ನಮ್ಮೊಂದಿಗೆ ಸಂಪರ್ಕ ಸಾಧಿಸಿ

ದಕ್ಷಿಣ ಕನ್ನಡ

ಬೆಂಗಳೂರಿನಲ್ಲಿ ಬೆಂಗಳೂರು ಕಂಬಳ.. ನಮ್ಮಕಂಬದಳ, ಸಮಿತಿಯ ಮಹತ್ವದ ಸಭೆ

Published

on

  • ಕಂಬಳದ ಮೂಲಕ ತುಳು ಭವನ ಮಾಡುವ ಕನಸು : ಅಶೋಕ್ ಕುಮಾರ್ ರೈ

 

 

ಬೆಂಗಳೂರು :ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲಾ ಕಂಬಳ ಸಮಿತಿ(ರಿ),ತುಳು ಕೂಟ ಬೆಂಗಳೂರು, ದಕ್ಷಿಣ ಕನ್ನಡ ಉಡುಪಿ ಜಿಲ್ಲಾ ಸರ್ವ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ, ಬೆಂಗಳೂರು ಕಂಬಳ ಸಮಿತಿ ಅರ್ಪಿಸುವ, ಬೆಂಗಳೂರು ಕಂಬಳ ನಮ್ಮ ಕಂಬಳ ಇದರ ಮಹತ್ವದ ಸಭೆ ಇಂದು ಬೆಂಗಳೂರಿನಲ್ಲಿ ನಡೆಯಿತು.

ಬೆಂಗಳೂರಿನ ರಾಜಾಜಿನಗರದ ಕದಂಬ ವೆಜ್ ಬೆಂಗಳೂರು ನಲ್ಲಿ ಬೆಂಗಳೂರು ಕಂಬಳ ನಮ್ಮ ಕಂಬಳ ಸಮಿತಿಯ ಅಧ್ಯಕ್ಷರಾದ, ಅಶೋಕ್ ಕುಮಾರ್ ರೈ,ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಮಿತಿಯ ಪ್ರಮುಖರಾದ ಉದ್ಯಮಿ ಗುಣರಂಜನ್ ಶೆಟ್ಟಿ, ಗುರುಕಿರಣ್ ಮತ್ತು ಬಂಟರ ಸಂಘ ಬೆಂಗಳೂರು ಇದರ ಅಧ್ಯಕ್ಷರಾದ ಮುರಳಿದರ ಹೆಗ್ಡೆ, ಮಾಜಿನಗರ ಪಾಲಿಕೆ ಸದಸ್ಯರಾದ, ಉಮೇಶ್ ಶೆಟ್ಟಿ ರಾಜೇಂದ್ರ ಕುಮಾರ್, ಹೋಟೆಲ್ ಮಾಲಕರ ಅಧ್ಯಕ್ಷರಾದ, ಬಿ.ಸಿ.ರಾವ್, ಮೊದಲದವರು ಉಪಸ್ಥಿತರಿದ್ದರು. ಸಭೆಯಲ್ಲಿ ವಿವಿಧ ಸಹಸಮಿತಿ ಗಳನ್ನು ರಚಿಸಲಾಯಿತು. ಅಶೋಕ್ ರೈ, ಗುಣರಂಜನ್ ಶೆಟ್ಟಿ, ಗುರುಕಿರಣ್, ಅವರನ್ನು ಬೆಂಗಳೂರು ಸಮಿತಿಯ ಪರವಾಗಿ ಸನ್ಮಾನಿಸಲಾಯಿತು.

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version