ನಮ್ಮೊಂದಿಗೆ ಸಂಪರ್ಕ ಸಾಧಿಸಿ

ದಕ್ಷಿಣ ಕನ್ನಡ

ಬಡಗನ್ನೂರು: ಪಡುಮಲೆ ಎರುಕೊಟ್ಯ ಶ್ರೀ ನಾಗಬ್ರಹ್ಮ ಸನ್ನಿಧಿಯಲ್ಲಿ ನವರಾತ್ರಿ ಮಹೋತ್ಸವ

Published

on

ಬಡಗನ್ನೂರು: ಪಡುಮಲೆ ಎರುಕೊಟ್ಯ ಶ್ರೀ ನಾಗಬ್ರಹ್ಮ ಸನ್ನಿಧಿಯಲ್ಲಿ ನವರಾತ್ರಿ ಮಹೋತ್ಸವ ಅಂಗವಾಗಿ ಅ.19ರಂದು ಶ್ರೀ ದೇವಿ (ದೇಯಿಬೈದೆತಿ)ಗೆ , ಶ್ರೀ ನಾಗಬಿರ್ಮೆರ್ ಮತ್ತು ನಾಗದೇವರ ಕ್ಷೇತ್ರದಲ್ಲಿ ಹಣತೆಯ ಅಲಂಕಾರದಲ್ಲಿ ಸಂಭ್ರಮದಿಂದ ದೀಪೋತ್ಸವ ಕಾರ್ಯಕ್ರಮ ನಡೆಯಿತು.

 

ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಮತ್ತು ಪಡುಮಲೆ ಕೋಟಿ ಚೆನ್ನಯ ಸಂಚಲನ ಸಮಿತಿ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ ದೀಪ ಪ್ರಜ್ವಲಿಸುವ ಮೂಲಕ ಚಾಲನೆ ನೀಡಿದರು. ಬಳಿಕ ಶ್ರೀ ದೇವಿ (ದೇಯಿಬೈದೆತಿ)ಗೆ ಶ್ರೀ ನಾಗಬಿರ್ಮೆರಿಗೆ ಮತ್ತು ನಾಗದೇವರಿ ಅಲಂಕಾರ ಪೂಜೆ ನಡೆದು, ವಿಶೇಷ ತಂಬಿಲ ಸೇವೆ ನಡೆಯಿತು. ತದನಂತರ ಮಹಾಪೂಜೆ, ಪ್ರಸಾದ ವಿತರಣೆ ನಡೆಯಿತು.

ಈ ಸಂದರ್ಭದಲ್ಲಿ ರಂಜಾನ್ ಮಿಜಾರ್, ಜಿತೇಂದ್ರ ಸುವರ್ಣ, ಸುಧಾಮ ಬಿಜಾರ್, ಅಶೋದ್ ಕೋಟ್ಯಾನ್, ಸುರೇಶ್ಚಂದ್ರ ಕೋಟ್ಯಾನ್, ಚರಣ್, ಗೋಪಾಲ ಸುವರ್ಣ ಗೆಣಸಿನಕುಮೇರು, ಗುರುಪ್ರಸಾದ್ ರೈ ಕುದ್ಕಾಡಿ, ಬಾಲಕೃಷ್ಣ ಏರಾಜೆ, ಕೊರಗಪ್ಪ ರೈ ಮೇಗಿನಮನೆ ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version