Published
2 months agoon
By
Akkare News
ಪುತ್ತೂರು.ಜ.06: ಪುತ್ತೂರು ತಾಲೂಕು ಕುರಿಯ ಬೂಡಿಯಾರು ಗಣೇಶ್ ರೈಗಳ ತೋಟಕ್ಕೆ ಕರೆಂಟ್ ಲೈನ್ ನ ವೈರ್ ಕಡಿದು ಬಿದ್ದು ಬೆಂಕಿ ಹತ್ತಿಕ್ಕೊಂಡು ಉರಿದು ಸುಮಾರು 900ಅಡಿಕೆ ಗಿಡ ಸಂಪೂರ್ಣ ಭಸ್ಮ.. ಸಮಯಕ್ಕೆ ಅಗ್ನಿಶಾಮಕ ದಳದವರು ಬಂದು ಬೆಂಕಿಯನ್ನು ನಂದಿಸಿ ಪರಿಸ್ಥಿತಿ ವಿಕೋಪಕ್ಕೆ ಹೋದಂತೆ ನೋಡಿಕ್ಕೊಂಡರು.
ಇಲ್ಲದಿದ್ದಲ್ಲಿ ಹತ್ತಿರವೇ ಇದ್ದ ಸುಮಾರು 4000ಕೋಳಿಗಳು ಇದ್ದ ಫಾರ್ಮ್ ಕೂಡ ಭಸ್ಮವಾಗುತ್ತಿತ್ತು ಮತ್ತು ಬೆಂಕಿಯು ಹೆಚ್ಚು ವಿಸ್ತಾರವಾಗಿ ಹಬ್ಬಿ ಹತ್ತಿರದ ತೋಟಗಳಿಗೆ ಅಪಾಯವಿತ್ತು.ಅವಘಡದ ಸ್ಥಳಕ್ಕೆ ಸುದ್ದಿ ತಿಳಿದ ಜನರು ಧಾವಿಸಿ ಬರುತ್ತಿದ್ದಾರೆ. ಹೆಚ್ಚಿನ ಮಾಹಿತಿ ತಿಳಿದು ಬಂದಿರುವುದಿಲ್ಲ.