Published
1 year agoon
By
Akkare News
ನಿನ್ನೆ ಸೆ.೨೨ ಬೈಕ್ ಕದ್ದ ಕಳ್ಳ, ಅದೇ ಕಳ್ಳ ಇಂದು ಮತ್ತೆ ಅರಂತೋಡಿನಲ್ಲಿ ಕಳ್ಳತನಕ್ಕೆ ವಿಫಲ ಯತ್ನ ನಡೆಸಿ ಸಿಕ್ಕಿಹಾಕಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.
ಸೆ. 22 ರಂದು ಬೈಕ್ ನಲ್ಲಿ ಹೋಗುತ್ತಿದ್ದ ಶಂಕಿತ ಕಳ್ಳನನ್ನು ಕನಕಮಜಲು ಪರಿಸರದಲ್ಲಿ ಸ್ಥಳೀಯರು ತಡೆದು ನಿಲ್ಲಿಸಿ ವಿಚಾರಿಸಿದಾಗ ಆತ ಬೈಕ್ ಕಳ್ಳನೆಂದು ತಿಳಿದಿದ್ದು, ಬಳಿಕ ಸುಳ್ಯ ಪೊಲೀಸರಿಗೆ ಮಾಹಿತಿ ನೀಡಿ ಪೊಲೀಸರಿಗೆ ಒಪ್ಪಿಸಿದ್ದರು. ಆದರೆ ಇಂದು ಮತ್ತೆ ಅದೇ ತನ್ನ ಹಳೇ ಚಾಳಿಯನ್ನು ತೋರಿಸಿ ಅರಂತೋಡಿ ನಲ್ಲಿ ರೆಡ್ ಹ್ಯಾಂಡ್ ಆಗಿ ಸ್ಥಳೀಯರು ಹಿಡಿದಿದ್ದಾರೆ.
.