Published
2 years agoon
By
Akkare News
ಪ್ರತಿ ವರ್ಷ ಕಂಪಾನಿಯೋ ಸಂಸ್ಥೆ ಕೊಡುವ ಬಾಹುಬಲಿ ಪ್ರಶಸ್ತಿಯು ಈ ಸಲ ಪುತ್ತೂರು ನೆಮ್ಮದಿ ವೆಲ್ನೇಸ್ ಸೆಂಟರ್ ನ ಮಾಲಕರಾದ ಶ್ರೀ ಪ್ರಭಾಕರ್ ಸಾಲಿಯಾನ್ ಬಾಕಿಲಗುತ್ತು ರವರಿಗೆ ಲಭಿಸಿದೆ. ಇವರು ಕೇವಲ 18ತಿಂಗಳಲ್ಲಿ45ಶಿಬಿರಗಳನ್ನು ಮಾಡಿ ಸುಮಾರು 16000 ಜನರಿಗೆ 83000 ಉಚಿತ ಥೆರಪಿ ಯನ್ನು ನೀಡಿ ಅದೆಷ್ಟೋ ಜನರ ಕಾಯಿಲೆಯನ್ನು ಔಷದಿ ಇಲ್ಲದೆ ಗುಣಪಡಿಸುವ ಮೂಲಕ ಕಂಪನಿಯ ಇತಿಹಾಸದಲ್ಲಿ ಹೊಸ ದಾಖಲೆಯನ್ನು ಮಾಡಿದ್ದಾರೆ.






ತಾ 25-05-2024ರಂದು ಬೆಂಗಳೂರಿನ ಗೋಲ್ಡನ್ ಮೆಟ್ರೋ ಹೋಟೆಲಿನಲ್ಲಿ ನಡೆದ ಸಮಾರಂಭದಲ್ಲಿ ಕಂಪಾನಿಯೋ ಕಂಪನಿಯ ಮುಖ್ಯ ಪ್ರವರ್ಥಕರಾದ ಶ್ರೀ ರತ್ನಾಕರ್ ಶೆಟ್ಟಿ ಮತ್ತು ಶ್ರೀ ಸೀತಾರಾಮ ಶೆಟ್ಟಿ ಮತ್ತು ಲತಾ ಮೇಡಂ ಯವರು ಬಾಹುಬಲಿ ಪ್ರಶಸ್ತಿ ಪ್ರದಾನ ಮಾಡಿದರು.