Published
8 months agoon
By
Akkare News


ಈ ಸಂದರ್ಭದಲ್ಲಿ ಶಾಲೆಗೆ ಕೊಡುಗೆ ನೀಡಿದ ಉಮೇಶ್ ದೇವಾಡಿಗ ಕುಟುಂಬಸ್ಥರಿಗೆ ಶ್ರೀ ಎ ವಿ ನಾರಾಯಣ ರವರು ಮಾತನಾಡಿ ಕೃತಜ್ಞತೆಯನ್ನು ಸಲ್ಲಿಸಿದರು. ಕೊಡುಗೆ ನೀಡಿದ ದಾನಿಗಳ ವತಿಯಿಂದ ಶ್ರೀ ಎಂ ವೇಣುಗೋಪಾಲ್ ರವರು ಮಾತನಾಡಿ ಸಂಸ್ಥೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು ಹಾಗೂ ತಮ್ಮ ಮನೆತನ ಹಾಗೂ ಎವಿಜಿ ಶಾಲೆಯ ಒಡನಾಟದ ಬಗ್ಗೆ ತಿಳಿಸಿ ಕೃತಜ್ಞತೆ ಸಲ್ಲಿಸಿದರು. ಹುಟ್ಟುಹಬ್ಬವನ್ನು ಆಚರಿಸುತ್ತಿರುವ ಪುಟ್ಟ ಮಗುವಿಗೆ ಶಾಲಾ ಶಿಕ್ಷಕಿಯರು ಆರತಿ ಯನ್ನು ಎತ್ತಿ, ತಿಲಕವಿಟ್ಟು ಉಡುಗೊರೆಯನ್ನು ನೀಡಿದರು. ಶಾಲೆಯ ಉಪಾಧ್ಯಕ್ಷರಾದ ಶ್ರೀ ಉಮೇಶ್ ಮಲುವೇಳು, ಆಡಳಿತ ಅಧಿಕಾರಿಯಾಗಿರುವ ಶ್ರೀ ಗುಡ್ಡಪ್ಪಗೌಡ ಬಲ್ಯ ,ನಿರ್ದೇಶಕರಾದ ಶ್ರೀ ಗಂಗಾಧರ ಗೌಡ ,ಉಪ ಪ್ರಾಂಶುಪಾಲರಾದ ಶ್ರೀಮತಿ ಸವಿತಾ ಕುಮಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಆಡಳಿತ ನಿರ್ದೇಶಕರು,ಬೋಧಕ ಬೋಧಕೇತರ ವೃಂದ, ಪೋಷಕರು ಹಾಗೂ ವಿದ್ಯಾರ್ಥಿ ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.
ಶಿಕ್ಷಕಿಯರಾದ ಶ್ರೀಮತಿ ಶ್ವೇತಾ ರವರು ಸ್ವಾಗತಿಸಿ, ಶ್ರೀಮತಿ ಯಶುಭ ರೈ ವಂದಿಸಿದರು ಹಾಗೂ ಶ್ರೀಮತಿ ಸುಚಿತ ರವರು ಕಾರ್ಯಕ್ರಮವನ್ನು ನಿರೂಪಿಸಿದರು .ಕೊನೆಯಲ್ಲಿ ಮಕ್ಕಳಿಗೆ ಸಿಹಿ ತಿಂಡಿಯನ್ನು ವಿತರಿಸಿದರು.












