Published
2 months agoon
By
Akkare Newsಪುತ್ತೂರು ಎಪ್ರಿಲ್ 24: ಪುತ್ತೂರು ಕಾಂಗ್ರೇಸ್ ನಲ್ಲಿ ದುಷ್ಟಕೂಟಗಳಿವೆ ಎಂದು ಹೇಳಿಕೆ ನೀಡಿದ್ದ ಪುತ್ತೂರು ನಗರ ಕಾಂಗ್ರೇಸ್ ಅಧ್ಯಕ್ಷ ಮಹಮ್ಮದ್ ಆಲಿ ಹೇಳಿಕೆಗೆ ಶಾಸಕ ಅಶೋಕ್ ರೈ ಪ್ರತಿಕ್ರಿಯಿಸಿದ್ದು, ಕಾಂಗ್ರೇಸ್ ನಲ್ಲಿ ಅಂತಹ ದುಷ್ಟಕೂಟಗಳಿಲ್ಲ, ಆದರೆ ಅವರ ಅಲೋಚನೆಗೆ ಬಿಟ್ಟಿದ್ದು ಎಂದಿದ್ದಾರೆ.
ಪುತ್ತೂರು ನಗರಸಭೆ ಯ ಪ್ರಮುಖ ಯೋಜನೆ ಯು ಜಿ ಡಿ ಗೆ ರಿಯಲ್ ಎಸ್ಟೇಟ್ ಅಡ್ಡಿ : ಎಚ್ ಮೊಹಮ್ಮದ್ ಆಲಿ ಆರೋಪಕ್ಕೆ ಶಾಸಕರಾದ ಅಶೋಕ್ ಕುಮಾರ್ ರೈ ಯವರು ಪ್ರತಿಕ್ರಯಿಸಿ, ಲೇ ಔಟ್ ನಿಂದ ನಗರಸಭೆಗೆ ಲಾಭವೇ ಆಗಲಿದೆ ಅದರಿಂದ ಏನು ತೊಂದರೆ ಇಲ್ಲ, ಇದರಲ್ಲಿ ರಿಯಲ್ ಎಸ್ಟೇಟ್ ನವರ ಪಾತ್ರ ಏನೂ ಇಲ್ಲ ಎಂದು ಹೇಳಿರುತ್ತಾರೆ.