ನಮ್ಮೊಂದಿಗೆ ಸಂಪರ್ಕ ಸಾಧಿಸಿ

ದಕ್ಷಿಣ ಕನ್ನಡ

ಶಾಸಕ ಅಶೋಕ್ ರೈ ಯವರಿಂದ ಮುಲಾರ್ – ದಂಡನ ಕುಕ್ಕು ಕಾಂಕ್ರೀಟ್ ರಸ್ತೆ ಉದ್ಘಾಟನೆ

Published

on

ಶಾಸಕ ಅಶೋಕ್ ರೈ ಯವರಿಂದ ಮುಲಾರ್ – ದಂಡನ ಕುಕ್ಕು ಕಾಂಕ್ರೀಟ್ ರಸ್ತೆ ಉದ್ಘಾಟನೆ

ಮುಂಡೂರು ಗ್ರಾಮದ ಪಂಜಳ ದಂಡನೆ ಕುಕ್ಕು ಕಾಂಕ್ರೀಟ್ ರಸ್ತೆಯನ್ನು ಪುತ್ತೂರಿನ ಶಾಸಕರಾದ ಅಶೋಕ್ ಕುಮಾರ್ ರೈ ಯವರು ಉದ್ಘಾಟಿಸಿದರು. ಈಗ ನಡೆಯುವ ಎಲ್ಲಾ ಕಾಮಗಾರಿಗಳೂ ಕಾಂಗ್ರೆಸ್ ಸರಕಾರದ ಯೋಜನೆಯಾಗಿದೆ, ಬಿಜೆಪಿ ಸರಕಾರ ಇರುವಾಗ ಗುದ್ದಲಿ ಪೂಜೆಯಾಗಿದೆಯಾದರೂ ಕಾಮಗಾರಿಗೆ ಅನುದಾನ ನೀಡಿದ್ದು ಕಾಂಗ್ರೆಸ್ ಸರಕಾರವಾಗಿದೆ ಎಂದು ಶಾಸಕ ಅಶೋಕ್ ರೈ ಹೇಳಿದರು. ಎಲ್ಲಿ ಕಾಮಗಾರಿ ನಡೆದರೂ ಕಳಪೆಯಾಗದಂತೆ ಜನರೇ ನೋಡಿಕೊಳ್ಳಬೇಕು, ಲಂಚ ಮತ್ತು ಭ್ರಷ್ಟಾಚಾರಕ್ಕೆ ಅವಕಾಶವೇ ಇಲ್ಲ. ಕಳಪೆ ಕಾಮಗಾರಿ ಮಾಡಿದರೆ ಸುಮ್ಮನೇ ಇರುವುದಿಲ್ಲ ಎಂದು ಶಾಸಕರು ಈ ಸಂದರ್ಭದಲ್ಲಿ ತಿಳಿಸಿದರು. ಕಾವು ಹೇಮನಾಥ ಶೆಟ್ಟಿ, ಮುಂಡೂರು ವಲಯ ಕಾಂಗ್ರೆಸ್ ಉಸ್ತುವಾರಿ ಯಾಕುಬ್ ಮುಲಾರ್, ಬೂತ್ ಅದ್ಯಕ್ಷ ಇಬ್ರಾಹಿಂ ಮುಲಾರ್, ಪಂಚಾಯತ್ ಸದಸ್ಯರುಗಳಾದ ಕಮಲೇಶ್, ಮಹಮ್ಮದ್ ಆಲಿ, ದೀಪಿಕಾಕಲ್ಲಗುಡ್ಡೆ, ಸುನಂದ, ಕಾಂಗ್ರೆಸ್ ಪ್ರಮುಖರಾದ ಚಂದ್ರಶೇಖರ ಕಲ್ಲಗುಡ್ಡೆ, ಯೂತ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀಪಾದ್ ಪಾಣಾಜೆ ಮೊದಲಾದ ಪ್ರಮುಖರು ಜೊತೆಗಿದ್ದರು.

Continue Reading
Click to comment

Leave a Reply

Your email address will not be published. Required fields are marked *

Advertisement