ನಮ್ಮೊಂದಿಗೆ ಸಂಪರ್ಕ ಸಾಧಿಸಿ

ದಕ್ಷಿಣ ಕನ್ನಡ

SKSSF ಉಪ್ಪಿನಂಗಡಿ ವಲಯ ವತಿಯಿಂದ ವಿಖಾಯ ಡೇ ಕಾರ್ಯಕ್ರಮ

Published

on

ಉಪ್ಪಿನಂಗಡಿ : SKSSF ಉಪ್ಪಿನಂಗಡಿ ವಲಯ ವತಿಯಿಂದ ವಿಖಾಯ ಡೇ ಕಾರ್ಯಕ್ರಮ, ವಿಖಾಯ ಅಸೆಂಬ್ಲಿ, ಮಾಹಿತಿ ಕಾರ್ಯಾಗಾರ ಹಾಗು ಕರ್ನಾಟಕ ವಿಖಾಯ ಆನ್ಲೈನ್ ರೆಜಿಸ್ಟರೇಷನ್ ಉದ್ಘಾಟನೆ ಕಾರ್ಯಕ್ರಮವು ದಿನಾಂಕ 02 ಅಕ್ಟೋಬರ್ 2023 ರಂದು ಉಪ್ಪಿನಂಗಡಿ ಮಾಲಿಕ್ ದಿನಾರ್ ಜುಮಾ ಮಸೀದಿ ವಠಾರದಲ್ಲಿ ನಡೆಯಿತು.

SKSSF ಉಪ್ಪಿನಂಗಡಿ ವಲಯದ ಉಪಾಧ್ಯಕ್ಷರಾದ ಯೂಸುಫ್ ಪೆದಮಾಲೆ ರವರ ಅಧ್ಯಕ್ಷತೆ ವಹಿಸಿ ಆನ್ಲೈನ್ ರೆಜಿಸ್ಟರೇಷನ್ ಅನ್ನು ಉದ್ಘಾಟಿಸಿ ಮಾತನಾಡಿದರು.

ಉಪ್ಪಿನಂಗಡಿ ಮಾಲಿಕ್ ದಿನಾರ್ ಜುಮಾ ಮಸೀದಿ ಮುದರಿಸ್ ಸಲಾಂ ಫೈಝಿ ಎಡಪಾಲ್ ಉದ್ಘಾಟಿಸಿ ದುಆಗೆ ನೇತೃತ್ವ ನೀಡಿದರು. SKSSF ದಕ್ಷಿಣ ಕನ್ನಡ ಈಸ್ಟ್ ಜಿಲ್ಲಾ ಕಾರ್ಯದರ್ಶಿ ಹಾರಿಸ್ ಕೌಸರಿ ಕೋಲ್ಪೆ SKSSF ವಿಖಾಯ ಬೆಂಗಳೂರು ನಲ್ಲಿ ನಡೆಯುವ ಕಾರ್ಯಕ್ರಮದ ಆನ್ಲೈನ್ ರಿಜಿಸ್ಟರ್ ಬಗ್ಗೆ ಮಾಹಿತಿ ನೀಡಿದರು.

SKSSF ಉಪ್ಪಿನಂಗಡಿ ವಲಯದ ಕೊಶಧಿಕಾರಿ ಝಕರಿಯಾ ಮುಸ್ಲಿಯಾರ್ ಆತೂರು ಅಸೆಂಬ್ಲಿ ಸೆಲ್ಯೂಟ್ ಸ್ವೀಕರಿಸಿದರು. SKSBV ದಕ್ಷಿಣ ಕನ್ನಡ ಜಿಲ್ಲಾ ಚೇರ್ ಮ್ಯಾನ್ ಅಶ್ರಫ್ ಹನೀಫಿ ಶುಭಹಾರೈಸಿದರು.

SKSSF ಉಪ್ಪಿನಂಗಡಿ ವಲಯ ಕಾರ್ಯದರ್ಶಿ ಸಾದಿಕ್ ಕೋಲ್ಪೆ ಸ್ವಾಗತಿಸಿದರು. SKSSF ಉಪ್ಪಿನಂಗಡಿ ವಲಯದ ವಿಖಾಯ ಕಾರ್ಯದರ್ಶಿ ಇಸ್ಮಾಯಿಲ್ ತಂಗಳ್ ಉಪ್ಪಿನಂಗಡಿ ವಂದಿಸಿದರು.

ಕಾರ್ಯಕ್ರಮದಲ್ಲಿ SKSSF ಕಾರ್ಯಕರ್ತರು, ಆಕ್ಟಿವ್ ವಿಂಗ್ ಹಾಗು ವಿಜಿಲೆಂಟ್ ಕಾರ್ಯಕರ್ತರು ಭಾಗವಹಿಸಿದರು.

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version