Connect with us

ಅಪಘಾತ

ಬೈಕ್​ನಲ್ಲಿ ಬರುವಾಗ ಗಾಳಿಪಟದ ದಾರ ತಪ್ಪಿಸಲು ಹೋಗಿ ಪತ್ನಿ, ಮಗಳ ಸಮೇತ ಸೇತುವೆಯಿಂದ ಬಿದ್ದ ಸವಾರ, ಮೂವರು ಸಾವು

Published

on

ಸೂರತ್, ಜನವರಿ 16: ಹುಟ್ಟು ಸಾವು ಎರಡೂ ದೈವ ನಿರ್ಣಯ ಅಂತಾರೆ, ಯಾವುದನ್ನು ಯಾರೂ ತಡೆಯಲು ಸಾಧ್ಯವಿಲ್ಲ. ತಪ್ಪಿಸಲು ಹೋದರೂ ಯಾವುದೇ ಪ್ರಯೋಜನವಾಗುವುದಿಲ್ಲ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ಬೈಕ್​ನಲ್ಲಿ ಬರುವಾಗ ಗಾಳಿಪಟದ ದಾರವನ್ನು ತಪ್ಪಿಸಲು ಹೋಗಿ ವ್ಯಕ್ತಿಯೊಬ್ಬ ಪತ್ನಿ, ಮಗಳ ಸಮೇತ ಸೇತುವೆಯಿಂದ ಕೆಳಗೆಬಿದ್ದು ಸಾವನ್ನಪ್ಪಿರುವ ಘಟನೆ ಗುಜರಾತಿನ ಸೂರತ್​ನಲ್ಲಿ ನಡೆದಿದೆ. ಮಕರ ಸಂಕ್ರಾಂತಿ ದಿನದಂದು ಆಕಸ್ಮಿಕವಾಗಿ ಸೇತುವೆಯಿಂದ ಕೆಳಗೆ ಬಿದ್ದು ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ್ದಾರೆ.

ಮೂಲಗಳ ಪ್ರಕಾರ, ಪಶ್ಚಿಮ ಬಂಗಾಳದ 35 ವರ್ಷದ ರೆಹಾನ್ ರಹೀಮ್ ಶೇಖ್ ಎಂಬ ವ್ಯಕ್ತಿ ತನ್ನ ಪತ್ನಿ ರೆಹಾನಾ (33) ಮತ್ತು ಮಗಳು ಅಲಿಶಾ (10) ಅವರೊಂದಿಗೆ ಬೈಕ್​ನಲ್ಲಿ ಹೋಗುತ್ತಿದ್ದಾಗ ಗಾಳಿಪಟದ ದಾರ ಇದ್ದಕ್ಕಿದ್ದಂತೆ ಅವರ ಎದುರು ಬಂದಿತ್ತು. ಅದನ್ನು ತಪ್ಪಿಸಲು ಹೋಗಿ ಬೈಕ್ ಸೇತುವೆಯ ಮೇಲಿನ ವಿಭಜಕಕ್ಕೆ ಡಿಕ್ಕಿ ಹೊಡೆದು 70 ಅಡಿ ಕೆಳಗೆ ಬಿದ್ದಿದೆ.


ಆ ವ್ಯಕ್ತಿ ಮತ್ತು ಅವರ ಮಗಳು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ, ಆದರೆ ಅವರ ಪತ್ನಿ ತೀವ್ರ ಗಾಯಗೊಂಡಿದ್ದು ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಅವರು ಸಾವನ್ನಪ್ಪಿದ್ದಾರೆ ಎಂದು ಘೋಷಿಸಲಾಯಿತು. ಸಮೀಪದಲ್ಲಿ ಇರಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾ ಅಪಘಾತದ ದೃಶ್ಯಗಳನ್ನು ಸೆರೆಹಿಡಿದಿದೆ. ಜನವರಿ 14 ರಂದು ಸಂಜೆ 5 ಗಂಟೆ ಸುಮಾರಿಗೆ ಇದ್ದಕ್ಕಿದ್ದಂತೆ ಗಾಳಿಪಟದ ದಾರವೊಂದು ಬೈಕಿನ ಮುಂದೆ ಬಂದಿರುವುದನ್ನು ಅದು ತೋರಿಸಿದೆ.

ರೆಹಮಾನ್ ಒಂದು ಕೈಯಿಂದ ಅದನ್ನು ತೆಗೆದುಹಾಕಲು ಪ್ರಯತ್ನಿಸಿದಾಗ, ಅವರ ನಿಯಂತ್ರಣ ತಪ್ಪಿತು, ಮತ್ತು ಬೈಕ್ ವಿಭಜಕಕ್ಕೆ ಡಿಕ್ಕಿ ಹೊಡೆದು, ತಕ್ಷಣವೇ ಸೇತುವೆಯಿಂದ ಬಿದ್ದು, ಆಟೋ ರಿಕ್ಷಾದ ಮೇಲೆ ಬಿದ್ದಿತು.

ಆಟೋ ಚಾಲಕ ಮತ್ತು ಪ್ರತ್ಯಕ್ಷದರ್ಶಿ ಇಕ್ಬಾಲ್ ಮಾತನಾಡಿ, ನಾನು ಸಂಜೆ 5.15 ರ ಸುಮಾರಿಗೆ ಚಹಾ ಕುಡಿಯಲು ಇಲ್ಲಿಗೆ ಬಂದಿದ್ದೆ. ಚಹಾ ಕುಡಿದು ನನ್ನ ರಿಕ್ಷಾದೊಳಗೆ ಕುಳಿತ ತಕ್ಷಣ, ಮೂವರು ಮೇಲಿನಿಂದ ಬಿದ್ದರು, ಒಬ್ಬ ಮಹಿಳೆ, ಒಬ್ಬ ಪುಟ್ಟ ಹುಡುಗಿ ಮತ್ತು ಒಬ್ಬ ಪುರುಷ. ಅವರೆಲ್ಲರೂ ನನ್ನ ಮತ್ತು ನನ್ನ ರಿಕ್ಷಾದ ಮೇಲೆ ಬಿದ್ದರು. ರಿಕ್ಷಾ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ, ಮತ್ತು ನನಗೂ ಕೆಲವು ಸಣ್ಣಪುಟ್ಟ ಗಾಯಗಳಾಗಿವೆ ಎಂದು ಹೇಳಿದರು.

ಅಪಘಾತದ ಬಗ್ಗೆ ವರದಿಯಾದ ತಕ್ಷಣ, ಪೊಲೀಸರು ಸ್ಥಳಕ್ಕೆ ಬಂದು ಶವಗಳನ್ನು ಹೊರತೆಗೆದು, ಮರಣೋತ್ತರ ಪರೀಕ್ಷೆಗೆ ಕಳುಹಿಸಿದರು. ತರೆಹಾನ್ ಆಭರಣ ತಯಾರಕರಾಗಿದ್ದು, ಅವರ ಕುಟುಂಬದ ಏಕೈಕ ಜೀವನಾಧಾರವಾಗಿದ್ದರು ಎಂದು ತಿಳಿದುಬಂದಿದೆ.

Continue Reading
Click to comment

Leave a Reply

Your email address will not be published. Required fields are marked *

Advertisement