ಸೇವೆಯೇ ಸಂಭ್ರಮ… ಮಾನವೀಯತೆಯೇ ನಿಮ್ಮ ಪರಿಚಯ ಬಡವರ ಪಾಲಿನ ಆಶಾಕಿರಣ… ಹಿಂದುಳಿದವರ ಪಾಲಿನ ಭರವಸೆ… ಸಮಾಜ ಸೇವೆಯ ಮೌನ ಕ್ರಾಂತಿಯ ಹರಿಕಾರ…

ತಮ್ಮ ಉದ್ಯಮದ ಜವಾಬ್ದಾರಿಗಳೊಂದಿಗೆ ಸಮಾಜದ ಬಡ ಹಾಗೂ ಹಿಂದುಳಿದ ವರ್ಗದ ಕುಟುಂಬಗಳ ಬದುಕಿನಲ್ಲೂ ಬೆಳಕು ಮೂಡಿಸುವ ಮಹತ್ತರ ಕಾರ್ಯದಲ್ಲಿ ನಿರಂತರವಾಗಿ ತೊಡಗಿಸಿಕೊಂಡಿರುವ ಶ್ರೀ ಸದಾನಂದ ಪೂಜಾರಿ ಅವರು, ಬಿಲ್ಲವ ಬ್ರಿಗೇಡ್ (ರಿ.) ಮಂಗಳೂರು ಸಂಘಟನೆಯ ಮೂಲಕ “ನಂದಾದೀಪ” ಯೋಜನೆಗೆ ಚಾಲನೆ ನೀಡಿ, ಈಗಾಗಲೇ ಸುಮಾರು 15 ಬಡ ಕುಟುಂಬಗಳಿಗೆ ಸ್ವಂತ ಮನೆಗಳನ್ನು ನಿರ್ಮಿಸಿ ಹಸ್ತಾಂತರಿಸುವ ಮೂಲಕ ಮಾನವೀಯ ಸೇವೆಯ ಹೊಸ ಅಧ್ಯಾಯವನ್ನೇ ಬರೆದಿದ್ದಾರೆ.

16ನೇ ಮನೆ — ಹುಟ್ಟುಹಬ್ಬದ ವಿಶೇಷ ಕೊಡುಗೆ ತಮ್ಮ ಹುಟ್ಟುಹಬ್ಬದ ದಿನವೇ ನಂದಾದೀಪ ಯೋಜನೆಯ 16ನೇ ಮನೆಯ ಕಾಮಗಾರಿಯನ್ನು ಪೂರ್ಣಗೊಳಿಸಿ, ಬಡ ಕುಟುಂಬವೊಂದಕ್ಕೆ ಆ ಮನೆಯನ್ನು ಹಸ್ತಾಂತರಿಸಿರುವುದು, ಹುಟ್ಟುಹಬ್ಬವನ್ನು ಕೇವಲ ಆಚರಣೆಯಾಗಿ ನೋಡದೆ, ಇನ್ನೊಂದು ಕುಟುಂಬದ ಬದುಕಿಗೆ ನೆಲೆ ನೀಡುವ ಸಾರ್ಥಕ ದಿನವನ್ನಾಗಿ ಮಾಡಿದ ಅಪೂರ್ವ ಸೇವಾ ಕಾರ್ಯವಾಗಿದೆ.
ಇದರೊಂದಿಗೆ ಸೇವೆಯ ಪಯಣ ನಿಲ್ಲದೆ, ನಂದಾದೀಪ ಯೋಜನೆಯ 17ನೇ ಮನೆ ನಿರ್ಮಾಣಕ್ಕೂ ಇದೇ ಸಂದರ್ಭದಲ್ಲಿ ಚಾಲನೆ ನೀಡಲಿದ್ದಾರೆ , ಅವರ ನಿರಂತರ ಸಮಾಜಮುಖಿ ಚಿಂತನೆಗೆ ಸಾಕ್ಷಿಯಾಗಿದೆ. ನಂದಾದೀಪ ಫೌಂಡೇಶನ್ — ಬದುಕಿಗೆ ಬೆಳಕಾಗುವ ಹೆಜ್ಜೆ ಮನೆ ನಿರ್ಮಾಣದ ಸೇವೆಯ ಜೊತೆಗೆ “ನಂದಾದೀಪ ಫೌಂಡೇಶನ್” ಮೂಲಕ ತೀರಾ ಅಗತ್ಯ ನೆರವು ಬೇಕಾಗಿರುವ ಕುಟುಂಬಗಳಿಗೆ ಆರ್ಥಿಕ ಸಹಾಯ, ವಿದ್ಯಾರ್ಥಿಗಳಿಗೆ ಶೈಕ್ಷಣಿಕ ನೆರವು ಸೇರಿದಂತೆ ಹಲವು ಸಮಾಜಮುಖಿ ಕಾರ್ಯಗಳನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದ್ದಾರೆ.

ಧಾರ್ಮಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಕ್ಷೇತ್ರಗಳಲ್ಲೂ ತಮ್ಮದೇ ಆದ ಅಮೂಲ್ಯ ಕೊಡುಗೆ ನೀಡುತ್ತಿರುವ ಅವರು, ಉತ್ತಮ ಸಂಘಟಕರಾಗಿ ಹಾಗೂ ಎಲ್ಲ ಸಮಾಜದ ಜನರೊಂದಿಗೆ ಆತ್ಮೀಯ ಸ್ನೇಹ-ಸಂಬಂಧ ಹೊಂದಿರುವ ಮಾನವೀಯ ವ್ಯಕ್ತಿತ್ವವಾಗಿ ಗುರುತಿಸಿಕೊಂಡಿದ್ದಾರೆ. ಒಂದು ಮನೆ ಕಟ್ಟುವುದು ಎಂದರೆ ಕೇವಲ ಗೋಡೆ ಮತ್ತು ಮೇಲ್ಛಾವಣಿ ನಿರ್ಮಿಸುವುದಲ್ಲ… ಒಂದು ಕುಟುಂಬಕ್ಕೆ ಕನಸು, ನೆಮ್ಮದಿ ಮತ್ತು ಭರವಸೆಯ ಬದುಕನ್ನು ಕಟ್ಟಿಕೊಡುವುದು.

ಅಂತಹ ನಿಸ್ವಾರ್ಥ ಸೇವಾ ಮನೋಭಾವದ ಶ್ರೀ ಸದಾನಂದ ಪೂಜಾರಿ ಅವರಿಗೆ ಭಗವಂತನು ಆಯುಷ್ಯ, ಆರೋಗ್ಯ, ಐಶ್ವರ್ಯ ಹಾಗೂ ಮತ್ತಷ್ಟು ಸಮಾಜಸೇವೆ ಮಾಡುವ ಶಕ್ತಿ ನೀಡಲಿ. ಅವರ ಸೇವಾ ಪಯಣ ಇನ್ನಷ್ಟು ವಿಸ್ತಾರಗೊಂಡು, ಸಾವಿರಾರು ಕುಟುಂಬಗಳ ಬದುಕಿಗೆ ನಂದಾದೀಪವಾಗಿ ಬೆಳಗಲಿ ಎಂದು ಶುಭ ಹಾರೈಸಿದ್ದಾರೆ. ಈ ಸಂದರ್ಭದಲ್ಲಿ ಬಿಲ್ಲವ ಬ್ರಿಗೇಡ್ ಪದಾಧಿಕಾರಿಗಳು, ಸದಾನಂದ ಪೂಜಾರಿ ಯಾವರ ಅನೇಕ ಹಿತೈಷಿಗಳು ಉಪಸ್ಥಿತರಿದ್ದರು.