ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಸ್ಥಳೀಯ

ಲೋಕಸಭಾ ಚುನಾವಣೆ: ಕಾಂಗ್ರೆಸ್ ನಿಂದ ಭರ್ಜರಿ ತಯಾರಿ, ದ.ಕ ಜಿಲ್ಲಾ ಕಾಂಗ್ರೆಸ್ ನಿಂದ ವೀಕ್ಷಕರ ನೇಮಕ

Published

on

ಮಂಗಳೂರು: ಮುಂಬರುವ ಲೋಕಸಭಾ ಚುನಾವಣೆ ಸಜ್ಜಾಗುತ್ತಿರುವ ದ.ಕ. ಜಿಲ್ಲಾ ಕಾಂಗ್ರೆಸ್ ಸಮಿತಿಯು ಈಗಾಗಲೇ ವಿಧಾನಸಭಾ ಕ್ಷೇತ್ರ ಹಾಗೂ ಬ್ಲಾಕ್ ಕಾಂಗ್ರೆಸ್ ವ್ಯಾಪ್ತಿಗೆ ನೂತನ ವೀಕ್ಷಕರನ್ನು ನೇಮಿಸಿ ಆದೇಶ ಹೊರಡಿಸಿದೆ.

 

ನಿಯೋಜಿತ ವೀಕ್ಷಕರು ಈ ಕೂಡಲೇ ತಮಗೆ ವಹಿಸಲಾಗಿರುವ ವಿಧಾನಸಭಾ ಕ್ಷೇತ್ರ ಮತ್ತು ಬ್ಲಾಕ್ ಕಾಂಗ್ರೆಸ್ ವ್ಯಾಪ್ತಿಗಳಿಗೆ ತೆರಳಿ ಸ್ಥಳೀಯ ಶಾಸಕರು, ಮಾಜಿ ಶಾಸಕರು, 2023ರ ವಿಧಾನಸಭಾ ಅಭ್ಯರ್ಥಿಗಳು, ಬ್ಲಾಕ್ ಅಧ್ಯಕ್ಷರು ಹಾಗೂ ಸ್ಥಳೀಯ ಮುಖಂಡರೊಂದಿಗೆ ಸಭೆ ನಡೆಸಿ ಬೂತ್ ಮಟ್ಟದಲ್ಲಿ ಕಾರ್ಯಕ್ರಮ ನಡೆಸಬೇಕು. ಈ ನಿಟ್ಟಿನಲ್ಲಿ ಚುನಾವಣೆ ಮುಗಿಯುವವರೆಗೂ ಅಲ್ಲಿಯೇ ಹಾಜರಿದ್ದು, ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯ ಗೆಲುವಿಗೆ ಶ್ರಮಿಸಲು ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಹರೀಶ್ ಕುಮಾರ್ ಸೂಚಿಸಿದ್ದಾರೆ.

 

ವಿಧಾನ ಸಭಾಕ್ಷೇತ್ರ:

 

ಬೆಳ್ತಂಗಡಿ – ಎಂ.ಎಸ್.ಮಹಮ್ಮದ್

ಮೂಡಬಿದ್ರೆ – ಮಹಾಬಲ ಮಾರ್ಲ

ಮಂಗಳೂರು ನಗರ ಉತ್ತರ – ಕೆ.ಶುಭೋದಯ ಆಳ್ವ

ಮಂಗಳೂರು ನಗರ ದಕ್ಷಿಣ – ಪ್ರತಿಭಾ ಕುಳಾಯಿ

ಮಂಗಳೂರು – ಎ.ಸಿ. ವಿನಯರಾಜ್

ಬಂಟ್ವಾಳ – ಆರ್.ಕೆ. ಪೃಥ್ವಿರಾಜ್

ಪುತ್ತೂರು – ಶಶಿಧರ್ ಹೆಗ್ಡೆ

ಸುಳ್ಯ – ದುರ್ಗಪ್ರಸಾದ್ ರೈ ಕುಂಬ್ರ

ಬ್ಲಾಕ್ ಕಾಂಗ್ರೆಸ್ ವ್ಯಾಪ್ತಿ:

 

ಬೆಳ್ತಂಗಡಿ ನಗರ ಬ್ಲಾಕ್ – ಮೊಹಮ್ಮದ್ ಅಲಿ ಪುತ್ತೂರು

ಬೆಳ್ತಂಗಡಿ ಗ್ರಾಮೀಣ ಬ್ಲಾಕ್ – ಸತೀಶ್ ಕುಮಾರ್ ಕೆಡಿಂಜೆ

ಮೂಡಬಿದ್ರೆ ಬ್ಲಾಕ್ – ಅನಿಲ್ ಕುಮಾರ್

ಮುಲ್ಕಿ ಬ್ಲಾಕ್ – ಪ್ರವೀಣ್ ಚಂದ್ರ ಆಳ್ವ

ಸುರತ್ಕಲ್ ಬ್ಲಾಕ್ – ಗಿರೀಶ್ ಶೆಟ್ಟಿ

ಗುರುಪುರ ಬ್ಲಾಕ್ – ಪುರಂದರ ದೇವಾಡಿಗ

ಮಂಗಳೂರು ನಗರ ಬ್ಲಾಕ್ – ಮೊಹಮ್ಮದ್ ಕುಂಜತ್ತಬೈಲ್

ಮಂಗಳೂರು ದಕ್ಷಿಣ ಬ್ಲಾಕ್ – ಚಿತ್ತರಂಜನ್ ಶೆಟ್ಟಿ ಬೊಂಡಾಲ

ಉಳ್ಳಾಲ ಬ್ಲಾಕ್ – ಟಿ.ಕೆ.ಸುಧೀರ್

ಮುಡಿಪು ಬ್ಲಾಕ್ – ನೀರಜ್ ಚಂದ್ರಪಾಲ್

ಬಂಟ್ವಾಳ ಬ್ಲಾಕ್ – ಮಹೇಶ್ ರೈ ಕಾವು

ಪಾಣೆಮಂಗಳೂರು ಬ್ಲಾಕ್ – ಗಣೇಶ್ ಪೂಜಾರಿ

ಪುತ್ತೂರು ಬ್ಲಾಕ್ – ಜಯಪ್ರಕಾಶ್ ರೈ

ವಿಟ್ಲ ಉಪ್ಪಿನಂಗಡಿ ಬ್ಲಾಕ್ – ಉಮ್ಮರ್ ಫಾರೂಕ್ ಪುದು

ಸುಳ್ಯ ಬ್ಲಾಕ್ – ಭಾಸ್ಕರ್ ಗೌಡ ಕೋಡಿಂಬಾಳ

ಕಡಬ ಬ್ಲಾಕ್ – ಉಮನಾಥ್ ಶೆಟ್ಟಿ

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version