ನಮ್ಮೊಂದಿಗೆ ಸಂಪರ್ಕ ಸಾಧಿಸಿ

ದಕ್ಷಿಣ ಕನ್ನಡ

ಜಗತ್ತಿನಲ್ಲಿ ಶಾಂತಿ , ಸಮಾಧಾನ , ಸೌಹಾರ್ದತೆ ಸಾರುವುದೇ ಪ್ರವಾದಿ ಸಂದೇಶ – ಸತ್ತಾರ್ ಕೌಸರಿ

Published

on

 

 

ತಿಂಗಳಾಡಿ: ಜಗತ್ತಿನಲ್ಲಿ ಶಾಂತಿ , ಸಮಾಧಾನ , ಸೌಹಾರ್ದತೆ , ಪರಸ್ಪರ ಪ್ರೀತಿ ತೋರುವುದೇ ಪ್ರವಾದಿಯ ವರ ಸಂದೇಶ , ದೇಶ ದೇಶಗಳ ಮಧ್ಯೆ , ರಾಜ್ಯ- ರಾಜ್ಯಗಳ ಮಧ್ಯೆ , ನಮ್ಮ ನೆರೆ ಯವರೊಂದಿಗೆ ಪರಸ್ಪರ ಸ್ನೇಹ , ಪ್ರೀತಿಯನ್ನು ಸಾರುವುದು , ಅನ್ಯೋನ್ಯತೆಯನ್ನು ಬೆಳೆಸುವುದು ಲೋಕ ಪ್ರವಾದಿ ಮುಹಮ್ಮದ್ ಮುಸ್ತಫ ( ಸ. ಅ ) ರವರ ಸಂದೇಶವಾಗಿದೆ. ನಮ್ಮ ಜೀವನದಲ್ಲಿ ಪ್ರವಾದಿ ಜೀವನವನ್ನು ಅಳವಡಿಸೋಣ ಎಂದು ಸತ್ತಾರ್ ಕೌಸರಿ ಕರೆ ನೀಡಿದರು.

ಜಿಸ್ತಿಯಾ ಮದ್ರಸ ತಿಂಗಳಾಡಿಯಲ್ಲಿ ನಡೆದ ಮೀಲಾದ್ ಫೆಸ್ಟ್ ಕಾರ್ಯಕ್ರಮದಲ್ಲಿ ಸಂದೇಶ ಭಾಷಣ ಮಾಡಿದರು.

 

ಮದ್ರಸ ಸಮಿತಿ ಅದ್ಯಕ್ಷರಾದ ಸಿದ್ದೀಕ್ ಸುಲ್ತಾನ್ ಅದ್ಯಕ್ಷತೆ ವಹಿಸಿದ್ದರು. ತ್ಯಾಗರಾಜೆ ಖತೀಬರಾದ ನಾಸಿರ್ ಫೈಝಿ ಉದ್ಘಾಟಿಸಿದರು.

 

ಸಭೆಯಲ್ಲಿ ಮದ್ರಸ ಸಮಿತಿ ಗೌರವಾದ್ಯಕ್ಷರಾದ ಮಹಮ್ಮದ್ ಹಾಜಿ ಸಂತೋಷ್ , ಮದ್ರಸ ಸಮಿತಿ ಉಪಾದ್ಯಕ್ಷರಾದ ಮಹಮ್ಮದ್ ಕುಂಞಿ , ಕಾರ್ಯದರ್ಶಿ ಅಬ್ದುಲ್ಲ ಪಟ್ಟೆ , ಮದ್ರಸ ಅಧ್ಯಾಪಕ ಇಸ್ಮಾಯಿಲ್. ಕೌಸರಿ , ಕಾರ್ಯದರ್ಶಿ ಇಬ್ರಾಹಿಂ ಹಾಜಿ , ಕೋಶಾಧಿಕಾರಿ ಹಮೀದ್ ದರ್ಬೆ , ಉದ್ಯಮಿ ಪಿ. ಕೆ. ಮಹಮ್ಮದ್ , ಯುವ ಉದ್ಷಮಿ ನೌಫಲ್ ಅಜ್ಜಿಕಲ್ಲು , ಶರೀಫ್ ತ್ಯಾಗರಾಜೆ , ತಿಂಗಳಾಡಿ ಮಸೀದಿ ಅದ್ಯಕ್ಷರಾದ ಸಿದ್ದೀಕ್ ಮದ್ರಸ ಸಮಿತಿ ಪದಾಧಿಕಾರಿಗಳಾದ ರಝಾಕ್ ದರ್ಬೆ , ಶಕೀಲ್ ಬೇರಿಕೆ , ಹಾರಿಸ್ ಬೋಳೋಡಿ , ಲತೀಫ್ ಅಂಙನ್ತಡ್ಕ , ಲತೀಫ್ ಆದ್ರೋಡಿ , ಹಾರಿಸ್ ತೋಟ ಹಾಗು ಇಸ್ಮಾಯಿಲ್ , ಸುಫಿಯಾನ್ , ಹನೀಫ್ ಪಟ್ಟೆ ಉಪಸ್ಥಿತರಿದ್ದರು.

 

ಮದ್ರಸ ವಿದ್ಯಾರ್ಥಿಗಳಿಂದ ಕಲಾ ಸಾಹಿತ್ಯ ಕಾರ್ಯಕ್ರಮ ಹಾಗು ಕೆ. ಐ. ಸಿ. ವಿದ್ಯಾರ್ಥಿಗಳಿಂದ ಬುರ್ದಾ ಕಾರ್ಯಕ್ರಮ ನಡೆಯಿತು. ಕೆ. ಐ. ಸಿ. ವಿದ್ಯಾರ್ಥಿ ಕಾರ್ಯಕ್ರಮ ನಿರೂಪಿಸಿದರು.

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version