Connect with us

ಇಂದಿನ ಕಾರ್ಯಕ್ರಮ

ಸರ್ವೆಯಲ್ಲಿ ಅಶೋಕ ಜನಮನ ಪ್ರಚಾರ ಸಭೆ…

Published

on

ಸರ್ವೆ.. ಪುತ್ತೂರಿನ ಶಾಸಕರಾದ ಅಶೋಕ್ ಕುಮಾರ್ ರೈ ಯವರ ಸಾರಥ್ಯದಲ್ಲಿ ಇದೇ ಬರುವ ದಿನಾಂಕ 20 ರಂದು ನಡೆಯುವ ಅಶೋಕ ಜನಮನ ಕಾರ್ಯಕ್ರಮದ ಪ್ರಚಾರ ಕಾರ್ಯಕ್ರಮ ಸರ್ವೆ ಕಲ್ಪಣೆ ಸಮುದಾಯ ಭವನದಲ್ಲಿ ನಡೆಯಿತು.

. ರೈ ಎಜುಕೇಷನ್ & ಚಾರಿಟೇಬಲ್ ಟ್ರಸ್ಟ್ ನ ಉದ್ಯಮಿಯೂ , ಪುತ್ತೂರು ನಗರಾಭಿವಧ್ದಿ ಪ್ರಾಧಿಕಾರದ ಸದಸ್ಯರೂ ಆದ ನಿಹಾಲ್ . ಪಿ. ಶೆಟ್ಟಿ ಕಾರ್ಯಕ್ರಮ ಸಂಪೂರ್ಣ ಮಾಹಿತಿ ನೀಡಿದರು. ಧಾರ್ಮಿಕ ಪರಿಷತ್ ಜಿಲ್ಲಾ ಸದಸ್ಯರಾದ ಶಿವನಾಥ ರೈ ಮೇಗಿನಗುತ್ತು ಅವರು ಸಭೆಯಲ್ಲಿ ಮಾತನಾಡಿದರು. ಸರ್ವೆ ವಲಯ ಕಾಂಗ್ರೆಸ್ ಅದ್ಯಕ್ಷರಾದ ಕಮಲೇಶ್ ಎಸ್. ವಿ. ಯವರು ಸ್ವಾಗತಿಸಿ ಪ್ರಾಸ್ತಾವಿಕ ವಾಗಿ ಮಾತನಾಡಿದರು.

ಸಭೆಯಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ಮಹಮ್ಮದ್ ಆಲಿ ನೇರೋಳ್ತಡ್ಕ , ವಿಜಯಾ. ಕರ್ಮಿನಡ್ಕ, ಮಾಜಿ ಸದಸ್ಯರಾದ ಶರೀಪ್. ಎಸ್. ಎಂ., ರಾಮಚಂದ್ರ ಸೊರಕೆ , ಯತೀಶ್ ರೈ ಮೇಗಿನ ಗುತ್ತು , ಹಂಝ ಎಲಿಯ , ತಾ. ಪಂ. ಮಾಜಿ ಸದಸ್ಯರಾದ ಸುನೀತಾ ಸರ್ವೆ , ಸಿ. ಎ. ಬ್ಯಾಂಕ್ ನಿರ್ದೇಶಕರಾದ ಕೊರಗಪ್ಪ ಸೊರಕೆ , ಆನಂದ ಪೂಜಾರಿ ಪಕ್ಷದ ಪ್ರಮುಖರಾದ ಶಶಿಧರ್. ಎಸ್. ಡಿ, ಹಮೀದ್ ನೇರೋಳ್ತಡ್ಕ ,ಅಝೀಝ್ ರೆಂಜಲಾಡಿ , ಚಂದ್ರಶೇಖರ ನೆಕ್ಕಿಲು , ಅಶ್ರಫ್ ಕೂಡುರಸ್ತೆ , ಆಸಿಫ್ ರೆಂಜಲಾಡಿ , ಅಶೋಕ ಸೊರಕೆ , ತಾಜು ರಪೀಕ್ , ಝೈನುದ್ದೀನ್ , ಇಸ್ಮಾಯಿಲ್ ಮುಂತಾದವರು ಉಪಸ್ಥಿತರಿದ್ದರು.

ಅಶೋಕ ಜನ- ಮನ ಪ್ರಚಾರ ಸಮಿತಿ ಸದಸ್ಯರಾದ ಸಿದ್ದೀಕ್ ಸುಲ್ತಾನ್ ಧನ್ಯವಾದಗೈದರು.


 

Continue Reading
Click to comment

Leave a Reply

Your email address will not be published. Required fields are marked *

Advertisement