Published
2 months agoon
By
Akkare News

ಅಲಂಗ-ಶಿಬರ-ನಡುವಾಲ್ ಪ್ರದೇಶದಲ್ಲಿ ಅನೇಕ ಮನಗಳಿವೆ, ಈ ಮನೆಗಳಿಗೆ ತೆರಳಲು ರಸ್ತೆಯೇ ಇರಲಿಲ್ಲ. ಕಳೆದ ಒಂದು ತಿಂಗಳ ಹಿಂದೆ ಶಾಸಕರ ಕಚೇರಿಗೆ ಬಂದ ಇಲ್ಲಿನ ನಿವಾಸಿಗಳು ತಮ್ಮ ಸಂಕಷ್ಟವನ್ನು ಹೇಳಿಕೊಂಡಿದ್ದರು. ಸ್ಥಳಕ್ಕೆ ಭೇಟಿ ನೀಡಿದ ಶಾಸಕರು ರಸ್ತೆ ನಿರ್ಮಾಣವಾಗುವಲ್ಲಿ , ರಸ್ತೆ ಹಾದುಹೋಗುವ ಜಾಗದ ಮಾಲಿಕರ ಜೊತೆ ಸೌಹಾರ್ಧ ಮಾತುಕತೆ ನಡೆಸಿದ್ದಾರೆ. ಶಾಸಕರ ಮಾತಿಗೆ ಬೆಲೆ ನೀಡಿ ರಸ್ತೆ ಜಾಗ ಬಿಟ್ಟು ಕೊಡಲು ಜಾಗ ಮಾಲಿಕರು ಒಪ್ಪಿಗೆ ನೀಡಿದ್ದರು. ರಸ್ತೆ ನಿರ್ಮಾಣಕ್ಕೆ ಶಾಸಕರು ೫ ಲಕ್ಷ ಅನುದಾನವನ್ನು ಒದಗಿಸಿದ್ದರು.


ರಸ್ತೆ ನಿರ್ಮಾಣವೂ ಆಗಿದೆ . ಆ ರಸ್ತೆಯನ್ನು ಶಾಸಕರು ಶನಿವಾರ ಉದ್ಘಾಟಿಸಿದ್ದಾರೆ. ಈ ವೇಳೆ ಮತನಾಡಿದ ಶಾಸಕರು ರಸ್ತೆ ನಿರ್ಮಾಣಕ್ಕೆ ಜಾಗ ಬಿಟ್ಟು ಕೊಟ್ಟವರನ್ನು ಸ್ಮರಿಸಿದರು. ರಸ್ತೆ ನಿರ್ಮಾಣವಾಗಿರುವ ಬಗ್ಗೆ ಮತ್ಸರದಿಂದ ಶಾಸಕರಿಗೆ ಅಭಿನಂದನೆ ಕೋರಿ ಹಾಕಿದ್ದ ಬ್ಯಾನರನ್ನು ಹರಿದು ಹಾಕಿದ್ದರು. ಕಾರ್ಯಕ್ರಮದಲ್ಲಿ ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ, ವಲಯ ಕಾಂಗ್ರೆಸ್ ಅಧ್ಯಕ್ಷ ಹೊನ್ನಪ್ಪ ಪೂಜಾರಿ ಕೈಂದಾಡಿ, ಪಕ್ಷದ ಪ್ರಮುಖರಾದ ವೇದನಾಥ ಸುವರ್ಣ, ಯಾಕೂಬ್ ಮುಲಾರ್, ಬಾಬು ಶೆಟ್ಟಿ ನರಿಮೊಗರು, ರಾಘವೇಂದ್, ರವೀಂದ್ರ ನೆಕ್ಕಿಲು, ಸೇರಿದಂತೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು, ಗ್ರಾಮಸ್ಥರು, ರಸ್ತೆಯ ಫಲಾನುಭವಿಗಳು ಉಪಸ್ಥಿತರಿದ್ದರು. ರಸ್ತೆಯಲ್ಲಿ ಸಂಚಾರ ಮಾಡಿದ ಶಾಸಕರು ಈ ರಸ್ತೆಯ ಕಾಂಕ್ರಿಟೀಕರಣಕ್ಕೆ ಅನುದಾನವನ್ನು ನೀಡುವುದಾಗಿ ಭರವಸೆ ನೀಡಿದರು.









