ರಮ ಕೈಗೊಳ್ಳಲಾಗಿದೆ.

Continue Reading
Click to comment

Leave a Reply

Your email address will not be published. Required fields are marked *

Advertisement