Connect with us

ಇತರ

ನಾಳೆ(ಎ.22)ಬ್ಲಾಕ್ ಕಾಂಗ್ರೆಸ್‌ನಿಂದ ವಲಯಾಧ್ಯಕ್ಷರ ಭೇಟಿ

Published

on

ಪುತ್ತೂರು: ಬೆಲೆ ಏರಿಕೆ ಮಾಡುತ್ತಿರುವ ಕೇಂದ್ರ ಸರಕಾರದ ವಿರುದ್ಧ ಎ.26ರಂದು ಮಂಗಳೂರಿನಲ್ಲಿ ಕಾಂಗ್ರೆಸ್‌ನಿಂದ ನಡೆಯಲಿರುವ ಪ್ರತಿಭಟನೆಯನ್ನು ಯಶಸ್ವಿ ಮಾಡುವುದು ಹಾಗೂ ಕಾಂಗ್ರೆಸ್ ಕಾರ್ಯಕಾರಿಣಿ ವಲಯ ತರಬೇತಿ, ಸಮ್ಮೇಳನ ಹಾಗೂ ಶಾಸಕ ಅಶೋಕ್ ಕುಮಾ‌ರ್ ರೈಯವರು 2 ವರ್ಷದ ಪೂರೈಸಿದ ಸಂಭ್ರಮದ ದಿನಾಚರಣೆಯ ಅಂಗವಾಗಿ ಪುತ್ತೂರು ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ನಿಯೋಗವು ಎ.22ರಂದು ಗ್ರಾಮ ಭೇಟಿ ಹಾಗೂ ಬೂತ್ ಅಧ್ಯಕ್ಷರ ಭೇಟಿ ನಡೆಯಲಿದೆ.

 

ಬೆಳಿಗ್ಗೆ ಬೆಳಗ್ಗೆ 10ಕ್ಕೆ ನರಿಮೊಗರು, 10:30 ಮುಂಡೂರು, 11ಕ್ಕೆ ಸರ್ವೆ, 11:30 ಕೆದಂಬಾಡಿ, ಮಧ್ಯಾಹ್ನ 12ಕ್ಕೆ ಕೆಯ್ಯರು, 12 ಕೊಳ್ತಿಗೆ, 12.30 ಅರಿಯಡ್ಕ, 1ಕ್ಕೆ ಮಾಡೂರು, 01:30 ನೆ.ಮುಳ್ಳೂರು, 2:30 ಪಡವನ್ನೂರು, 3 ಬಡಗನ್ನೂರು, 3:30 ನಿಡ್ನಳ್ಳಿ, ಸಂಜೆ ೪ ಪಾಣಾಜೆ, 4:30 ಬೆಟ್ಟಂಪಾಡಿ, 5 ಒಳಮೊಗರು, 5:30 ಅರ್ಯಾಪು ಹಾಗೂ 6 ಕುರಿಯದಲ್ಲಿ ಗ್ರಾಮ ಭೇಟಿ ನಡೆಯಲಿದೆ.

 

ಪಕ್ಷದ ಪ್ರಮುಖರು, ವಲಯ ಅಧ್ಯಕ್ಷರು, ಬೂತ್ ಅಧ್ಯಕ್ಷರು, ಮುಂಚೂಣಿ ಘಟಕದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ತಮ್ಮ ವಲಯದ ಸಭೆಯಲ್ಲಿ ಭಾಗವಹಿಸುವಂತೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಪ್ರಸಾದ್ ಅಳ್ವ ತಿಳಿಸಿದ್ದಾರೆ.

 

 

 

 

Continue Reading
Click to comment

Leave a Reply

Your email address will not be published. Required fields are marked *

Advertisement