Published
6 hours agoon
By
Akkare News

ಪೆಟ್ರೋಲ್, ಡೀಸೆಲ್ ದರ ಹೆಚ್ಚಳಕ್ಕೆ ಸಿಎಂ ಖಂಡನೆ ದೇವಳದ ಸುತ್ತುಪೌಳಿ ಮರುನಿರ್ಮಾಣ. ಯಾಗಶಾಲೆಗಳು, ವಸತಿಗೃಹ ಕಟ್ಟಡಗಳು, ಡಾರ್ಮಿಟರಿ ಕಟ್ಟಡಗಳು, ಸಿಬ್ಬಂದಿಗಳ ವಾಸ್ತವ್ಯಕ್ಕಾಗಿ ವಸತಿಗೃಹ ಕಟ್ಟಡಗಳು, ಅನ್ನದಾಸೋಹ ಭವನ. ಪಾರಂಪರಿಕ ರಥಬೀದಿ ಅಭಿವೃದ್ಧಿ ವಾಣಿಜ್ಯ ಸಂಕೀರ್ಣ ಕಟ್ಟಡ ಹಾಗೂ ಆಶ್ಲೇಷಬಲಿ ಮಂಟಪ ಸೇರಿದಂತೆ ಒಟ್ಟು 19 ಕಾಮಗಾರಿಗಳ ಅಂದಾಜು ಪಟ್ಟಿ ಮತ್ತು ನಕ್ಷೆಗೆ ಕಾರ್ಯಪಾಲಕ ಅಭಿಯಂತರರು, ಲೋಕೋಪಯೋಗಿ ಇಲಾಖೆ, ಮಂಗಳೂರು ವಿಭಾಗ, ಇವರು ತಯಾರಿಸಿರುವ ರೂ. 604.65 ಕೋಟಿ ವೆಚ್ಚದಲ್ಲಿ ಕೈಗೊಳ್ಳಲು ಉದ್ದೇಶಿಸಲಾಗಿದೆ.

ಮುಜರಾಯಿ ಸಚಿವರಾದ ಶ್ರೀ ರಾಮಲಿಂಗ ರೆಡ್ಡಿ ಅವರ ಅಧ್ಯಕ್ಷತೆಯಲ್ಲಿ ದಿನಾಂಕ 17.09.2025 ರಂದು ನಡೆದ 29, 30 ಹಾಗೂ 31ನೇ ಮಾಸ್ಟರ್ ಪ್ಲಾನ್ ಮೇಲ್ವಿಚಾರಣಾ ಸಮಿತಿ ಸಭೆಯಲ್ಲಿ ಚರ್ಚಿಸಿ ತೆಗೆದುಕೊಂಡ ತೀರ್ಮಾನಗಳಂತೆ ಲೋಕೋಪಯೋಗಿ ಇಲಾಖೆಯು ಪ್ರಚಲಿತ ದರಪಟ್ಟಿಯಂತೆ ಒಟ್ಟು ರೂ. 604.65 ಕೋಟಿ ಮೊತ್ತದ ಅಂದಾಜುಪಟ್ಟಿಗಳನ್ನು ತಯಾರಿಸಿ ಸಲ್ಲಿಸಲಾಗಿತ್ತು.



