Published
5 months agoon
By
Akkare News
ಪುತ್ತೂರು: ಅಶೋಕ ಜನಮನ 2025 ವಸ್ತ್ರವಿತರಣೆ ಕಾರ್ಯಕ್ರಮದ ಬಗ್ಗೆ ಕುರಿಯ ಗ್ರಾಮದ ಪಾಲಿಂಜೆ ಶ್ರಿ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ನಡೆಯಿತು. ಅಶೋಕ ಜನಮನ ಕಾರ್ಯಕ್ರಮದ ಬಗ್ಗೆ ಟ್ರಸ್ಟ್ ನ ಕಾರ್ಯಕಾರಿಣಿ ಸಮಿತಿಯ ಸದಸ್ಯರಾದ ನಿಹಾಲ್ ಪಿ ಶೆಟ್ಟಿ ಯವರು ಮಾತನಾಡಿ ದೀಪಾವಳಿ ಪ್ರಯುಕ್ತ ನಡೆಯುವ ಕಾರ್ಯಕ್ರಮಕ್ಕೆ ತಾವೆಲ್ಲರೂ ಭಾಗವಹಿಸಬೇಕು ಬೆಳ್ಳಗೆ ಕಾರ್ಯಕ್ರಮ ಉದ್ಘಾಟನೆ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಮಧ್ಯಾಹ್ನ ಸಹ ಭೋಜನ ಮೂರು ಗಂಟೆಗೆ ನಂತರ ದೋಸೆ ಮೇಳ ನಡೆಯಲಿದೆ.


ಆಗಮಿಸಿದ ಎಲ್ಲರಿಗೂ ದೀಪಾವಳಿಯ ಪ್ರಯುಕ್ತ ವಸ್ತ್ರ ವಿತರಣೆ ಕಾರ್ಯಕ್ರಮ ನಡೆಯಲಿದೆ. ಎಂದು ತಿಳಿಸಿದರು ಈ ಸಂದರ್ಭದಲ್ಲಿ ಪ್ರಮುಖರಾದ ಪಾಲಿಂಜೆ ದೇವಸ್ಥಾನದ ಅಧ್ಯಕ್ಷರಾದ ವಿಶ್ವಜಿತ್ ಅಮ್ಮುಂಜ ,ಸದಸ್ಯರಾದ ನಿರಂಜನ್ ಶೆಟ್ಟಿ,ನಾರಾಯಣ ಮಣಿಯಾಣಿ, ಪೂರ್ಣಿಮಾ ,ನಳಿನಾಕ್ಷಿ ,ರಮೇಶ್ ಅಂಗಿಂತಾಯ, ರಾಮಣ್ಣ ನಾಯ್ಕ್ ಅಮ್ಮುಂಜ ,ನೇಮಕ್ಷ ಸುವರ್ಣ ಅಮ್ಮುಂಜ ,ರೈ ಎಸ್ಟೇಟ್ಸ್ ಟ್ರಸ್ಟ್ ಸದ್ಯರು ಉದ್ಯಮಿಗಳಾದ ರಮೇಶ್ ರೈ ಡಿಂಬ್ರಿ, ಉದ್ಯಮಿ ಶಿವರಾಮ ಆಳ್ವ, ಸನತ್ ರೈ ಎಳ್ನಾಡುಗುತು, ಟ್ರಸ್ಟ್ ಸದಸ್ಯರಾದ ರೇಖಾನಾಥ್ ರೈ , ಬ್ರಿಜೇಶ್ ಶೆಟ್ಟಿ , ಸುಮಿತ್ರ ಅಮ್ಮುಂಜ ಉಪಸ್ಥಿತರಿದ್ದರು.




