Published
2 months agoon
By
Akkare News

ಈಗಾಗಲೇ ಪುತ್ತೂರಿಗೆ ಸರ್ಕಾರಿ ಮೆಡಿಕಲ್ ಕಾಲೇಜು ಸೇರಿದಂತೆ ಅನೇಕ ಅಭಿವೃದ್ಧಿ ಯೋಜನೆಗಳನ್ನು ತಂದು ಅಭಿವೃದ್ಧಿ ಕಾರ್ಯ ನಡೆಸುತ್ತಿರುವ ಆಶೋಕ್ ಕುಮಾರ್ ರೈ ಅವರು ಕಾಂಗ್ರೆಸ್ ಸಚಿವ ಸ್ಥಾನಕ್ಕೆ ತೆರೆಮರೆಯ ಪ್ರಯತ್ನ ಮುಂದುವರಿಸಿದ್ದಾರೆ. ಅಧಿನಾಯಕ ರಾಹುಲ್ ಗಾಂಧಿ ಹೇಳಿದಂತೆ ಈ ಬಾರಿ ಯುವಕರಿಗೆ ಆದ್ಯತೆ ಎಂದಾದರೆ, ಅಶೋಕ್ ಕುಮಾರ್ ರೈ ಅವರ ಅದೃಷ್ಟ ಖುಲಾಸಿಯಿಸಿದರೂ ಅಚ್ಚರಿ ಇಲ್ಲ. ಮೊದಲ ಬಾರಿಗೆ ಶಾಸಕರಾದವರಿಗೆ ಸಚಿವ ಸ್ಥಾನ ಇಲ್ಲ ಎಂಬ ಕಾಂಗ್ರೆಸ್ ಅಲಿಖಿತ ನಿಯಮ ಆಗ ಅನ್ವಯ ಆಗದು.



