ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಜೀವನಶೈಲಿ

ವೈವಾಹಿಕ ಜೀವನದ “ಬೆಳ್ಳಿ ಹಬ್ಬದ ಸಂಭ್ರಮ”ವನ್ನು ಗೋಶಾಲೆಯಲ್ಲಿ ಆಚರಿಸಿದ ಉದ್ಯಮಿ ಶಶಿಧರ್ ಶೆಟ್ಟಿ, ಬರೋಡ.

Published

on

ಬೆಳ್ತಂಗಡಿ: ವೈವಾಹಿಕ ಜೀವನದ ಬೆಳ್ಳಿ ಹಬ್ಬದ ಸಂಭ್ರಮವನ್ನು ಗೋಶಾಲೆಯಲ್ಲಿ ಸರಳವಾಗಿ ಆಚರಿಸುವ ಮೂಲಕ ಉದ್ಯಮಿ ಶಶಿಧರ್ ಶೆಟ್ಟಿ ದಂಪತಿ ಮಾದರಿಯಾಗಿದ್ದಾರೆ.ಡಿಸೆಂಬರ್.07 ರಂದು ಬೆಳ್ತಂಗಡಿ ತಾಲೂಕಿನ ಕಳೆಂಜದಲ್ಲಿರುವ ಸ್ವಾಮೀ ವಿವೇಕಾನಂದ ಸೇವಾಶ್ರಮ ಟ್ರಸ್ಟ್ ಪ್ರವರ್ತಿತ ನಂದಗೋಕುಲ ಗೋಶಾಲೆಗೆ ಪತ್ನಿ ಪ್ರಮೀಳಾ ಶಶಿಧರ್ ಶೆಟ್ಟಿ ಹಾಗೂ ಕುಟುಂಬಸ್ಥರ ಭೇಟಿ ನೀಡಿ ಅಲ್ಲಿನ ಸಮಸ್ಯೆಗಳ ಬಗ್ಗೆ ಚರ್ಚಿಸಿದ್ದಾರೆ.ಈ ವೇಳೆ ಈ ವೇಳೆ ಒಂದು ಲಕ್ಷ ರೂಪಾಯಿ ಮೌಲ್ಯದ ಯಂತ್ರಕ್ಕೆ ಮುಂದಿನ ಹತ್ತು ದಿನಗಳಲ್ಲಿ ನೀಡಲಾಗುವುದು ಎಂಬ ಭರವಸೆ ಇದೆ.

ಈ ವೇಳೆ ಮಾತನಾಡಿದ ಶಶಿಧರ್ ಶೆಟ್ಟಿ ಅವರು ಟ್ರಸ್ಟ್ ನವರು ನನ್ನ ಗಮನಕ್ಕೆ ತಂದಾಗ ಪ್ರಮುಖವಾಗಿ ಗೋವುಗಳಿಗೆ ಅಡಿಕೆ ಹಾಳೆ ಅತ್ಯುತ್ತಮ ಆಹಾರವಾಗಿದೆ ಇದನ್ನು ಹುಡಿ ಮಾಡುವ ಯಂತ್ರದ ಅವಶ್ಯತೆ ಇದ್ದು ಇದಕ್ಕೆ 1.50 ಲಕ್ಷ ರೂ ಅವಶ್ಯತೆ ಇದ್ದರೆ ಒಂದು ವೇಳೆ ಮೇಷನಿಗೆ 50 ಸಾವಿರ ಖರ್ಚಿನ ಹೊರೆ ಇದೆ ಎಂಬ ಮಾಹಿತಿಯೊಂದಿಗೆ ಸಂತೋಷದಿಂದ ಒಪ್ಪಿಗೆ ಸೂಚಿಸಲಾಗಿದೆ. ಖರೀದಿಯ ಬಗ್ಗೆ ತಿಳಿಸಲಾಗುತ್ತಿದೆ.ಅದಲ್ಲದೇ ಮುಂದಿನ ದಿನಗಳಲ್ಲಿ ಗೋ ಶಾಲೆಯ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದೆಯ ರೀತಿಯಲ್ಲಿ ಈ ಗೋ ಶಾಲೆಯ ಮುನ್ನಡೆಯ ಯೋಜನೆಗಳು ಸದಾ ಪ್ರೋತ್ಸಾಹ ನೀಡುತ್ತಿವೆ.ಮುಂದೆ ಗೋ ದೀಪೋತ್ಸವ ಕಾರ್ಯಕ್ರಮಕ್ಕೆ ತನ್ನಿಂದಾಗುವ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ

ಈ ಸಂದರ್ಭದಲ್ಲಿ ಗೋಶಾಲೆಯ ವತಿಯಿಂದ ಶಶಿಧರ್ ಶೆಟ್ಟಿ ದಂಪತಿಗಳನ್ನು ಸನ್ಮಾನಿಸಲಾಯಿತು.ಈ ವೇಳೆ ಟ್ರಸ್ಟ್ ಅಧ್ಯಕ್ಷ ಡಾ.ದಯಾಕರ್, ಕಾರ್ಯದರ್ಶಿ ರಮೇಶ್ ಪ್ರಭು, ಭಾಸ್ಕರ ಧರ್ಮಸ್ಥಳ, ದೀಪೋತ್ಸವ ಸಮಿತಿ ಅಧ್ಯಕ್ಷ ನಾರಾಯಣ ಗೌಡ ಕೊಳಂಬೆ, ಗಣೇಶ್ ಉಜಿರೆ, ಆಶೀರ್ವಚನ, ಶಶಿಧರ್ ಶೆಟ್ಟಿ ಕುಟುಂಬಸ್ಥರು ಸೇರಿದಂತೆ ಅನೇಕರು ಭಾಗವಹಿಸಿದ್ದರು.ಟ್ರಸ್ಟಿ ನವೀನ್ ನೆರಿಯ ಸ್ವಾಗತಿಸಿ, ಧನ್ಯವಾದವಿತ್ತರು.25 ವರ್ಷಗಳ ಕಾಲ ನಿರಂತರವಾಗಿ ತಮ್ಮ ಹುಟ್ಟುಹಬ್ಬದಂದು ವಾರ್ಷಿಕ ರೂ.ಹತ್ತುಸಾವಿರದಂತೆ ಗೋಶಾಲೆಗೆ ನೀಡಿದ್ದರು. ಅದರಂತೆ ಗೋಶಾಲೆಗೆ 2ಲಕ್ಷ 50 ಸಾವಿರ ರೂ. ನೀಡಿದ್ದಾರೆ.

Continue Reading
Click to comment

Leave a Reply

Your email address will not be published. Required fields are marked *

Advertisement