ಪುತ್ತೂರು: ಸಿ ಎ ಅಂತಿಮ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರುವ ಸಾಮೆತ್ತಡ್ಕ ನಿವಾಸಿ ನಾರಾಯಣ ಕುಡ್ವ ,ನಂದಿತಾ ದಂಪತಿಗಳ ಪುತ್ರ ನಿಶ್ಚಯ್ ಕುಡ್ವ ಅವರನ್ನು ಶಾಸಕ ಅಶೋಕ್ ರೈ ಅವರು ಸನ್ಮಾನಿಸಿ ಗೌರವಿಸಿದರು.
ಶಾಸಕರ ಕಚೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಈ ಸನ್ಮಾನ ಕಾರ್ಯ ನಡೆಯಿತು. ಶಾಸಕರು ನಿಶ್ಚಯ್ ಕುಡ್ವ ಅವರನ್ನು ಶಾಲು ಹೊದಿಸಿ ಸನ್ಮಾನಿಸಿ ಸಿ ಎ ಪಾಸಾಗುವ ಮೂಲಕ ಪುತ್ತೂರಿಗೆ ಕೀರ್ತಿ ತಂದಿದ್ದಕ್ಕೆ ಅಭಿನಂದನೆ ಹೇಳಿದರು. ಈ ಸಂದರ್ಭದಲ್ಲಿ ಸಾಮೆತ್ತಡ್ಕ ಕೆ ನಾರಾಯಣ ಕುಡ್ವ ಉಪಸ್ಥಿತರಿದ್ದರು.