ಬೆಟ್ಟಂಪಾಡಿ ಸರಳೀಕಾನ ನಿವಾಸಿ ಸಶಿತ್ ಎಸ್ ಇವರು ದಿನಾಂಕ 13.5.26 ರಂದು ಸಂಜೆ ಕೆಲಸ ಮುಗಿಸಿ ಮನೆಗೆ ತೆರಳುವ ಸಂಧರ್ಭದಲ್ಲಿ ಬೈಕ್ ಮತ್ತು ಟಾಟಾ ಏಸ್ ನಡುವೆ ನಡೆದ ಅಪಘಾತದಲ್ಲಿ ತಮ್ಮ ಬಲ ಕಾಲಿನ ಎಲುಬು, ಸೊಂಟದ ಪಕ್ಕೆಲುಬು, ಎಡಕೈಯ ಎಲುಬು, ಬಲಗೈ ಎರಡು ಬೆರಳುಗಳು, ಮತ್ತು ಕುತ್ತಿಗೆಯ ಭಾಗಕ್ಕೆ ತೀರ್ವವಾದ ಗಾಯಗಳಾಗಿದ್ದು ಮಂಗಳೂರಿನ ಕೆ ಎಸ್ ಹೆಗ್ಡೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಇವರ ಆಪರೇಷನ್ ಗೆ ಅಂದಾಜು 6 ರಿಂದ 7 ಲಕ್ಷ ಬೇಕಾಗಿದ್ದು ಅಷ್ಟು ಮೊತ್ತವನ್ನು ಭರಿಸುವ ಸಾಮರ್ಥ್ಯ ಇವರಿಗೆ ಇಲ್ಲದಿರುವ ಕಾರಣ ಇವರ ಕುಟುಂಬಕ್ಕೆ ನೆರವಾಗೋಣ.