Connect with us

ಇತರ

ವಿದ್ಯಾರ್ಥಿಗಳ ಮನವಿಗೆ ಅಸ್ತು ಎಂದ ಡಿಕೆಶಿ ಸರಕಾರ : ನಾಗರ ಪಂಚಮಿಗೆ ಕರಾವಳಿ ಜಿಲ್ಲೆಗಳಲ್ಲಿ ಅಧಿಕೃತ ರಜೆ ಘೋಷಣೆ!

Published

on

ಮಂಗಳೂರು,  : ಕರಾವಳಿ ಜಿಲ್ಲೆಯ ವಿದ್ಯಾರ್ಥಿ ಸಮೂಹದ ಮನವಿಗೆ ರಾಜ್ಯದ ಡಿಕೆಶಿ ನೇತೃತ್ವದ ರಾಜ್ಯ ಸರ್ಕಾರ ಅಧಿಕೃತ ಮುದ್ರೆಯೊತ್ತಿದೆ. ಕರಾವಳಿಯ ಶ್ರದ್ದಾ ಭಕ್ತಿಯ ನಾಗರ ಪಂಚಮಿ ಆಚರಣೆಗೆ ಸರಕಾರ ಕರಾವಳಿ ಜಿಲ್ಲೆಗಳಲ್ಲಿ ಸಾರ್ವತ್ರಿಕ ರಜೆ ಘೋಷಣೆ ಮಾಡಿ ಜಿಲ್ಲಾಧಿಕಾರಿಗಳ ಮೂಲಕ ಆದೇಶಿಸಿದೆ. ಮಂಗಳೂರಿನ ಕಾನೂನು ವಿದ್ಯಾರ್ಥಿಗಳಾದ ಯು ಟಿ ಫರೀದ್, ಕುಡುಪು ಗಗನ್ ಭಾಸ್ಕರ್, ಸಾತ್ವಿಕ್ ಕುಮಾರ್ ಜೈನ್, ಪ್ರಣವ್ ಜಿ ಎಸ್, ನೆಲ್ಲಿತ್ತಾಯ, ಕೆವಿನ್ ಲೋಬೋ ಹಾಗೂ ಪವನ್ ಉಮೇಶ್ ಶೆಟ್ಟಿ ಅವರು ತಿಂಗಳ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವ ಡಾ  ಯು ಟಿ ಖಾದರ್ ಫರೀದ್ ಅವರನ್ನು ಅವರ ನಿವಾಸದಲ್ಲಿ ಭೇಟಿಯಾಗಿ, ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಕ್ತಿಯಿಂದ ಆಚರಿಸುವ ಪವಿತ್ರ ನಾಗರ ಪಂಚಮಿ ಹಬ್ಬದ ಪ್ರಯುಕ್ತ ರಜೆ ಘೋಷಿಸುವಂತೆ ಮನವಿ ಮಾಡಿದ್ದರು. ವಿದ್ಯಾರ್ಥಿಗಳ ಮನವಿಯನ್ನು ಸಚಿವ ಖಾದರ್ ಅವರು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರ ಗಮನಕ್ಕೆ ತಂದಿದ್ದರು. ಇದೀಗ ವಿದ್ಯಾರ್ಥಿ ಸಮೂಹದ ಮನವಿಗೆ ಅಸ್ತು ಎಂದಿರುವ ಸಿಎಂ ಅವರು ಈ ಬಗ್ಗೆ ಕರಾವಳಿ ಜಿಲ್ಲೆಗಳ ಜಿಲ್ಲಾಧಿಕಾರಿಗಳ ರಜೆ ಘೋಷಿಸುವ ಅಧಿಕಾರ ನೀಡಿ ಆದೇಶ ನೀಡಿರುವ ಹಿನ್ನಲೆಯಲ್ಲಿ ಭಾನುವಾರ ದ ಕ ಹಾಗೂ ಜಿಲ್ಲೆಗಳ ಜಿಲ್ಲಾಧಿಕಾರಿಗಳು ನಾಗರ ಪಂಚಮಿ ಆಚರಿಸುವ ಆಗಸ್ಟ್ 17 ರಂದು ಸೋಮವಾರ ಸಾರ್ವತ್ರಿಕ ರಜೆ ಘೋಷಿಸಿ ಆದೇಶ ಹೊರಡಿಸಿದ್ದಾರೆ.

 
 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version