Connect with us

ಸ್ಥಳೀಯ

ಸಿ ಎ ಅಂತಿಮ ಪರೀಕ್ಷೆಯಲ್ಲಿ ತೇರ್ಗಡೆ ನಿಶ್ಚಯ್ ಕುಡ್ವಗೆ ಶಾಸಕರಿಂದ ಸನ್ಮಾನ

Published

on

​ಪುತ್ತೂರು: ಸಿ ಎ ಅಂತಿಮ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರುವ ಸಾಮೆತ್ತಡ್ಕ ನಿವಾಸಿ ನಾರಾಯಣ ಕುಡ್ವ ,ನಂದಿತಾ ದಂಪತಿಗಳ ಪುತ್ರ ನಿಶ್ಚಯ್ ಕುಡ್ವ ಅವರನ್ನು ಶಾಸಕ ಅಶೋಕ್ ರೈ ಅವರು ಸನ್ಮಾನಿಸಿ ಗೌರವಿಸಿದರು.

ಶಾಸಕರ ಕಚೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಈ ಸನ್ಮಾನ ಕಾರ್ಯ ನಡೆಯಿತು. ಶಾಸಕರು ನಿಶ್ಚಯ್ ಕುಡ್ವ ಅವರನ್ನು ಶಾಲು ಹೊದಿಸಿ ಸನ್ಮಾನಿಸಿ ಸಿ ಎ ಪಾಸಾಗುವ ಮೂಲಕ ಪುತ್ತೂರಿಗೆ ಕೀರ್ತಿ ತಂದಿದ್ದಕ್ಕೆ ಅಭಿನಂದನೆ ಹೇಳಿದರು. ಈ ಸಂದರ್ಭದಲ್ಲಿ ಸಾಮೆತ್ತಡ್ಕ ಕೆ ನಾರಾಯಣ ಕುಡ್ವ ಉಪಸ್ಥಿತರಿದ್ದರು.

 

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version