ಬಿಗ್ ನ್ಯೂಸ್…!!! ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆ ಬೆನ್ನಲ್ಲೇ… ಬ್ಲಾಕ್ ಕಾಂಗ್ರೆಸ್ ಆಯ್ಕೆ ಪ್ರಕ್ರಿಯೆ..? ಉಪ ಸಮಿತಿಗಳ ಬದಲಾವಣೆ…? ಕಾಂಗ್ರೆಸ್ ಕಾರ್ಯಕರ್ತರಲ್ಲಿ ಭಾರೀ ಸಂಚಲನ…!! ದೇವಸ್ಥಾನ ಸಮಿತಿ ಬದಲಾವಣೆ ಸಾಧ್ಯತೆಯೇ ?
ಪುತ್ತೂರು: ರಾಜ್ಯ ಕಾಂಗ್ರೆಸ್ ಸರಕಾರದ ಆಡಳಿತಕ್ಕೆ ಮೂರು ವರ್ಷ ತುಂಬಿದ್ದು ಪಕ್ಷದ ರಾಜ್ಯಾಧ್ಯಕ್ಷರ ಬದಲಾವಣೆಯ ಹಿನ್ನೆಲೆಯಲ್ಲಿ ನೂತನ ಜಿಲ್ಲಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ. ಅದರ ಬೆನ್ನಲ್ಲಿಯೇ ಎಲ್ಲಾ ಬ್ಲಾಕ್ ಮತ್ತು ಉಪ ಸಮಿತಿಗಳ ಬದಲಾವಣೆ ಆಗುವ ಸಾಧ್ಯತೆ ಇದೆ ಎಂದು ಮೂಲಗಳಿಂದ ತಿಳಿದು ಬಂದಿದೆ. ವಿವಿಧ ಸಂಸ್ಥೆಗಳ ನಾಮ ನಿರ್ದೇಶಕರು ಮತ್ತು ದೇವಸ್ಥಾನದ ಸಮಿತಿಯ ಆಯ್ಕೆಯನ್ನು ಹೊಸದಾಗಿ ನಡೆಯಲಿದೆ ಎಂದು ಹೇಳಲಾಗುತ್ತಿದ್ದು ಯಾರೆಲ್ಲಾ ಬದಲಾವಣೆ ಆಗಲಿದ್ದಾರೆ ಎಂದು ಕಾದು ನೋಡಬೇಕಾಗಿದೆ. ಬದಲಾವಣೆಯ ಪರ್ವದ ಕುರಿತು ಕಾರ್ಯಕರ್ತರ ವಲಯದಲ್ಲಿ ಭಾರೀ ಸಂಚಲನ ಸೃಷ್ಟಿಯಾಗಿದೆ.