ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಸ್ಥಳೀಯ

ಲಾಕ್ ಡೌನ್ ಬಳಿಕ ನಿಂತುಹೋಗಿದ್ದ ಅಳಿಕೆ ಬಸ್ ಸೇವೆ ಸಂಚಾರ ಪುನರಾರಂಭಿಸಿದ ಶಾಸಕ ಅಶೋಕ್ ರೈ

Published

on

ಪುತ್ತೂರು: ಕಳೆದ ಕೊರೊನಾ ಲಾಕ್‌ಡೌನ್ ಬಳಿಕ ನಿಂತು ಹೋಗಿದ್ದ ಪುತ್ತೂರು ಅಳಿಕೆ ಕೆಎಸ್‌ಆರ್‌ಟಿಸಿ ಬಸ್ ಸಂಚಾರವನ್ನು ಪುತ್ತೂರು ಶಾಸಕರಾದ ಅಶೋಕ್ ರಐ ಯವರು ಪುನರಾರಂಭಿಸುವಂತೆ ಸೂಚನೆ ನೀಡಿದ್ದು ಇಂದಿನಿಂದ ಬಸ್ ಸೇವೆ ಆರಂಭಗೊಂಡಿದೆ.

 

ಬಸ್ ವ್ಯವಸ್ಥೆ ಇಲ್ಲದೆ ಅಳಿಕೆ ಗ್ರಾಮಸ್ಥರು ತೀವ್ರ ತೊಂದರೆಯನ್ನು ಅನುಭವಿಸುತ್ತಿದ್ದರು. ಕಳೆದ ವಾರದ ಹಿಂದೆ ಅಳಿಕೆ ಗ್ರಾಮಸ್ಥರು ಶಾಸಕ ಅಶೋಕ್ ರೈ ಬಳಿ ಬಂದು ಮನವಿ ಮಾಡಿ ಬಸ್ ಸಂಚಾರ ಇಲ್ಲದೆ ಕೂಲಿ ಕಾರ್ಮಿಕರು, ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂದು ತಿಳಿಸಿದ್ದರು. ತಕ್ಷಣವೇ ಕೆಎಸ್‌ಆರ್‌ಟಿಸಿ ಅದಿಕಾರಿಗೆ ಕರೆ ಮಾಡಿ ವಾರದೊಳಗೆ ಬಸ್ ವ್ಯವಸ್ಥೆ ಪುನರಾರಂಭಿಸುವಂತೆ ಸೂಚನೆಯನ್ನು ನೀಡಿದ್ದರು.

 

ಟೈಮಿಂಗ್ಸ್

ಬೆಳಿಗ್ಗೆ 10.20 ವಿಟ್ಲದಿಂದ ಅಳಿಕೆಗೆ, 10.35 ಅಳಿಕೆಯಿಂದ ವಿಟ್ಲಕ್ಕೆ ಮಧ್ಯಾಹ್ನ 1.25 ಕ್ಕೆ ಪುತ್ತೂರಿನಿಂದ ಅಳಿಕೆಗೆ ಹಾಗೂ 2.15 ಕ್ಕೆ ಅಳಿಕೆಯಿಂದ ಪುತ್ತೂರಿಗೆ ಬಸ್ ಸೇವೆ ಆರಂಭಗೊಂಡಿದ್ದು ಇದರ ಪ್ರಯೋಜನಪಡೆದುಕೊಳ್ಳುವಂತೆ ಶಾಸಕರು ಮನವಿ ಮಾಡಿದ್ದಾರೆ.

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version