Published
4 hours agoon
By
Akkare Newsಸುಳ್ಯ: ವಾಟ್ಸಾಪ್ ನಲ್ಲಿ ಕೋಮುಪ್ರಚೋದನಕಾರಿ ಸಂದೇಶ ರವಾನೆ ಮಾಡಿದ ಬಗ್ಗೆ ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಗಳೂರು ನ್ಯೂಸ್ 24X7 ಎಂಬ ಹೆಸರಿನ ವಾಟ್ಸ್ ಅಪ್ ಗ್ರೂಪಿನಲ್ಲಿ ವ್ಯಕ್ತಿಯೋರ್ವ ವಿಭಿನ್ನ ಧರ್ಮ/ಕೋಮುಗಳ ನಡುವೆ ವೈರತ್ವವನ್ನು ಉಂಟುಮಾಡುವಂತಹ ಸಂದೇಶಗಳನ್ನು ಪ್ರಸಾರ ಮಾಡಿದ್ದಾನೆ. ಈ ಸಂದೇಶದಿಂದ ಜಿಲ್ಲೆಯಲ್ಲಿ ಕೋಮು ಸೌಹಾರ್ದತೆಗೆ ಧಕ್ಕೆಯಾಗುವ ಸಾಧ್ಯತೆಗಳಿರುವುದರಿಂದ, ಸಂದೇಶವನ್ನು ವಾಟ್ಸಾಪ್ ಗ್ರೂಪ್ ನಲ್ಲಿ ಪ್ರಸಾರ ಮಾಡಿದಾತನ ವಿರುದ್ಧ ದಿನಾಂಕ 07.06.2025 ರಂದು ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ..